
ಉಡುಪಿ: ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ಬೆರಳಚ್ಚುಗಾರ, ಹೆಜಮಾಡಿ ನಿವಾಸಿ ಭಾಸ್ಕರ್ ಶೆಟ್ಟಿಯವರು (69) ಇಂದು ಮುಂಜಾನೆ ದೈವಾಧೀನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.
ಶಿಕ್ಷಣ ಇಲಾಖೆಯ ವೃತ್ತಿಜೀವನದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಹೆಸರಾಗಿದ್ದ ಭಾಸ್ಕರ್ ಶೆಟ್ಟಿಯವರ ನಿಧನದಿಂದ ಅವರ ಕುಟುಂಬ ಮತ್ತು ಆತ್ಮೀಯರಲ್ಲಿ ದುಃಖ ಆವರಿಸಿದೆ.
ಮೃತರಾದ ಭಾಸ್ಕರ್ ಶೆಟ್ಟಿಯವರು ಪತ್ನಿ ಹರಿಣಿ, ಸರಕಾರಿ ಪ್ರೌಢ ಶಾಲೆ, ಮರವಂತೆಯ ಶಿಕ್ಷಕರಾದ ಪುತ್ರ ಹಿತೇಶ್, ಹಾಗೂ ಕ್ರಿಶ್ಚಿಯನ್ ಪ್ರೌಢ ಶಾಲೆ, ಉಡುಪಿಯ ಶಿಕ್ಷಕಿಯಾದ ಪುತ್ರಿ ಭವ್ಯಾ ಅವರನ್ನು ಅಗಲಿದ್ದಾರೆ.



































