spot_img

ಬಜಗೋಳಿಯಲ್ಲಿ UPI ಮಿನಿ ಎಟಿಎಂ ಕೇಂದ್ರ ಆರಂಭ: ವಕ್ರಾಂಗಿ ಸಂಸ್ಥೆಯಿಂದ ಡಿಜಿಟಲ್ ಹಣಕಾಸು ಸೇವೆಗೆ ಹೊಸ ಹೆಜ್ಜೆ

Date:

ಬಜಗೋಳಿ: ಭಾನುವಾರದಂದು ಮುಂಬೈ ಮೂಲದ ವಕ್ರಾಂಗಿ ಸಂಸ್ಥೆಯ ವಿನೂತನ ತಂತ್ರಜ್ಞಾನಗಳನ್ನೊಳಗೊಂಡ UPI MINI ATM ಕೇಂದ್ರವು ಪ್ರಶಾಂತ್ ಜೈನ್ ರವರ ಮಾಲಕತ್ವದಲ್ಲಿ ಬಜಗೋಳಿ ಬಾಹುಬಲಿ ಜನರಲ್ ಸ್ಟೋರ್ಸ್ ನಲ್ಲಿ ಶುಭಾರಂಭಗೊಂಡಿತು.

ನೂತನ ATM ಕೇಂದ್ರದ ಉದ್ಘಾಟನೆಯನ್ನು ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶ್ರುತಿ ಡಿ. ಅತಿಕಾರಿ ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಡಾರು ಗ್ರಾಮ ಪಂಚಾಯತ್ ಸದಸ್ಯರುಗಳಾದ ರಜತ್ ರಾಮ್ ಮೋಹನ್ ,ಸುರೇಶ್ ಶೆಟ್ಟಿ, ಪ್ರಶಾಂತ್ ಪೂಜಾರಿ, ಉದ್ಯಮಿಗಳಾದ ಪವನಂಜಯ ಜೈನ್, ಮಹೇಶ್ ವರ್ಮ,ಅಮಿತ್ ಜೈನ್, ರಾಮಕೃಷ್ಣ ನಾಯಕ್, ಸಂತೋಷ್, ಜಿನೇಂದ್ರ ಜೈನ್, ಸುರೇಶ್ ದೇವಾಡಿಗ, ಪೋಸ್ಟ್ ಮ್ಯಾನ್ ದಿವಾಕರ್, ಸಂಸ್ಥೆಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಖ್ಯಸ್ಥರಾದ ಅಭಿಜಿತ್ ಜೈನ್ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾದ ಪ್ರವೀಣ್ ಅಳದಂಗಡಿಯವರು ಭಾಗವಹಿಸಿ ದೀಪವನ್ನು ಬೆಳಗಿಸಿ ನೂತನ UPI ATM ಕೇಂದ್ರಕ್ಕೆ ಶುಭಾಶಂಸನೆಗೈದರು. ಕಾರ್ಕಳ ಟೈಗರ್ಸ್ ನ ಮುಖ್ಯಸ್ಥರಾದ ಬೋಳ ಪ್ರಶಾಂತ್ ಕಾಮತ್ ರವರು ನೂತನ ATM ಕೇಂದ್ರಕ್ಕೆ ಭೇಟಿ ನೀಡಿ ಶುಭಕೋರಿದರು. ಈ ಸಂದರ್ಭದಲ್ಲಿ ಬಾಹುಬಲಿ ಜನರಲ್ ಸ್ಟೋರ್ಸ್ ನ ಮುಖ್ಯಸ್ಥರಾದ ಕಾಂಚನ ಮಾಲಾ ,ಪ್ರಕಾಶ್ ಜೈನ್, ಪ್ರವೀಣ್ ಜೈನ್, ಹರ್ಷಿಣಿ ಪ್ರಕಾಶ್ ಜೈನ್, ದೀಪಾ ಪ್ರಶಾಂತ್ ಜೈನ್ ಮತ್ತು ಊರ-ಪರ ಊರ ಗ್ರಾಹಕ ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯಲ್ಲಿ ವಕ್ರಾಂಗಿ ಸಂಸ್ಥೆಯ ಪ್ರಪ್ರಥಮ UPI MINI ATM ಕೇಂದ್ರವು ಇದಾಗಿದ್ದು ನೂತನ ATM ಕೇಂದ್ರದಲ್ಲಿ ಎಲ್ಲಾ ಬ್ಯಾಂಕಿನ ಕಾರ್ಡ್ ಗಳ ಮೂಲಕ ನಗದನ್ನು ಪಡೆಯಬಹುದಾದ ವ್ಯವಸ್ಥೆಯ ಜೊತೆಗೆ ಅತ್ಯಂತ ಸರಳ ರೀತಿಯಲ್ಲಿ ತಮ್ಮ ಮೊಬೈಲ್ ನಿಂದ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಸ್ಕ್ಯಾನರ್ ಬಳಸಿ ನಗದನ್ನು ಪಡೆಯುವ ವಿನೂತನ ವ್ಯವಸ್ಥೆಯು ಇರಲಿದ್ದು ನೂತನ ಸುಸಜ್ಜಿತ ಕೇಂದ್ರವು ಸಾರ್ವಜನಿಕ ಸೇವೆಗೆ ದಿನದ 24 ಗಂಟೆಯೂ ತೆರೆದಿರುತ್ತದೆ. ಬಜಗೋಳಿ ಮತ್ತು ಆಸುಪಾಸಿನ ಗ್ರಾಮಗಳ ಸಾರ್ವಜನಿಕ ಬಂಧುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸುತ್ತಾ ಪ್ರಥಮವಾಗಿ ಬಜಗೋಳಿಯಲ್ಲಿ ಪ್ರಾರಂಭಗೊಂಡ ಅತ್ಯಾಧುನಿಕ ವ್ಯವಸ್ಥೆಯನ್ನೊಳಗೊಂಡ ವಕ್ರಂಗಿ UPI ATM ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ವಿಸ್ತರಿಸಲಿದ್ದೇವೆಂದು ಜಿಲ್ಲಾ ಮುಖ್ಯಸ್ಥರಾಗಿರುವ ಅಭಿಜಿತ್ ಜೈನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹೊಸ ನಾಯಕನತ್ತ ಭಾರತೀಯ ಕ್ರಿಕೆಟ್: ರೋಹಿತ್ ಶರ್ಮಾ ಯುಗಾಂತ್ಯ?

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಹೊಸ ನಾಯಕನ ನೇಮಕ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಕ್ರಿಕೆಟ್ ಮೈದಾನದಲ್ಲಿ ಸ್ಫೋಟ: ಕ್ರೀಡಾ ಪಂದ್ಯದ ನೆಪದಲ್ಲಿ ಭಯೋತ್ಪಾದಕರ ದಾಳಿ

ಪಂದ್ಯ ನಡೆಯುತ್ತಿದ್ದಾಗ ಮೈದಾನದಲ್ಲಿ ಅಳವಡಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡಿದ್ದು, ಇದರ ಪರಿಣಾಮವಾಗಿ ಗಂಭೀರ ಅನಾಹುತ ಸಂಭವಿಸಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಆತ್ರಾಡಿಯಲ್ಲಿ ಪೌಷ್ಟಿಕ ಆಹಾರದ ಕುರಿತು ಜನಜಾಗೃತಿ: ಡಾ. ಅನ್ವಿತಾ ಅವರಿಂದ ಮಹತ್ವದ ಮಾಹಿತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್( ರಿ. ) ಉಡುಪಿ ಇವರಿಂದ ಪೌಷ್ಟಿಕ ಆಹಾರ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ದಿನ ವಿಶೇಷ – ಅಂತಾರಾಷ್ಟ್ರೀಯ ಸಾಕ್ಷರತಾ ದಿನ

ಜಗತ್ತಿನೆಲ್ಲೆಡೆ ಜ್ಞಾನದ ದೀಪವನ್ನುರುಸಿ, ಅಂಧಕಾರವನ್ನು ದೂರ ಮಾಡಲು ಒಂದು ಪ್ರತೀಕದ ದಿನ. ಇದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ