spot_img

ಪೊಲೀಸ್ ಸೇವೆಯ ಹೆಗ್ಗಳಿಕೆ: ಉಡುಪಿ ನಾಲ್ವರ ಕನಸಿಗೆ ರಾಜ್ಯದ ಗೌರವ!

Date:

ಉಡುಪಿ : ರಾಜ್ಯ ಪೊಲೀಸ್ ಇಲಾಖೆಯಿಂದ ಸೇವಾ ಶ್ರೇಷ್ಠತೆಗಾಗಿ ಈವರ್ಷ ಪ್ರಾರಂಭಿಸಲಾದ ‘ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕ’ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯ್ಕೆಯಾಗಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ. ಅರುಣ್, ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣೆಯ ಎಸ್ಸೈ ವೈಲೆಟ್ ಫೆಮಿನಾ, ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಗುರುದಾಸ್ ಮತ್ತು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್ಮ್ಡ್ ಹೆಡ್ ಕಾನ್ಸ್ಟೇಬಲ್ ಸಂತೋಷ್ ಗುಲ್ವಾಡಿ ಅವರುಗಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಪ್ರಶಸ್ತಿಯು ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ, ಧೈರ್ಯ ಮತ್ತು ನಿಷ್ಠೆಯನ್ನು ಪ್ರದರ್ಶಿಸಿದ ಸಿಬ್ಬಂದಿಗಳನ್ನು ಗುರುತಿಸುವುದಾಗಿದೆ. ರಾಜ್ಯದಾದ್ಯಂತ ಇದೇ ಮೊದಲ ಬಾರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಆಯ್ಕೆಯಾದವರಿಗೆ ಮೇ ೨೧ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಗೌರವಿಸಲಾಗುವುದು.

ಪ್ರಶಸ್ತಿ ಪಡೆಯುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದರಿಂದ ಈ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮೂಲಗಳು ತಿಳಿಸಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೆಂಗಳೂರಿನ ತೆರಿಗೆ ಹಣ ಎಲ್ಲಿಗೆ ಹೋಯಿತು? – ಕುಮಾರಸ್ವಾಮಿ

ಬೆಂಗಳೂರು ನಗರದ ಅಸಹನೀಯ ಜಲಜಂಕಾಟ ಮತ್ತು ಮೂಲಸೌಕರ್ಯ ಸ್ಥಿತಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರ ಟೀಕೆ ನಡೆಸಿದ್ದಾರೆ.

ಪಾಕಿಸ್ತಾನದ ಮುಖವಾಡ ಕಿತ್ತೊಗೆಯಲು ಸಿದ್ಧ! ಕನ್ನಡಿಗ ಸಂಸದರ ಹೋರಾಟ!

ಪಾಕಿಸ್ತಾನದಿಂದ ಪ್ರಾಯೋಜಿತ ಭಯೋತ್ಪಾದನೆಯ ನಿಜವಾದ ಮುಖವನ್ನು ಜಗತ್ತಿಗೆ ಬಹಿರಂಗಪಡಿಸಲು ಮತ್ತು ಭಾರತದ ರಾಜತಾಂತ್ರಿಕ ನಿಲುವನ್ನು ವಿಶ್ವದ ಮುಂದೆ ವಿವರಿಸಲು ಕೇಂದ್ರ ಸರ್ಕಾರ ಸರ್ವಪಕ್ಷೀಯ ಸಂಸದರ ನಿಯೋಗಗಳನ್ನು ರಚಿಸಿದೆ

ದಿನ ವಿಶೇಷ – ಸುಮಿತ್ರಾನಂದನ್ ಪಂತ್

ಹಿಂದಿ ಭಾಷೆಯ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮಹಾ ಕವಿ ಸುಮಿತ್ರಾನಂದನ್ ಪಂತ್.

ಧರ್ಮಸ್ಥಳದ ಯುವತಿಯ ಆತ್ಮಹತ್ಯೆ: ಪ್ರಾಧ್ಯಾಪಕನೊಂದಿಗಿನ ಪ್ರೇಮ ವೈಫಲ್ಯ ಕಾರಣ?

ಧರ್ಮಸ್ಥಳ ಮೂಲದ ಏರೋಸ್ಪೇಸ್ ಇಂಜಿನಿಯರ್ ಆಕಾಂಕ್ಷಾ ಎಸ್. ನಾಯರ್ (27) ಅವರ ನಿಗೂಢ ಸಾವಿನ ಹಿಂದೆ ಪ್ರೇಮ ವೈಫಲ್ಯವೇ ಕಾರಣವಿರಬಹುದು ಎಂದು ಪೊಲೀಸರು ತನಿಖೆಯಲ್ಲಿ ಬಯಲು ಮಾಡಿದ್ದಾರೆ