spot_img

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ವಿಜಯೇಂದ್ರ ವಿರುದ್ಧ ಯತ್ನಾಳ್‌ ಕಿಡಿ; ಹೊಸ ಪಕ್ಷದ ಸುಳಿವು

Date:

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಬೆಳವಣಿಗೆಯೊಂದರಲ್ಲಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಮತ್ತೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕೆಂಡಕಾರಿದ್ದಾರೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದರೆ, ತಾವು ಹೊಸ ಪಕ್ಷವನ್ನು ಸ್ಥಾಪಿಸುವುದು ನಿಶ್ಚಿತ ಎಂದು ಯತ್ನಾಳ್‌ ಸ್ಪಷ್ಟಪಡಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಯತ್ನಾಳ್‌, ವಿಜಯೇಂದ್ರ ಅವರು ಕೇವಲ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯುವುದಲ್ಲದೆ, ಬೇಕಿದ್ದರೆ ಅಮೆರಿಕ ಅಧ್ಯಕ್ಷರಾಗಿಯೂ ಮುಂದುವರಿಯಬಹುದು ಎಂದು ವ್ಯಂಗ್ಯವಾಡಿದರು. ತಮ್ಮನ್ನು ಪಕ್ಷದಿಂದ ಉಚ್ಚಾಟಿಸಿದ ನಿರ್ಧಾರದ ಬಗ್ಗೆ ವರಿಷ್ಠರಿಗೂ ಪಶ್ಚಾತ್ತಾಪವಿದೆ. ಇದು ಒಂದು ದೊಡ್ಡ “ಬ್ಲಿಂಡರ್‌” ನಿರ್ಧಾರ ಎಂದು ಕೇಂದ್ರದ ಸಚಿವರೊಬ್ಬರು ತಮ್ಮಲ್ಲಿ ಹೇಳಿರುವುದಾಗಿ ಯತ್ನಾಳ್‌ ತಿಳಿಸಿದ್ದಾರೆ.

ತಮ್ಮನ್ನು ಬಿಜೆಪಿಗೆ ಮತ್ತೆ ಸೇರಿಸಿಕೊಳ್ಳುವ ಕುರಿತು ಮೂರನೇ ಬಾರಿಗೆ ಸಮಾಲೋಚನೆ ನಡೆಯುತ್ತಿದೆ ಎಂದು ಹೇಳಿದ ಯತ್ನಾಳ್‌, ಇನ್ನೂ 3 ವರ್ಷಗಳ ಕಾಲ ತಾವು ಶಾಸಕರಾಗಿ ಮುಂದುವರಿಯುವುದಾಗಿ ತಿಳಿಸಿದರು. ವಿಜಯೇಂದ್ರ ಅವರು ತಮ್ಮ ಸ್ಥಾನದಲ್ಲಿ ಮುಂದುವರಿದರೆ ಹೊಸ ಪಕ್ಷವನ್ನು ಕಟ್ಟುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪುನರುಚ್ಚರಿಸಿದರು.

ಯತ್ನಾಳ್‌ ಪ್ರಕಾರ, ತಾವು ಸ್ಥಾಪಿಸುವ ಹೊಸ ಪಕ್ಷಕ್ಕೆ ಬಿಜೆಪಿಯಿಂದ ಮಾತ್ರವಲ್ಲದೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಂದಲೂ ಅನೇಕರು ಸೇರಲು ಸಿದ್ಧರಿದ್ದಾರೆ. ಹಿಂದುತ್ವ ಮತ್ತು ಅಭಿವೃದ್ಧಿಯ ಆಧಾರದ ಮೇಲೆ ಈ ಹೊಸ ಪಕ್ಷವನ್ನು ರೂಪಿಸಲಾಗುವುದು ಎಂದು ಅವರು ವಿವರಿಸಿದರು. ಸದ್ಯಕ್ಕೆ ಬಿಜೆಪಿಯಲ್ಲಿ ಯಾವ ಹಿರಿಯ ನಾಯಕರೂ ಸಹ ವಿಜಯೇಂದ್ರ ಪರವಾಗಿಲ್ಲ. ವಿಜಯೇಂದ್ರ ಅವರು ಪ್ರಾಮಾಣಿಕ ಕಾರ್ಯಕರ್ತರನ್ನು ದೂರವಿಟ್ಟು, ಸುಳ್ಳು ಹೇಳುವವರ ಗುಂಪೊಂದನ್ನು ಕಟ್ಟಿಕೊಂಡಿದ್ದಾರೆ ಎಂದು ಯತ್ನಾಳ್‌ ತೀವ್ರ ಆರೋಪ ಮಾಡಿದರು.

ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ವಿಜಯೇಂದ್ರ ಅವರನ್ನು ಭೇಟಿಯಾದಾಗ ನಡೆದ ಘಟನೆಯನ್ನೂ ಯತ್ನಾಳ್‌ ವಿವರಿಸಿದರು. ಪಕ್ಷದಲ್ಲಿ ಎಲ್ಲವೂ ಸುಸ್ಥಿತಿಯಲ್ಲಿದೆ, ತಮ್ಮ (ಯತ್ನಾಳ್‌) ಉಚ್ಚಾಟನೆಯ ನಂತರ ಸಂಘಟನೆ ಬಲಗೊಂಡಿದೆ ಎಂದು ವಿಜಯೇಂದ್ರ ಅವರು ಶಾ ಅವರಿಗೆ ಹೇಳಿದ್ದಾರೆ. ಆದರೆ, ವಿಜಯೇಂದ್ರ ಅವರ ಈ ಹೇಳಿಕೆಯನ್ನು ಒಪ್ಪದ ಅಮಿತ್‌ ಶಾ ಅವರು, ಅರ್ಧ ಗಂಟೆಗಳ ಕಾಲ ವಿಜಯೇಂದ್ರ ಅವರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ ಎಂದು ಯತ್ನಾಳ್‌ ಬಹಿರಂಗಪಡಿಸಿದರು. ಈ ಘಟನೆ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಸೈಬರ್ ಸೆಕ್ಯೂರಿಟಿ ಬಗೆಗಿನ ಸೆಂಟರ್ ಆಫ್ ಎಕ್ಸಲೆನ್ಸ್

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಅತ್ಯಾಧುನಿಕ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ಜಪಾನ್ ನ ವಿಲ್ ಡಿಸೈನ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಪಾಸ್‌ವರ್ಡ್ ಇಲ್ಲದೆ ಇನ್​ಸ್ಟಾಗ್ರಾಮ್‌ಗೆ ಲಾಗಿನ್ ಆಗುವುದು ಹೇಗೆ? ಇಲ್ಲಿದೆ ಸುಲಭ ಟ್ರಿಕ್

ಪದೇ ಪದೇ ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗುವ ತಾಪತ್ರಯದಿಂದ ಮುಕ್ತಿ ನೀಡಲು, ಇನ್​ಸ್ಟಾಗ್ರಾಮ್ ಒಂದು ಉಪಯುಕ್ತ ಆಯ್ಕೆಯನ್ನು ಹೊಂದಿದೆ.

ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ರಜತ ಪೂರ್ತಿ: ಲೋಕ ಕಲ್ಯಾಣಾರ್ಥ ದಶಾವತಾರ ಮಂತ್ರ ಹೋಮದ ಆಯೋಜನೆ

ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘ ಉಡುಪಿ ಇವರ ರಜತ ಪೂರ್ತಿ ಸಂಭ್ರಮದ ಸಂದರ್ಭದಲ್ಲಿ ಮನೆ , ಮಠ , ಮಂದಿರ , ದೇವಸ್ಥಾನದಲ್ಲಿ ನಮ್ಮ ಮನೆ , ಗೋವು , ನಮ್ಮ ಗ್ರಾಮ , ನಮ್ಮ ರಾಜ್ಯ , ರಾಷ್ಟ್ರದ ರಕ್ಷಣೆಗಾಗಿ ದಶಾವತಾರ ಮಂತ್ರ ಹೋಮವನ್ನು ಹಮ್ಮಿಕೊಳ್ಳಲಾಗಿದೆ.

ಹಿರಿಯಡ್ಕದ ಕೆಪಿಎಸ್ ತಂಡಕ್ಕೆ ಥ್ರೋ ಬಾಲ್‌ನಲ್ಲಿ ಪ್ರಥಮ ಸ್ಥಾನ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕ್ರೀಡಾ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ತೋರಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಹಿರಿಯಡ್ಕದ ವಿದ್ಯಾರ್ಥಿಗಳು, ಉಡುಪಿ ತಾಲ್ಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.