ಉಡುಪಿ ಪೆರ್ಡೂರು ಅನಂತಪದ್ಮನಾಭ ದೇವಾಲಯದಲ್ಲಿ 15ನೇ ಶತಮಾನದ ಅಪರೂಪದ ದೀಪ ಪತ್ತೆ – ಶೈವ-ವೈಷ್ಣವ ಶಿಲ್ಪ ಕಲೆಯ ಅದ್ಭುತ ಸಂಯೋಜನೆ

Date:

spot_img

ಉಡುಪಿ : ಉಡುಪಿ ತಾಲ್ಲೂಕಿನ ಪೆರ್ಡೂರಿನ ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ ಅಪರೂಪದ ಶಿಲ್ಪ ಶೋಭಿತ ದೀಪವೊಂದನ್ನು ಪತ್ತೆ ಯಾಗಿದ್ದು, ಇದು 15ನೇ ಶತಮಾನದ ಶಾಸನೋಕ್ತ ದೇವಾಲಯ ಪರಂಪರೆ ಮತ್ತು ಕಲಾತ್ಮಕತೆಯ ಸಾಕ್ಷಿಯಾಗಿದೆ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಮುರುಗೇಶಿ ಟಿ. ತಿಳಿಸಿದ್ದಾರೆ.

ದೀಪದ ವಿಶೇಷತೆಗಳು:
ಈ ದೀಪದಲ್ಲಿ ಶೈವ ಮತ್ತು ವೈಷ್ಣವ ಪರಂಪರೆಯ ಶಿಲ್ಪ ಕಲೆಗಳು ಅಪರೂಪದ ರಚನೆಗಳಲ್ಲಿ ಅಲಂಕರಿಸಲ್ಪಟ್ಟಿವೆ.

ಮೊದಲ ಮುಖದಲ್ಲಿ: ಕಾಲಪುರುಷನ ಮೇಲೆ ನಿಂತ ನಟರಾಜನ ಶಿಲ್ಪ, ತಾಳ ಬಾರಿಸುತ್ತಿರುವ ಭೃಂಗಿ, ನಗಾರಿ ಬಾರಿಸುತ್ತಿರುವ ಗಣಧಾರಿ, ಖಡ್ಗ ರಾವಣ ಹಾಗೂ ಕುಮಾರಸ್ವಾಮಿಯ ಮಯೂರ ವಾಹನ ಶಿಲ್ಪಗಳು ಗೋಚರಿಸುತ್ತವೆ.

ಎರಡನೇ ಮುಖದಲ್ಲಿ: ಸಮಭಂಗಿಯಲ್ಲಿ ನಿಂತ ಅನಂತಪದ್ಮನಾಭ, ಇಂದ್ರ, ಬ್ರಹ್ಮ, ಅಗ್ನಿ, ವರುಣ, ಗರುಡ ಮತ್ತು ಶಿವನ ಶಾಂತ ಪ್ರಾರ್ಥನಾ ಶಿಲ್ಪಗಳು ಕಂಡುಬರುತ್ತವೆ.

ಎರಡೂ ಬದಿಗಳಲ್ಲಿ: ಆಕರ್ಷಕ ಸಿಂಹ ಶಿಲ್ಪಗಳು, ಹಾಗೂ ವಿವಿಧ ದೇವತೆಗಳ ಪ್ರತಿನಿಧಾನವಾಗಿರುವ ಸಂವೇದನಾತ್ಮಕ ಶಿಲ್ಪ ನಿರೂಪಣೆಯಿದೆ.

ಶಾಸನದ ಪ್ರಕಾರ 15ನೇ ಶತಮಾನಕ್ಕೆ ಸೇರಿದೆ:
ದೀಪದ ಶಿಲ್ಪ ಶೈಲಿಯು ಕ್ರಿ.ಶ. 1456ರ ಬಸವಣ್ಣರಸ ಬಂಗನ ಶಾಸನದ ಉಲ್ಲೇಖದೊಂದಿಗೆ ಹೊಂದಿಕೆಯಾಗುತ್ತಿದ್ದು, ದೀಪದ ವಯಸ್ಸು ಸುಮಾರು 15ನೇ ಶತಮಾನಕ್ಕೆ ಸೇರಿರುವುದಾಗಿ ನಿಶ್ಚಯಿಸಲಾಗಿದೆ. ಈ ಶಾಸನದಲ್ಲಿ ದೇವಾಲಯಕ್ಕೆ ನೀಡಿದ ಎರಡು ಕಂಚಿನ ದೀಪಗಳ ಉಲ್ಲೇಖವಿದೆ.

ಕುತೂಹಲ ಕರ ಶಿಲ್ಪ – ಖಡ್ಗ ರಾವಣ:
ಅರೆಬೆತ್ತಲೆಯಾಗಿ ವಿಸ್ಮಯ ಮುದ್ರೆಯಲ್ಲಿ ನಿಂತಿರುವ ಖಡ್ಗ ರಾವಣ, ತನ್ನ ನಾಲ್ಕು ಕೈಗಳಲ್ಲಿ ಖಡ್ಗ, ನೇಗಿಲು, ಪಾನಪಾತ್ರೆ ಹಾಗೂ ರುಂಡವನ್ನೂ ಹಿಡಿದಿದ್ದಾನೆ. ಇದು ಪಾಲಕ ಹಾಗೂ ವಿನಾಶಕ ಶಕ್ತಿಯ ಪ್ರತೀಕವಾಗಿದ್ದು, ದೇವಾಲಯದ ಬಾಗಿಲಿನಲ್ಲಿ ರಕ್ಷಣಾ ದೈವವಾಗಿ ಆರಾಧನೆಗೊಳ್ಳುತ್ತಿರುವುದು ವಿಶೇಷ.

ಸಂಶೋಧನೆಗೆ ಬಲ:
ಈ ದೀಪದ ಪತ್ತೆಗೆ ಆನುವಂಶಿಕ ಮೊಕ್ತೇಸರ ಪ್ರಮೋದ್ ರೈ ಪಳಜೆ, ಆಡಳಿತಾಧಿಕಾರಿ ಗುರುರಾಜ್ ಹಾಗೂ ಆದಿಮ ಕಲಾ ಟ್ರಸ್ಟ್ ಉಡುಪಿ ಸಹಕಾರ ನೀಡಿದ್ದಾರೆ ಎಂದು ಪ್ರೊ. ಮುರುಗೇಶಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.