spot_img

ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಂದ ₹3,000ಕ್ಕೆ ವಾರ್ಷಿಕ ಪಾಸ್ ಘೋಷಣೆ

Date:

ನವದೆಹಲಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸದಾಗಿ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸಿದೆ. ಆಗಸ್ಟ್ 15, 2025ರಿಂದ ಜಾರಿಗೆ ಬರುವ ಈ ಹೊಸ ಯೋಜನೆಯು ಖಾಸಗಿ ವಾಹನಗಳಿಗೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

₹3,000ಕ್ಕೆ 1 ವರ್ಷ ಅಥವಾ 200 ಟ್ರಿಪ್‌ಗಳು!
ಈ ಪಾಸ್ ನಿಂದ ಕಾರು, ಜೀಪ್ ಹಾಗೂ ವ್ಯಾನ್ ಮಾದರಿಯ ಖಾಸಗಿ ವಾಹನಗಳು ದೇಶದಾದ್ಯಂತ ಟೋಲ್ ಪ್ಲಾಜಾಗಳಲ್ಲಿ ತೊಂದರೆರಹಿತವಾಗಿ ಸಂಚರಿಸಬಹುದು. ರೂ.3,000 ಪಾವತಿಸಿದರೆ ಒಂದು ವರ್ಷ ಅಥವಾ 200 ಬಾರಿ ಪ್ರಯಾಣ (ಯಾವುದು ಮೊದಲು ಸಾದ್ಯವಾಗುತ್ತದೆಯೋ ಅದು) ಮಾಡಲು ಅವಕಾಶ ದೊರೆಯಲಿದೆ.

ಪ್ರಯೋಜನಗಳು :

  • ಈ ಪಾಸ್ ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ, ವೇಗದ, ದಟ್ಟಣೆ ರಹಿತ ಪ್ರಯಾಣಕ್ಕೆ ಸಹಾಯ ಮಾಡಲಿದೆ.
  • ಇದರ ಮೂಲಕ ಟೋಲ್ ಪ್ಲಾಜಾಗಳಲ್ಲಿ ಕಾಯುವಿಕೆ ಕಡಿಮೆಯಾಗುವುದು, ಪಾವತಿ ವಿವಾದಗಳು ಮತ್ತು ಸಮಯದ ನಷ್ಟ ತಪ್ಪುವ ಸಾಧ್ಯತೆ ಇದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಎಲ್ಲಿ ಲಭ್ಯ?
ಪಾಸ್ ಸಕ್ರಿಯಗೊಳಿಸಲು ಹಾಗೂ ನವೀಕರಿಸಲು NHAI, MoRTH ವೆಬ್‌ಸೈಟ್‌ಗಳು ಮತ್ತು ರಾಜಮಾರ್ಗ್ ಯಾತ್ರಾ ಅಪ್ಲಿಕೇಶನ್ ಮೂಲಕ ಶೀಘ್ರದಲ್ಲೇ ಲಿಂಕ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.

60 ಕಿ.ಮೀ ವ್ಯಾಪ್ತಿಯಲ್ಲಿರುವ ಟೋಲ್ ಸಮಸ್ಯೆಗಳಿಗೆ ಪರಿಹಾರ :
ಸುತ್ತಲಿನ ಟೋಲ್ ಪ್ಲಾಜಾಗಳ ಬಗೆಯ ದೀರ್ಘಕಾಲದ ಸಮಸ್ಯೆಗಳಿಗೆ ಇದು ಪರಿಹಾರ ನೀಡಲಿದೆ. ವ್ಯವಹಾರ ಸರಳತೆ, ಸಮಯದ ದಕ್ಷತೆ, ಚಾಲಕರಿಗೆ ಅನುಕೂಲತೆ ಎಂಬ ಮುಖ್ಯ ಗುರಿಯನ್ನು ಈ ಯೋಜನೆ ಹೊಂದಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ: ಅತಿವೇಗದಿಂದ ಬಸ್ ಚಲಾಯಿಸಿದ ಚಾಲಕನ ಬಂಧನ – ಬಸ್ಸು ವಶಕ್ಕೆ

ಉಡುಪಿ ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಬಳಿ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಖಾಸಗಿ ಬಸ್ಸು ಚಲಾಯಿಸಿದ ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಕಾಲ್ಬೆರಳುಗಳ ನಡುವೆ ಉಂಟಾಗುವ ತುರಿಕೆ ಮತ್ತು ಅಲರ್ಜಿ ನಿವಾರಣೆಗೆ ಪ್ರಯೋಜನಕಾರಿ ಮನೆಮದ್ದುಗಳು !

ಮಳೆಗಾಲ ಆರಂಭವಾದರೆ ಅಲರ್ಜಿ, ತುರಿಕೆ ಮತ್ತು ಫಂಗಲ್ ಸೋಂಕು ಸಾಮಾನ್ಯವಾಗುತ್ತದೆ. ವಿಶೇಷವಾಗಿ ಕಾಲ್ಬೆರಳುಗಳ ಮಧ್ಯೆ ಉಂಟಾಗುವ ತುರಿಕೆ ಜನರಿಗೆ ತೀವ್ರ ಕಿರಿಕಿರಿಯನ್ನು ಉಂಟುಮಾಡುತ್ತದೆ.

ಇಸ್ರೇಲ್‌ಗೆ ಡೇಟಾ ಸೋರಿಕೆ ಶಂಕೆ: ಜನರಿಗೆ ವಾಟ್ಸಾಪ್ ಅನ್‌ಇನ್‌ಸ್ಟಾಲ್ ಮಾಡಲು ಸೂಚಿಸಿದ ಇರಾನ್

ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಇಸ್ರೇಲ್‌ಗೆ ಸೋರಿಸುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ, ಇರಾನಿನ ಸರ್ಕಾರಿ ದೂರದರ್ಶನವು ದೇಶದ ನಾಗರಿಕರಿಗೆ ವಾಟ್ಸಾಪ್ ಅನ್ನು ತಮ್ಮ ಮೊಬೈಲ್‌ಗಳಿಂದ ಡಿಲೀಟ್ ಮಾಡಿಕೊಳ್ಳುವಂತೆ ಮಂಗಳವಾರ ಎಚ್ಚರಿಕೆ ನೀಡಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ದಾಳಿ: ಗಾಂಜಾ, ಮೊಬೈಲ್, ನಗದು ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗಿನ ಅಕ್ರಮ ಚಟುವಟಿಕೆಗಳ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೋಮವಾರ ಬೆಳಿಗ್ಗೆ ಸಿಸಿಬಿ (ಸಿಟಿ ಕ್ರೈಮ್ ಬ್ರಾಂಚ್) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿದೆ.