spot_img

ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನಲ್ಲಿ ರಾಣಿ ಅಬ್ಬಕ್ಕ @500 ಪ್ರೇರಣದಾಯಿ ಉಪನ್ಯಾಸ

Date:

ನಿಟ್ಟೆ : 04-09-2025 ರಂದು ಡಾ.ಎನ್.ಎಸ್ .ಎ.ಎಮ್ ಪ್ರಥಮದರ್ಜೆ ಕಾಲೇಜು, ನಿಟ್ಟೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಐಕ್ಯೂಎಸಿ ಕೋಶವು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಆಶ್ರಯದಲ್ಲಿ ರಾಣಿ ಅಬ್ಬಕ್ಕ @500 ಪ್ರೇರಣದಾಯಿ ಉಪನ್ಯಾಸ ಮಾಲಿಕೆಯ 41 ನೇ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಸುರೇಂದ್ರ ಶೆಟ್ಟಿ ಇವರು ಈ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸುರೇಂದ್ರ ಶೆಟ್ಟಿ ಇವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘವು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಮಹೋದಯರನ್ನು ಸ್ಮರಿಸುವ ಕೆಲಸವನ್ನು ಮಾಡುತ್ತಿದ್ದು ಹೊಸ ತಲೆಮಾರಿನ ಸಮುದಾಯಕ್ಕೆ ರಾಷ್ಟ್ರ ಭಕ್ತಿ, ಸಂಸ್ಕೃತಿ, ಮತ್ತು ನಮ್ಮ ಪೂರ್ವಜರ ತ್ಯಾಗ, ಬಲಿದಾನಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಹಿನ್ನಲೆಯಲ್ಲಿ ನಾವೂ ಈ ರೀತಿಯ ಸರಣಿ ಉಪನ್ಯಾಸಗಳನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ಮಾತನಾಡಿ ಅಬ್ಬಕ್ಕಳ ಬದುಕು ಮತ್ತು ರಾಜಕೀಯ ಜೀವನದ ಪರಿಚಯವನ್ನು, ಅಬ್ಬಕ್ಕಳ ವ್ಯಾಪರ ವ್ಯವಹಾರಗಳ ತಂತ್ರ ಹಾಗೂ ಪೋರ್ಚುಗೀಸರ ವಿರುದ್ದ ಹೋರಾಡಿದ ಸಾಹಸಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಹಾಗೆಯೇ ರಾಣಿ ಅಬ್ಬಕ್ಕ ಜೈನಳಾದರೂ ಆಕೆಗೆ ಸರ್ವಧರ್ಮೀಯರ ಬೆಂಬಲವಿತ್ತು, ಹಾಗೂ ಬೆಂಬಿಡದೆ ಹೋರಾಡಿ ಗೆಲ್ಲುವ ಛಲ ಅವಳನ್ನು ಪೋರ್ಚುಗೀಸರ ವಿರುದ್ದ ಗೆಲ್ಲುವ ಹಾಗೆ ಮಾಡಿತು ಎಂದು ಅಬ್ಬಕ್ಕನ ಸಾಹಸ ಗಾಥೆಯನ್ನು ವಿವರಿಸಿದರು. ವೈಯಕ್ತಿಕ ಜೀವನದ ಸೋಲು ಸವಾಲುಗಳ ನಡುವೆಯೂ ಸಾರ್ವಜಿನಿಕ ಜೀವನದಲ್ಲಿ ವಿಜೃಂಬಿಸಿದ ಅಬ್ಬಕ್ಕನ ಸಾಧನೆ ನಮಗೆ ಮಾದರಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ವೀಣಾ ಕುಮಾರಿ ಬಿ.ಕೆ ಮಾತನಾಡಿ ಅಬ್ಬಕ್ಕನ ಜೀವನೋತ್ಸಾಹ, ಧೈರ್ಯ, ಸಾಹಸ, ತ್ಯಾಗ, ರಾಜಕೀಯ ಮುತ್ಸದ್ದಿತನಗಳನ್ನು ಇಂದಿನ ವಿದ್ಯಾರ್ಥಿ ಸಮುದಾಯ ಅಳವಡಿಸಿಕೊಳ್ಳಬೇಕು ಹಾಗೂ ಅಬ್ಬಕ್ಕ ನಮ್ಮೆಲ್ಲರ ಆದರ್ಶವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಶ್ರೀ ಪ್ರಕಾಶ್ ಉಪಸ್ಥಿತರಿದ್ದರು, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ನಮಿರಾಜ್ ಸ್ವಾಗತಿಸಿದರು. ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಶ್ರೀಮತಿ ಸವಿತಾ ವಂದಿಸಿದರು ಹಾಗೂ ಕುಮಾರಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ನಾರಾಯಣ ಗುರು ಜಯಂತಿ

ಜ್ಞಾನ ಮತ್ತು ಸಮಾನತೆಯ ಪುನರುತ್ಥಾನಕ್ಕೆ ಪ್ರೇರಣೆಯ ದಿನಪ್ರತಿ ವರ್ಷ ಸೆಪ್ಟೆಂಬರ್ 7, ಭಾರತದ ಕರಾವಳಿ ತೀರದ ಜನತೆಗೆ ಒಂದು ಪವಿತ್ರ ಮತ್ತು ಮಹತ್ವದ ದಿನ

ಧರ್ಮಸ್ಥಳ ಪ್ರಕರಣ: ಆರೋಪಿ ಚಿನ್ನಯ್ಯ ನ್ಯಾಯಾಂಗ ಬಂಧನಕ್ಕೆ, ಶಿವಮೊಗ್ಗ ಜೈಲಿಗೆ ರವಾನೆ

'ಧರ್ಮಸ್ಥಳದಲ್ಲಿ ಹೆಣ ಹೂತಿದ್ದೇನೆ' ಎಂದು ಹಲವು ದಿನಗಳ ಕಾಲ ಸುದ್ದಿಯಲ್ಲಿದ್ದ ಆರೋಪಿ ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅವಧಿ ಮುಗಿದಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಐಸಿಸಿ ಮತ್ತು Google Pay ಜಂಟಿ ಪ್ರಯತ್ನ: ಮಹಿಳಾ ವಿಶ್ವಕಪ್ ಟಿಕೆಟ್ ಮಾರಾಟಕ್ಕೆ ಹೊಸ ಡಿಜಿಟಲ್ ಸ್ಪರ್ಶ

ವಿಶೇಷ ಟಿಕೆಟ್‌ಗಳು ಗೂಗಲ್ ಪೇ ಮೂಲಕ ಸೆಪ್ಟೆಂಬರ್ 8ರವರೆಗೆ ಲಭ್ಯವಿರಲಿದ್ದು, ಸೆಪ್ಟೆಂಬರ್ 9 ರಿಂದ ಎಂದಿನಂತೆ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ ಎಂದು ICC ತಿಳಿಸಿದೆ.

ಸೈನಸ್ ಸಮಸ್ಯೆ: ಕರಿಮೆಣಸಿನ ಆವಿಯಿಂದ ಪರಿಹಾರ ಸಾಧ್ಯವೇ?

ಮೂಗು ಕಟ್ಟಿಕೊಂಡಾಗ ಅಥವಾ ಸೈನಸ್‌ಗಳಿಂದ ತಲೆನೋವು ಬಂದಾಗ ಬಿಸಿ ನೀರಿನ ಆವಿಗೆ ಕರಿಮೆಣಸು ಸೇರಿಸಿ ಉಸಿರಾಡುವುದು ಒಂದು ಜನಪ್ರಿಯ ವಿಧಾನ.