ನಟ ಅನಿರುದ್ಧ್ ವಿಷಾದ: “ವಿಷ್ಣುವರ್ಧನ್ ಸ್ಮಾರಕ ಧ್ವಂಸ ನಮ್ಮ ಕುಟುಂಬಕ್ಕೂ ಬೇಸರ ತಂದಿದೆ”

Date:

spot_img

ಬೆಂಗಳೂರು: ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರಿಗೆ ಆಘಾತ ತಂದಿರುವ ಅಭಿಮಾನ್ ಸ್ಟುಡಿಯೋದಲ್ಲಿನ ಸಮಾಧಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಹಾಗೂ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಸಮಾಧಿ ತೆರವುಗೊಳಿಸಿರುವ ನಿರ್ಧಾರ ನಮ್ಮದಲ್ಲ, ಇದು ನಮಗೂ ಅತೀವ ಬೇಸರ ತಂದಿದೆ’ ಎಂದು ಹೇಳುವ ಮೂಲಕ ಕುಟುಂಬದ ನಿಲುವನ್ನು ಅವರು ತಿಳಿಸಿದ್ದಾರೆ.

ಸುಳ್ಳು ಆರೋಪ: ಅನಿರುದ್ಧ್ ಕಿಡಿ

ಸಮಾಧಿ ಧ್ವಂಸದ ನಂತರ ಅಭಿಮಾನಿಗಳಿಂದ ಕುಟುಂಬದ ವಿರುದ್ಧ ಕೇಳಿಬಂದ ಟೀಕೆಗಳಿಗೆ ಅನಿರುದ್ಧ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಸಹಕರಿಸಿಲ್ಲ ಎಂಬುದು ಸುಳ್ಳು ಆರೋಪ. ಈ ವಿಷಯದಲ್ಲಿ ನಮ್ಮನ್ನು ಅನಾವಶ್ಯಕವಾಗಿ ವಿಲನ್ ಮಾಡುವ ಪ್ರಯತ್ನ ಸರಿಯಲ್ಲ’ ಎಂದು ಅವರು ಖಂಡಿಸಿದ್ದಾರೆ. ‘ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಆಗಬೇಕೆಂದು ನಾವು ಹಲವಾರು ಸರ್ಕಾರಿ ಕಚೇರಿಗಳನ್ನು ಅಲೆದಿದ್ದೇವೆ ಮತ್ತು ಸಂಬಂಧಪಟ್ಟವರನ್ನು ಭೇಟಿ ಮಾಡಿದ್ದೇವೆ. ಈ ಎಲ್ಲಾ ಪ್ರಯತ್ನಗಳ ಬಗ್ಗೆ ಅರಿವಿಲ್ಲದೆ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ’ ಎಂದು ಅನಿರುದ್ಧ್ ತಿಳಿಸಿದರು.

ಮೈಸೂರು ಸ್ಮಾರಕದ ಹಿಂದಿನ ಕಥೆ

ಮೈಸೂರಿನಲ್ಲಿ ನಿರ್ಮಾಣವಾಗಿರುವ ಭವ್ಯ ಸ್ಮಾರಕದ ಕುರಿತು ಮಾತನಾಡಿದ ಅನಿರುದ್ಧ್, ‘ಅಭಿಮಾನಿಗಳಿಗೆ ಬೆಂಗಳೂರಿನಲ್ಲಿ ಸ್ಮಾರಕ ಆಗಬೇಕೆಂಬ ಆಸೆ ಇತ್ತು. ನಮಗೂ ಅದೇ ಆಸೆ ಇತ್ತು. ಆದರೆ, ಇಲ್ಲಿ ಸ್ಮಾರಕಕ್ಕೆ ಜಾಗ ಸಿಗುವುದು ಅಸಾಧ್ಯವಾದಾಗ, ನಾವು ಮೈಸೂರಿನಲ್ಲಿ ಅದನ್ನು ನಿರ್ಮಿಸಲು ಮುಂದಾದೆವು. ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗಿರುವುದರ ಹಿಂದಿನ ಶ್ರಮವನ್ನು ಜನರು ಗಮನಿಸಬೇಕು’ ಎಂದು ಮನವಿ ಮಾಡಿದರು. ‘ಅಷ್ಟು ದೊಡ್ಡ ಸ್ಮಾರಕ ಸುಮ್ಮನೆ ನಿರ್ಮಾಣವಾಗಿಲ್ಲ. ಅದರ ಹಿಂದಿನ ನಮ್ಮ ಪರಿಶ್ರಮವನ್ನು ವ್ಯಾಪಾರೀಕರಣ ಎಂದು ಆರೋಪಿಸುವುದು ನೋವುಂಟು ಮಾಡುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬಿರುಕು ಮೂಡಿಸುವವರ ಪತ್ತೆಗೆ ಮನವಿ

ಅಭಿಮಾನಿಗಳೊಂದಿಗೆ ಕುಟುಂಬದ ಸಂಬಂಧದ ಬಗ್ಗೆ ಮಾತನಾಡಿದ ಅನಿರುದ್ಧ್, ‘ಅಭಿಮಾನಿಗಳು ನಮ್ಮ ಶಕ್ತಿ. ನಾವು ಹಲವು ಬಾರಿ ಅವರ ಬಳಿ ಬಂದು ನಮ್ಮ ಜೊತೆ ಸೇರಿಕೊಳ್ಳಿ ಎಂದು ಕೇಳಿಕೊಂಡಿದ್ದೇವೆ. ಆದರೆ, ಕೆಲವರು ನಮ್ಮ ಮತ್ತು ಅಭಿಮಾನಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳು ಯಾರೆಂದು ಮೊದಲು ಪತ್ತೆ ಹಚ್ಚಬೇಕು’ ಎಂದು ಅವರು ಹೇಳಿದರು. ‘ನಾವು ಯಾವುದೇ ಕಾರಣಕ್ಕೂ ಅಭಿಮಾನ್ ಸ್ಟುಡಿಯೋದಲ್ಲಿ ಪೂಜೆ ಮಾಡಬಾರದು ಎಂದು ಹೇಳಿಲ್ಲ. ಅಭಿಮಾನಿಗಳ ಭಾವನೆಗಳಿಗೆ ನಾವು ಸದಾ ಬೆಲೆ ಕೊಡುತ್ತೇವೆ’ ಎಂದು ಅನಿರುದ್ಧ್ ಭರವಸೆ ನೀಡಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುರತ್ಕಲ್‌ನಲ್ಲಿ ಅಣ್ಣನಿಂದ ತಮ್ಮನ ಹತ್ಯೆ; ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುರತ್ಕಲ್‌ನ ಚೊಕ್ಕಬೆಟ್ಟಿನಲ್ಲಿ ಸ್ವಂತ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ ಶಿವಪ್ರಸಾದ್ ರಾವ್ ಶ್ರದ್ಧಾಂಜಲಿ ಸಭೆ

ಕಾರ್ಕಳದಲ್ಲಿ ದಕ್ಷ ಕಂದಾಯ ನಿರೀಕ್ಷಕ ಶಿವಪ್ರಸಾದ್ ವಿ. ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.