spot_img

ಹಿರಿಯಡಕ ಗ್ರೀನ್ ಪಾರ್ಕ್ ಶಾಲೆ :ವಿದ್ಯಾರ್ಥಿ ಸಂಸತ್ ಉದ್ಘಾಟನೆ

Date:

ಹಿರಿಯಡಕ: ಗ್ರೀನ್ ಪಾರ್ಕ್ ಸೆಂಟ್ರಲ್ ಶಾಲೆಯಲ್ಲಿ2025-26 ನೇ ಸಾಲಿನ ವಿದ್ಯಾರ್ಥಿ ಸಂಸತ್ತನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಯವರಾದ ಪರಮೇಶ್ವರ್ ಎ. ಹೆಗ್ಡೆ ಯವರು ಉದ್ಘಾಟಿಸಿ ಮಾತನಾಡುತ್ತಾ ನಾಯಕತ್ವ, ಶಿಸ್ತು ಮತ್ತು ಬದ್ದತೆಯನ್ನು ಕಲಿಯಲು ವಿದ್ಯಾರ್ಥಿ ಸಂಸತ್ ಒಂದು ಉತ್ತಮ ವೇದಿಕೆ, ಈ ಮೂಲಕ ವ್ಯಕ್ತಿತ್ವ ವಿಕಸನವನ್ನು ಬೆಳೆಸಿಕೊಂಡರೆ ಮುಂದೆ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ಕಾಲಮಾನದಲ್ಲಿ ನಾವು ಗಮನಿಸಬೇಕಾದ ವಿಚಾರವೇನೆಂದರೆ ಬಹಳಷ್ಟು ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆಯದೆ ತಮ್ಮ ಜೀವನವನ್ನು ತಾವೇ ವ್ಯರ್ಥ ಗೊಳಿಸುತ್ತಿದ್ದಾರೆ. ಇಂದು ಈ ಸಂಸತ್ ನಲ್ಲಿ ನಾನು ಗಮನಿಸಿದ್ದೇನೆಂದರೆ ಮಿನಿಸ್ಟರ್ ಆಪ್ ಹ್ಯಾಪಿನೆಸ್ ಎನ್ನುವ ಹುದ್ದೆಯನ್ನು ಕೂಡ ಸೃಷ್ಟಿಸಿ ಹೊಸತನವನ್ನು ಮೆರೆದಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಭಾರತೀಯ ಸೇನೆಯ ನಿವೃತ್ತ ಯೋಧರಾದ ಉಪೇಂದ್ರ ವಾಗ್ಲೆ ಯವರು ಅತಿಥಿಗಳಾಗಿ ಭಾಗವಹಿಸಿದ್ದು ವಿದ್ಯಾರ್ಥಿಗಳಿಗೆ ಬ್ಯಾಜ್ ತೊಡಿಸಿದರು.

ಶಾಲಾ ಪ್ರಾಂಶುಪಾಲೆ ಕ್ಲಾರಿನ್ ನಿಖೋಲಸ್ ರವರು ಸಂಸತ್ ನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಶಾಲಾ ವಿದ್ಯಾರ್ಥಿನಿ ಧನುಶ್ರೀ ಸ್ವಾಗತಿಸಿ, ಉತ್ತಮ್ ಮತ್ತು ಸಾನ್ವಿ ಶೆಟ್ಟಿಗಾರ್ ರವರು ಪರಿಚಯಿಸಿ, ದೇವಿಕಾ ವಾಗ್ಲೆ ಮತ್ತು ಆಗಮ್ ಶೆಟ್ಟಿ ನಿರೂಪಿಸಿ, ಅಭಿನವ್ ಪ್ರಸನ್ನ ವಂದಿಸಿದರು.

ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲೆ ಜಯಶ್ರೀ ತೆಂಡೂಲ್ಕರ್, ಆಡಳಿತಾಧಿಕಾರಿ ಶೇಕರ್ ಗುಜ್ಜರ್ ಬೆಟ್ಟು, ವ್ಯವಸ್ಥಾಪಕಿ ಅಮಿತಾ ಹೆಗ್ಡೆ, ಸಂಯೋಜಕರಾದ ಉಷಾ ರಾವ್, ಗೀತಾ ಭಟ್ ಮುಂತಾದವರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಾಜಸ್ಥಾನದಲ್ಲಿ ಪುರಾತತ್ತ್ವ ಇಲಾಖೆಯ ದೊಡ್ಡ ಶೋಧ

ಇದುವರೆಗೆ ರಾಜಸ್ಥಾನದಲ್ಲಿ ನಡೆದ ಅತ್ಯಂತ ಆಳದ ಉತ್ಖನನವೆಂದರೆ ಇದು—23 ಮೀಟರ್ ಆಳದವರೆಗೆ ತಲುಪಿದ ಈ ಸಂಶೋಧನೆ, ಪ್ರಾಚೀನ ಭಾರತದ ಇತಿಹಾಸಕ್ಕೆ ಹೊಸ ಆಯಾಮಗಳನ್ನು ಸೇರಿಸಿದೆ.

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಅಕಾಲಿಕ ಮರಣ: 40 ದಿನಗಳಲ್ಲಿ 17 ಜನ ಹತಾಶೆ

ಕೇವಲ 40 ದಿನಗಳಲ್ಲಿ 17 ಜನರು ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಪ್ರಾಣಬಿಟ್ಟಿದ್ದಾರೆ. ಇದರಲ್ಲಿ ಹೆಚ್ಚಿನವರು 19 ರಿಂದ 45 ವರ್ಷ ವಯೋಮಿತಿಯ ಯುವಕರು ಮತ್ತು ಮಧ್ಯವಯಸ್ಕರು

ಕಾಸರಗೋಡು: ಕುಡಿದು ಕಾರು ಚಲಾಯಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ಬಂಧನ

ಶಾಲೆಯ ಮುಖ್ಯೋಪಾಧ್ಯಾಯಿನಿ ಮದ್ಯಪಾನ ಮಾಡಿದ ನಂತರ ವಾಹನ ಚಲಾಯಿಸಿದ ಆರೋಪದಲ್ಲಿ ಪ್ಲೋಯ್ಸರು ಬಂಧಿಸಿದ್ದಾರೆ

ಶಿರ್ವದಲ್ಲಿ ಲಕ್ಷಾಂತರ ರೂಪಾಯಿಗಳ ಬಂಗಾರದ ಅಭರಣಗಳ ಕಳ್ಳತನ

ಶಿರ್ವ ಗ್ರಾಮದ ಒಂದು ನಿವಾಸಿಯ ಮನೆಯಲ್ಲಿ ನಡೆದ ದರೋಡೆ ಘಟನೆ ಪ್ರದೇಶದಲ್ಲಿ ಆಘಾಕವನ್ನುಂಟುಮಾಡಿದೆ