
ಉಡುಪಿ : ಉಡುಪಿ ಟೈಲರ್ಸ್ ಸಹಕಾರಿ ಸಂಘದ ಚತುರ್ಥ ವಾರ್ಷಿಕ ಮಹಾಸಭೆಯು ತಾ 17/9/25 ರಂದು ಅಪರಾಹ್ನ 3ಗಂಟೆಗೆ ಉಡುಪಿ ಜಗನ್ನಾಥ ಸಭಾ ಭವನದಲ್ಲಿ ಶ್ರೀ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಕೋಟ್ಯಾನ್ ಹಿರಿಯ ಅಂತಾರಾಷ್ಟ್ರೀಯ ಅತ್ಲೆಟಿಕ್ ಪಟು ಶ್ರೀಮತಿ ಅರುಣಕಲಾ ರಾವ್ ಹಿರಿಯಡಕರವರನ್ನು ಸನ್ಮಾನಿಸಿ ಮಾತನಾಡುತ್ತಾ ನಮ್ಮ ಸಂಸ್ಥೆಯು ಉತ್ತಮ ಆರ್ಥಿಕ ಪ್ರಗತಿಯಲ್ಲಿ ಸಾಗುತ್ತಿದ್ದು ಸಂಘ ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರ ಭಾಗಗಳಲ್ಲಿ ಶಾಖೆಯನ್ನು ತೆರೆಯುವ ಉದ್ದೇಶವಿದೆ ಎಂದರು.
ಸಂಘದ ಉಪಾಧ್ಯಕ್ಷರಾದ ಶ್ರೀ ಕೆ.ರಾಮಚಂದ್ರ , ನಿರ್ದೇಶಕರಾದ ಶ್ರೀ ಉಪೇಂದ್ರ ನಾಯಕ್ ಕುಕ್ಕಿಕಟ್ಟೆ, ಶ್ರೀ ಮನೋಹರ್ ರೋಹಿದಾಸ್ ಸೋನ್ಸ್, ಶ್ರೀ ವಾಸು ಆಚಾರ್ಯ, ಶ್ರೀ ರಾಘವೇಂದ್ರ ಗಾಣಿಗ , ಶ್ರೀ ನವೀನ್ .ಬಿ.ರಾವ್, ಶ್ರೀ ಪ್ರಕಾಶ್ ಸಾಲ್ಯಾನ್ ಬೆಳ್ಮಣ್, ಶ್ರೀಮತಿ ಸೌಮ್ಯ ಭಟ್ಟ್, ಶ್ರೀಮತಿ ಸುಷ್ಮಾ ಶೆಟ್ಟಿಗಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನಾಗರಾಜ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟೈಲರ್ಸ್ ಅಸೋಸಿಯೇಷನ್ ಉಡುಪಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಪಾಲನ್, ಟೈಲರ್ ಅಸೋಸಿಯೇಷನ್ ಉಡುಪಿ ಜಿಲ್ಲಾ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಗೌರಿ ಪೂಜಾರಿ ಬಾರ್ಕೂರು , ಶ್ರೀ ಆನಂದ್ ಪುತ್ರನ್ ಬೆಳ್ಮಣ್ , ಕ್ಷೇತ್ರ ಸಮಿತಿಯ ಹಾಗೂ ವಲಯ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಸಿಬ್ಬಂದಿ ಶ್ರೀಮತಿ ಸುಮಾ ನಾಯಕ್ ಪ್ರಾರ್ಥಿಸಿದರು.ನಿರ್ದೇಶಕ ದಯಾನಂದ ಪ್ರಭು ಹಿರಿಯಡಕ ನಿರೂಪಿಸಿದರು.ಬಾಲಕೃಷ್ಣ ನಾಯ್ಕ್ ವಂದಿಸಿದರು.
































