
ಉಡುಪಿ: ಅಕ್ಟೋಬರ್ 2, 2025 ರಂದು ಉಡುಪಿಯ ಉಚ್ಚಿಲದಲ್ಲಿ ನಡೆಯಲಿರುವ ದಸರಾ ಪ್ರಯುಕ್ತ ಬೃಹತ್ ಶೋಭಾಯಾತ್ರೆ ಮೆರವಣಿಗೆ ನಡೆಯಲಿರುವ ಕಾರಣ, ರಾಷ್ಟ್ರೀಯ ಹೆದ್ದಾರಿ-66 (NH-66)ರಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಮೆರವಣಿಗೆಯಿಂದಾಗಿ ಸಂಜೆ ವೇಳೆ ವಾಹನ ದಟ್ಟಣೆ ಮತ್ತು ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಮತ್ತು ವಾಹನ ಚಾಲಕರು ಸಹಕರಿಸಲು ಜಿಲ್ಲಾ ಪೊಲೀಸ್ ಸೂಚಿಸಿದೆ.
ಬದಲಾದ ಸಂಚಾರ ಮಾರ್ಗ ವಿವರಗಳು:
ದಿನಾಂಕ: ಅಕ್ಟೋಬರ್ 2, 2025 (ಗುರುವಾರ)
1. ಉಡುಪಿ-ಮಂಗಳೂರು ಮಾರ್ಗವಾಗಿ ಸಾಗುವ ಘನ ವಾಹನಗಳಿಗೆ (ಲಾರಿ, ಟ್ರಕ್, ಟ್ಯಾಂಕರ್ ಇತ್ಯಾದಿ):
- ಸಮಯ: ಸಂಜೆ 5:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ.
- ಬದಲಿ ಮಾರ್ಗ: ಈ ಸಮಯದಲ್ಲಿ ಘನ ವಾಹನಗಳು ಕಟಪಾಡಿ – ಶಿರ್ವ – ಬೆಳ್ಮಣ್ – ಪಡುಬಿದ್ರಿ ಮಾರ್ಗವಾಗಿ ಸಂಚರಿಸಬೇಕು.
- ನಿಲುಗಡೆ ಸೂಚನೆ: ಟ್ರಕ್, ಲಾರಿ, ಟ್ಯಾಂಕರ್ ಮುಂತಾದ ಘನ ವಾಹನಗಳು ರಾತ್ರಿ 9:00 ಗಂಟೆಯವರೆಗೆ ಕುಂದಾಪುರ ಮತ್ತು ಉಡುಪಿ ಕಡೆಗಳಲ್ಲಿರುವ ಟ್ರಕ್ ಬೇಗಳಲ್ಲಿ ಕಡ್ಡಾಯವಾಗಿ ನಿಲ್ಲಿಸಿ ನಂತರವೇ ಸಂಚಾರ ಮುಂದುವರಿಸಬೇಕು.
2. ಉಡುಪಿಯಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳಿಗೆ:
- ಬದಲಿ ಮಾರ್ಗ: ಈ ವಾಹನಗಳು ಕಟಪಾಡಿ – ಶಿರ್ವ – ಬೆಳ್ಮಣ್ – ಮುಂಡ್ಕೂರು ಮಾರ್ಗವಾಗಿ ಸಂಚರಿಸಬೇಕು.
3. ರಾತ್ರಿ ಪ್ರಯಾಣಿಕ ಬಸ್ಸುಗಳ ಸಂಚಾರ:
- ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುವ ರಾತ್ರಿ ಪ್ರಯಾಣಿಕ ಬಸ್ಸುಗಳು ರಾತ್ರಿ 9:00 ಗಂಟೆಯ ನಂತರವೇ ಉಡುಪಿಯಿಂದ ಹೊರಡಲು ಅವಕಾಶವಿರುತ್ತದೆ.
4. ಮಂಗಳೂರು-ಉಡುಪಿ ಮಾರ್ಗವಾಗಿ ಸಾಗುವ ಘನ ವಾಹನಗಳಿಗೆ:
- ಈ ಮಾರ್ಗವಾಗಿ ಸಾಗುವ ಘನ ವಾಹನಗಳು ಸಂಜೆ 5:00 ರಿಂದ ರಾತ್ರಿ 10:00 ಗಂಟೆ ಮಧ್ಯೆ ಸಂಚರಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
- ವಾಹನ ಸವಾರರು ಈ ಸೂಚನೆಗಳನ್ನು ಪಾಲಿಸಿ, ಶೋಭಾಯಾತ್ರೆ ಸುಗಮವಾಗಿ ನಡೆಯಲು ಸಹಕರಿಸಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
































