spot_img

ಉಡುಪಿ: ಮೊಬೈಲ್ ಮೂಲಕ ತಲಾಖ್ ಘೋಷಿಸಿದ ಪತಿ

Date:

ಉಡುಪಿ: ಮೊದಲ ಪತ್ನಿಗೆ ತಿಳಿಯದಂತೆ ಎರಡನೇ ಮದುವೆ ಮಾಡಿಕೊಂಡು ದುಬೈಗೆ ಹಾರಿ, ಮೊಬೈಲ್ ಕರೆಯಲ್ಲಿ “ತಲಾಖ್ ತಲಾಖ್ ತಲಾಖ್” ಎಂದು ಘೋಷಿಸಿದ ಪತಿಯ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

2013ರಲ್ಲಿ ಮಂಗಳೂರಿನ ಬೋಳಾರಿನ ಶಾದಿ ಮಹಲ್ನಲ್ಲಿ ಇಸ್ಲಾಮಿಕ್ ಷರಿಯತ್ ಪ್ರಕಾರ ಆದಿಲ್ ಇಬ್ರಾಹಿಂ ಮತ್ತು ಅಮ್ರಿನ್ ಜೋಡಿ ಮದುವೆಯಾಗಿತ್ತು. ಮದುವೆಯ ಸಮಯದಲ್ಲಿ ವಧುವಿನ ಕುಟುಂಬವು 60 ಪವನ್ (ಸುಮಾರು 700 ಗ್ರಾಂ) ಚಿನ್ನ, ಗೃಹೋಪಯೋಗಿ ಸಾಮಗ್ರಿಗಳನ್ನು ವರದಕ್ಷಿಣೆಯಾಗಿ ನೀಡಿತ್ತು. ಹಾಗೆಯೇ, 10 ಪವನ್ (ಸುಮಾರು 116 ಗ್ರಾಂ) ಚಿನ್ನದ ಉಡುಗೊರೆ ಮತ್ತು 8 ಲಕ್ಷ ರೂಪಾಯಿಗಳನ್ನು ಮದುವೆ ಖರ್ಚಿಗಾಗಿ ವಧುವಿನ ತಂದೆ ಖರ್ಚು ಮಾಡಿದ್ದರು.

ಮದುವೆಯ ನಂತರ, ಆದಿಲ್ ಸಾಲ ತೀರಿಸಲು ಚಿನ್ನ ಬೇಕೆಂದು ಕೇಳಿದಾಗ, ಅಮ್ರಿನ್ 10 ಪವನ್ ಚಿನ್ನವನ್ನು ನೀಡಿದ್ದಳು. ಕೆಲವು ತಿಂಗಳ ನಂತರ ಮತ್ತೊಂದು 10 ಪವನ್ ಚಿನ್ನದ ಹಾರವನ್ನು ಅಡವಿಟ್ಟು ಹಣ ಪಡೆದರು. ನಂತರ, 40 ಗ್ರಾಂ ಚಿನ್ನ ಮತ್ತು 2.5 ಲಕ್ಷ ರೂಪಾಯಿಗಳನ್ನು ಮೋಸದಿಂದ ಪಡೆದು ಹಿಂತಿರುಗಿಸಲಿಲ್ಲ. 8 ತಿಂಗಳ ನಂತರ, ಆದಿಲ್ ಅಮ್ರಿನ್ ಅಕ್ಕನ 120 ಗ್ರಾಂ ಚಿನ್ನವನ್ನು ಅಡವಿಟ್ಟು ಬ್ರಹ್ಮಾವರದ ಮೀನಾ ಅನ್ ಮೋಲ್ ನಲ್ಲಿ ಮನೆ ಖರೀದಿಸಿದರು.

ಇದಲ್ಲದೇ, ಅಮ್ರಿನ್ ಗಮನಿಸದಂತೆ 2025ರ ಜೂನ್ 3ರಂದು ಆದಿಲ್ ಎರಡನೇ ಮದುವೆ ಮಾಡಿಕೊಂಡು, ಜೂನ್ 4ರಂದು ಹೊಸ ಪತ್ನಿಯೊಂದಿಗೆ ದುಬೈಗೆ ತೆರಳಿದ್ದರು. ಇದನ್ನು ತಿಳಿದ ಅಮ್ರಿನ್ ಪತಿಗೆ ಕರೆ ಮಾಡಿದಾಗ, ಆದಿಲ್ ತಾನು ಎರಡನೇ ಮದುವೆ ಮಾಡಿಕೊಂಡಿದ್ದಾಗಿ ಹೇಳಿ, “ತಲಾಖ್ ತಲಾಖ್ ತಲಾಖ್” ಎಂದು ಮೂರು ಬಾರಿ ಘೋಷಿಸಿದ್ದಾರೆ. ಇದರ ನಂತರ ಅಮ್ರಿನ್ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಕ್ಯಾಪ್ಟನ್ ವಿಕ್ರಮ್ ಬತ್ರಾ ಜನ್ಮದಿನ

ನಮ್ಮ ದೇಶದ ಇತಿಹಾಸದಲ್ಲಿ ದೇಶಭಕ್ತಿ ಮತ್ತು ಧೈರ್ಯದ ಸಂಕೇತವಾಗಿ ನಿಂತಿರುವ ಹೆಸರುಗಳಲ್ಲಿ ಕ್ಯಾಪ್ಟನ್ ವಿಕ್ರಮ್ ಬತ್ರಾ ಅವರದ್ದು ಅಮರ

ಫುಟ್‌ಬಾಲ್ : ಕಾರ್ಕಳ ಜ್ಞಾನಸುಧಾ ತಂಡ ಜಿಲ್ಲಾಮಟ್ಟಕ್ಕೆ

ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

‘ಸೇವಾ ಪಾಕ್ಷಿಕ ಅಭಿಯಾನ’ ಯಶಸ್ವಿಗೊಳಿಸಲು ಕುತ್ಯಾರು ನವೀನ್ ಶೆಟ್ಟಿ ಕರೆ

ಜಿಲ್ಲೆಯಾದ್ಯಂತ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನವನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪರಿಶ್ರಮದ ಮೂಲಕ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಕ್ರಿಯೇಟಿವ್ ಕಾಲೇಜಿನಲ್ಲಿ ಗುರುದೇವೋಭವ ಕಾರ್ಯಕ್ರಮ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ, 'ಕ್ರಿಯೇಟಿವ್ ಗುರುದೇವೋಭವ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜ್ಞಾನ ಜ್ಯೋತಿಯನ್ನು ಬೆಳಗಿ, ಡಾ. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.