
ಉಡುಪಿ : ಮಳೆಯ ಆರ್ಭಟ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ನೀಡಲಾಗಿದ್ದ ಐದು ದಿನಗಳ ರಜೆಯನ್ನು ಇದೀಗ ಶನಿವಾರಗಳಲ್ಲಿ ಪೂರೈಸುವಂತೆ ಸೂಚನೆ ನೀಡಲಾಗಿದೆ.
ಬೈಂದೂರು ಶಿಕ್ಷಣ ವಿಭಾಗದ ಸೂಚನೆಯಂತೆ, ಈ ರಜೆಗಳನ್ನು ಪೂರೈಸಲು ಜೂನ್ 21, 28, ಜುಲೈ 5, 12, 19, 26 ಹಾಗೂ ಆಗಸ್ಟ್ 2, 9, 16, 23 ದಿನಗಳ ಶನಿವಾರಗಳಲ್ಲಿ ಪೂರ್ಣ ದಿನ ಶಾಲೆ ನಡೆಸಲು ಆದೇಶಿಸಲಾಗಿದೆ.
ಈ ನಿರ್ಧಾರ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಜಿಲ್ಲಾ ಶಿಕ್ಷಣಾಧಿಕಾರಿಗಳ ಮೂಲಕ ತಿಳಿಸಲಾಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಹಾನಿಯಾಗದಂತೆ ಹಾಗೂ ರಜೆಯ ಸಮನ್ವಯವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ.