spot_img

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 99.04% ಅಂಕ ಪಡೆದ ಅನನ್ಯಾ!

Date:

2025 – 26ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ವಿದ್ಯಾರ್ಥಿನಿಯಾಗಿರುವ ಕುಮಾರಿ ಅನನ್ಯರವರು ಶೇಕಡ 99.04%(619) ಅಂಕಗಳನ್ನು ಪಡೆದಿರುತ್ತಾರೆ.

ದಯಾನಂದ ನಾಯಕ್ ಮತ್ತು ದಿವ್ಯ ನಾಯಕ್ ದಂಪತಿಗಳ ಪುತ್ರಿಯಾಗಿರುವ ಅನನ್ಯರವರ ಊರು ಬೆಳ್ಳಾರ್ಪಾಡಿ ಆಗಿದ್ದು , ಈ ಗ್ರಾಮದಲ್ಲಿ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದೆ ಸುಮಾರು 6 km ಶಾಲೆಯಿಂದ ಮನೆಗೆ ನಡೆದುಕೊಂಡೆ ಬರುತ್ತಿದ್ದರು. ಇಂತಹ ಸಮಯದಲ್ಲೂ 619 ಅಂಕಗಳನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆಪಡುವಂತಹ ವಿಷಯವಾಗಿದೆ.

ಮೊದಲಿನಿಂದಲೂ ಕಲಿಕೆಯಲ್ಲಿ ಬಹಳ ಚುರುಕಾಗಿದ್ದು ಎಂಟನೇ ತರಗತಿಯಲ್ಲಿ ನಡೆದಂತಹ ಅತ್ಯಂತ ಕಠಿಣ ಪರೀಕ್ಷೆಯಾದ National Means-cum Merit Scholarship (NMMS )ನಲ್ಲಿ ಉತ್ತೀರ್ಣರಾಗಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಲ್ಲದೆ ರಾಮಾಯಣ ಮಹಾಭಾರತದಂತಹ ಪರೀಕ್ಷೆಗಳಲ್ಲೂ 100 ರಲ್ಲಿ 97 ಅಂಕಗಳನ್ನು ಪಡೆದು ಚಿನ್ನದ ಪದಕವನ್ನು ಪಡೆದಿರುತ್ತಾರೆ.

ಇವರು ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಸ.ಹಿ.ಪ್ರ ಶಾಲೆ ಬೆಳ್ಳಾರ್ಪಾಡಿ ಎಂಬಲ್ಲಿ ಮುಗಿಸಿದ್ದು ಅಲ್ಲಿಯೂ ಕಲಿಕೆಯ ವಿಷಯ ಮಾತ್ರವಲ್ಲದೆ ಹಲವು ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಬಹುಮಾನಗಳನ್ನು ಪಡೆದು ಸರಿ ಸುಮಾರು 20 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಮುಂದೆಯೂ ಕೂಡ ಇದೇ ರೀತಿ ಪೋಷಕರಿಗೆ,ಊರಿಗೆ ಹಾಗೂ ಸಮಾಜಕ್ಕೆ ಒಳ್ಳೆ ಹೆಸರನ್ನು ತರುವಂತಾಗಲಿ ಎಂದು ಆಶಿಸೋಣ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನೀರೆ ಜಡ್ಡಿನಂಗಡಿ ತಿರುವಿನಲ್ಲಿ ಭೀಕರ ಅಪಘಾತ: ಕಾರು ಚಾಲಕನಿಗೆ ಗಂಭೀರ ಗಾಯ, ಬಸ್ ಮರಕ್ಕೆ ಡಿಕ್ಕಿ!

ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಡ್ಡಿನಂಗಡಿ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಹಾಗೂ ಸರಕಾರಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯು ಸಂಜೆ ಹೊತ್ತಿನಲ್ಲಿ ನಡೆದಿದ್ದು, ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.

ಡಾ| ವಿಠ್ಠಲ್ ಅಡ್ಯಂತಾಯರ ಧರ್ಮಪತ್ನಿ ಶ್ರೀಮತಿ ಶಾಂತ ಅಡ್ಯಂತಾಯರ ವಿಧಿವಶ: ನಾಳೆ ಅಂತ್ಯಕ್ರಿಯೆ

ಡಾ| ವಿಠ್ಠಲ್ ಅಡ್ಯಂತಾಯರ ಧರ್ಮಪತ್ನಿ ಶ್ರೀಮತಿ ಬೇಬಿ ಅಡ್ಯಂತಾಯರು (ಶಾಂತ ಅಡ್ಯಂತಾಯ) ಇಂದು ದಿನಾಂಕ 03/05/2025, ಶನಿವಾರದಂದು ಕೊಂಡಾಡಿ ಗುತ್ತಿನ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.

ಹಿರಿಯಡಕ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ನ ಮತ್ತೊಂದು ಶ್ರೇಣಿಗತ ಸಾಧನೆ: ಸತತ 23ನೇ ಬಾರಿಗೆ ಶೇ.100 ಫಲಿತಾಂಶ!

ಇಲ್ಲಿನ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ (ICSE) 10 ನೇ ತರಗತಿ ಪರೀಕ್ಷೆಯಲ್ಲಿ ಸತತವಾಗಿ ಇಪ್ಪತ್ತ ಮೂರನೇ ಬಾರಿಗೆ ಶೇಕಡಾ 100 ಫಲಿತಾಂಶ ದಾಖಲಿಸಿದೆ.

ದಾಸವಾಳದ ಹೂವಿನಲ್ಲಿ ಅಸಂಖ್ಯ ಆರೋಗ್ಯ ಮೌಲ್ಯಗಳು: ಮಧುಮೇಹದಿಂದ ಕ್ಯಾನ್ಸರ್‌ವರೆಗೆ ಪರಿಹಾರ!

ಪ್ರಕೃತಿಯ ಅತ್ಯದ್ಭುತ ಕೊಡುಗೆಗಳಲ್ಲಿ ಒಂದಾದ ದಾಸವಾಳ ಹೂವು ಕೇವಲ ಸೌಂದರ್ಯವನ್ನಷ್ಟೇ ನೀಡುವುದಲ್ಲದೆ, ಅದರಲ್ಲಿರುವ ಔಷಧೀಯ ಗುಣಲಕ್ಷಣಗಳಿಂದ ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಯಲ್ಲೂ ಮಹತ್ತರದ ಪಾತ್ರ ವಹಿಸುತ್ತದೆ.