spot_img

ಉಡುಪಿ: ಗೋಸಂರಕ್ಷಣೆಗಾಗಿ ವಿಶೇಷ ಉಪವಾಸ, ಪಾರಾಯಣ ಮತ್ತು ಜಪ ಅಭಿಯಾನಕ್ಕೆ ಪೇಜಾವರ ಶ್ರೀ ಗಳಿಂದ ಕರೆ

Date:

spot_img

ಗೋವಿನ ಮೇಲಿನ ದೌರ್ಜನ್ಯ ಖಂಡಿಸಿ ಜ.25ರಂದು ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ. ಜನವರಿ 23 ರಿಂದ 29 ರವರೆಗೆ ಕೋಟಿವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಶಿವ ಪಂಚಾಕ್ಷರ ಜಪ ಅಭಿಯಾನವನ್ನು ಹಮ್ಮಿಕೊಳ್ಳುವಂತೆ ಸ್ವಾಮೀಜಿಯವರು ಗಣ್ಯರು, ಭಕ್ತರು ಹಾಗೂ ಸಮಾಜದ ಜನತೆಗೆ ಮನವಿ ಮಾಡಿದ್ದಾರೆ.

ಗೋಸಂರಕ್ಷಣೆಯ ಅಗತ್ಯತೆ:
ಗೋವಿನ ಮೇಲಿನ ದೌರ್ಜನ್ಯ, ಹಿಂಸೆ ಮತ್ತು ಗೋಹತ್ಯೆಗಳು ಸಮಾಜದ ಪ್ರತಿಷ್ಠೆಗೆ ಧಕ್ಕೆ ತರುತ್ತವೆ.ಇವುಗಳಿಂದ ಭೂಮಿಯಲ್ಲಿ ಭಿಕ್ಷೆ, ಅಶಾಂತಿ, ಕ್ಷಾಮ ಉಂಟಾಗುತ್ತದೆ ಎಂದರು. ಗೋ ಸಂರಕ್ಷಣೆಗಾಗಿ ಹಿಂದೂ ಸಮಾಜ ಕೂಡಲೇ ಮುಂದಾಗಬೇಕು ಎಂದು ಒತ್ತಾಯಿಸಿದರು.

ಕೋಟಿ ಪಾರಾಯಣ ಅಭಿಯಾನ:
ಈ ಅಭಿಯಾನದ ಅಂಗವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಶಿವ ಪಂಚಾಕ್ಷರ ಜಪದಲ್ಲಿ ಜಾತಿ, ಮತ ಭೇದವಿಲ್ಲದೆ ಎಲ್ಲ ಧರ್ಮೀಯರು ಪಾಲ್ಗೊಳ್ಳಬೇಕು. ಈ ಮೂಲಕ ಗೋವುಗಳ ರಕ್ಷಣೆಗಾಗಿ ಪ್ರಾರ್ಥಿಸಿ ಸಮಾಜದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಬೇಕು.

ಅಭಿಯಾನದ ಅಂತಿಮ ದಿನ:
ಜನವರಿ 29 ರಂದು ನಾಡಿನಾದ್ಯಂತ ಮಠ, ಮಂದಿರ, ದೇವಸ್ಥಾನಗಳಲ್ಲಿ ಪಾರಾಯಣ ಯಜ್ಞಗಳನ್ನು ನಡೆಸುವ ಮೂಲಕ ಅಭಿಯಾನವನ್ನು ಮುಕ್ತಾಯಗೊಳಿಸಲಾಗುವುದು. ಈ ಅಭಿಯಾನದಲ್ಲಿ ಸಾಧು, ಸಂತರು, ಭಜನಾ ಮಂದಿರಗಳು, ಪಾರಾಯಣ ಮಂಡಳಿಗಳು ಹಾಗೂ ನಾಡಿನ ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಬೇಕು ಹಾಗೂ ಪ್ರತಿ ಊರಿನ ಮಠಾಧೀಶರು ತಮ್ಮ ಶಿಷ್ಯರು ಹಾಗೂ ಅಭಿಮಾನಿಗಳನ್ನು ಪ್ರೇರೇಪಿಸಬೇಕು ಎಂದು ಶ್ರೀಗಳು ವಿನಂತಿಸಿದ್ದಾರೆ.

ಹಿಂಸೆಯನ್ನು ವಿರೋಧಿಸುವ ಸಂಕಲ್ಪ:
ಗೋಹತ್ಯೆ ಮತ್ತು ಗೋಹಿಂಸೆಯನ್ನು ಸಂಪೂರ್ಣವಾಗಿ ಕೊನೆಗಾಣಿಸಲು ಪ್ರತಿಯೊಬ್ಬ ಭಕ್ತರು ಈ ಅಭಿಯಾನವನ್ನು ಪ್ರೇರೇಪಿಸಬೇಕೆಂದು ಪೇಜಾವರ ಶ್ರೀಗಳು ಕರೆ ನೀಡಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

‘ಎಲ್ಲ ಆರೋಪಗಳಿಂದ ತೊಳೆದಂತಾಗಿದೆʼ: ಮಾಸ್ಕ್​ಮ್ಯಾನ್​ ಬಂಧನಕ್ಕೆ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾಗಿ ಸುಳ್ಳು ಹೇಳಿಕೆ ನೀಡಿದ್ದ ಚಿನ್ನಯ್ಯ ಅಲಿಯಾಸ್ ಮಾಸ್ಕ್​ಮ್ಯಾನ್​ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರತಿಕ್ರಿಯಿಸಿದ್ದಾರೆ.

ಹೆಬ್ರಿಯ ಅರ್ಧ ನಾರೀಶ್ವರ ದೇವಸ್ಥಾನದ ಬಾಕಿ ಮಾರು ಗದ್ದೆಯಲ್ಲಿ “ಅಷ್ಟಮಿದ ಕೆಸರ್ದ ಓಕುಳಿ ” ಕಾರ್ಯಕ್ರಮ

' ಕಾರ್ಕಳ ಟೈಗರ್ಸ್ ' ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ, ಎಸ್ ಆರ್ ಎಜುಕಷನ್ ಟ್ರಸ್ಟ್ (ರಿ ) ಹೆಬ್ರಿ ಮತ್ತು ಜಿ. ಎಸ್. ಬಿ ಯುವಜನ ಸಭಾ ಹೆಬ್ರಿ ಇವರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ "ಅಷ್ಟಮಿದ ಕೆಸರ್ದ ಓಕುಳಿ " ಎಂಬ ವಿಭಿನ್ನ ಕಾರ್ಯಕ್ರಮವನ್ನು ಆಗಸ್ಟ್ 24 ರಂದು ಹೆಬ್ರಿಯ ಅರ್ಧ ನಾರೀಶ್ವರ ದೇವಸ್ಥಾನದ ಬಾಕಿ ಮಾರು ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದೆ .

ಧರ್ಮಸ್ಥಳ ವಿವಾದ: ಎರಡು ಹಿಂದುತ್ವ ಶಕ್ತಿಗಳ ನಡುವಿನ ಹೋರಾಟ ಎಂದು ಬಿ.ಕೆ. ಹರಿಪ್ರಸಾದ್ ಬಣ್ಣನೆ

ಧರ್ಮಸ್ಥಳ ಪ್ರಕರಣದ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಸಂಬಂಧಿಸಿದಂತೆ, ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಮಹತ್ವದ ಹೇಳಿಕೆ

ವೈದ್ಯರು ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಚಿಕಿತ್ಸೆ ವಿಳಂಬ: ಅಮಾಯಕ ನವಜಾತ ಶಿಶುವಿನ ಸಾವು

ಹೆರಿಗೆ ಸಮಯದಲ್ಲಿ ವೈದ್ಯರು ಹಣಕ್ಕೆ ಬೇಡಿಕೆಯಿಟ್ಟು ಚಿಕಿತ್ಸೆಯಲ್ಲಿ ವಿಳಂಬ ಮಾಡಿದ್ದರಿಂದ, ನವಜಾತ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ, ತಂದೆಯೊಬ್ಬರು ಮಗುವಿನ ಮೃತದೇಹವನ್ನು ಚೀಲದಲ್ಲಿ ಇರಿಸಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬಂದಿರುವ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ