
ಕಾರ್ಕಳ : ಕಾರ್ಕಳ ತಾಲೂಕು ಬೈಲೂರು ಗ್ರಾಮದ ಕೌಡೂರು ನಿವಾಸಿಗಳಾದ ಶ್ರೀಮತಿ ವೀಣಾ ಮತ್ತು ಶ್ರೀ ಸುಧಾಕರ ಆಚಾರ್ಯರ ಪುತ್ರ ಸಾಗರ್ ಆಚಾರ್ಯ ಅವರು ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಬೆಂಗಳೂರು ಕೇಂದ್ರದಲ್ಲಿ ಮಿಲಿಟರಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಅರುಣಾಚಲ ಪ್ರದೇಶಕ್ಕೆ ನಿಯೋಜನೆಯಾಗಿದ್ದಾರೆ. ಅವರು ನಾಡಿಗಾಗಿ ಸೇವೆ ಸಲ್ಲಿಸಲು ಪಾದಾರ್ಪಣೆ ಮಾಡುತ್ತಿದ್ದಾರೆ.
ಸಾಗರ್ ಆಚಾರ್ಯರ ಈ ಸಾಧನೆಗೆ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ನೀರೆ-ಬೈಲೂರು ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರ ಭವಿಷ್ಯ ಉಜ್ವಲವಾಗಿರಲಿ ಹಾಗೂ ಶ್ರೀ ವಿಶ್ವಕರ್ಮ ಕಾಳಿಕಾಂಬೆಯ ಆಶೀರ್ವಾದ ಸದಾ ಅವರೊಂದಿಗೆ ಇರಲಿ ಎಂಬ ಶುಭಾಶಯಗಳನ್ನೂ ಸಂಘದವರು ವ್ಯಕ್ತಪಡಿಸಿದ್ದಾರೆ.