spot_img

ಅಮೆರಿಕದ ‘ಗೋಲ್ಡನ್ ಡೋಮ್’ ರಕ್ಷಣಾ ಯೋಜನೆ ಘೋಷಿಸಿದ ಟ್ರಂಪ್: ಬಾಹ್ಯಾಕಾಶದಿಂದಲೇ ಕ್ಷಿಪಣಿ ದಾಳಿಗೆ ತಡೆ

Date:

spot_img
spot_img

ವಾಷಿಂಗ್ಟನ್: ಜಗತ್ತಿನ ಯಾವುದೇ ಭಾಗದಿಂದ ಅಮೆರಿಕದ ಮೇಲೆ ನಡೆಯಬಹುದಾದ ಕ್ಷಿಪಣಿ ದಾಳಿಗಳನ್ನು ತಡೆಯಲು ಬಾಹ್ಯಾಕಾಶ ಆಧಾರಿತ ರಕ್ಷಣಾ ವ್ಯವಸ್ಥೆಯಾದ ‘ಗೋಲ್ಡನ್ ಡೋಮ್’ ಅನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಯೋಜನೆ ಜಗತ್ತಿನಲ್ಲಿ ಮೊದಲ ಬಾರಿಗೆ ಕೈಗೊಳ್ಳಲಾಗುತ್ತಿದೆ.

ಸುಮಾರು ₹14.97 ಲಕ್ಷ ಕೋಟಿ ವೆಚ್ಚದಲ್ಲಿ ಈ ಯೋಜನೆ 2029ರ ವೇಳೆಗೆ ಪೂರ್ಣಗೊಳ್ಳಲಿದೆ. ಮೊದಲ ಹಂತಕ್ಕೆ ₹2.13 ಲಕ್ಷ ಕೋಟಿ ಮೀಸಲಿಡಲಾಗಿದೆ. ಆದರೆ, ಅಮೇರಿಕಾದ ಕೆಲ ಅಧಿಕಾರಿಗಳ ಪ್ರಕಾರ ಇದು ₹13.77 ಲಕ್ಷ ಕೋಟಿಯಿಂದ ₹46.35 ಲಕ್ಷ ಕೋಟಿವರೆಗೆ ವೆಚ್ಚವಾಗಬಹುದು.

ಈ ಯೋಜನೆಯ ನೇತೃತ್ವವನ್ನು ಅಮೆರಿಕದ ಸ್ಪೇಸ್ ಫೋರ್ಸ್ ಮುಖ್ಯಸ್ಥ ಜನರಲ್ ಮಿಚೆಲ್ ಗೆಟಿಯನ್ ವಹಿಸಿಕೊಳ್ಳಲಿದ್ದಾರೆ.

ಉಪಗ್ರಹಗಳ ಮೂಲಕ ತಕ್ಷಣದ ಪ್ರತಿಕ್ರಿಯೆ
ಗೋಲ್ಡನ್ ಡೋಮ್ ವ್ಯವಸ್ಥೆಯಲ್ಲಿ ಬಹುಸಂಖ್ಯೆಯ ಉಪಗ್ರಹಗಳನ್ನು ಉಡಾವಣೆ ಮಾಡಿ, ಕ್ಷಿಪಣಿ ದಾಳಿಗಳನ್ನು ಮುಂಚಿತವಾಗಿ ಪತ್ತೆಹಚ್ಚಿ ನಾಶಪಡಿಸಲಾಗುತ್ತದೆ. ಖಂಡಾಂತರ ಕ್ಷಿಪಣಿಗಳ ಉಡಾವಣೆಯನ್ನೇ ತಕ್ಷಣ ಪತ್ತೆಹಚ್ಚುವ ತಂತ್ರಜ್ಞಾನ ಇದರಲ್ಲಿ ಅಳವಡಿಸಲಾಗಿದೆ. ಉಪಗ್ರಹಗಳು ಭೂಮಿಯ ಸುತ್ತ ತಟಸ್ಥವಾಗಿರದೆ ತಿರುಗುತ್ತಾ ಭದ್ರತಾ ಜಾಗೃತಿಯಲ್ಲಿ ತೊಡಗಿರುತ್ತವೆ.

ಬಹುಮಟ್ಟದ ರಕ್ಷಣಾ ಕವಚ
ಈ ವ್ಯವಸ್ಥೆ ಬಾಹ್ಯಾಕಾಶ, ಭೂಮಿ, ಸಮುದ್ರ ಹಾಗೂ ವಾಯು ಪ್ರದೇಶಗಳಾದ ನಾಲ್ಕು ಪ್ರಮುಖ ಮಟ್ಟಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಬಾಹ್ಯಾಕಾಶದಿಂದ: ಶತ್ರು ಕ್ಷಿಪಣಿಗಳ ಪತ್ತೆ ಮತ್ತು ನಾಶ

ಭೂಮಿಯಲ್ಲಿ: ರಾಡಾರ್ ಹಾಗೂ ಪ್ರತಿದಾಳಿ ವ್ಯವಸ್ಥೆಗಳ ಮೂಲಕ ತಡೆಯಲು

ಸಮುದ್ರದಲ್ಲಿ: ನೌಕಾನಿರೋಧಕ ವ್ಯವಸ್ಥೆಗಳ ಮೂಲಕ ರಕ್ಷಣಾ ಕಾರ್ಯ

ವಾಯುಪ್ರದೇಶದಲ್ಲಿ: ವಿಮಾನಗಳ ಮೂಲಕ ಮಧ್ಯಮ ಶ್ರೇಣಿಯ ದಾಳಿಗಳಿಗೆ ತಡೆ

ಗೋಲ್ಡನ್ ಡೋಮ್ ಏಕೆ ವಿಶೇಷ?

  • ಬಾಹ್ಯಾಕಾಶದಿಂದಲೇ ಶತ್ರು ದಾಳಿಗಳ ತಡೆ
  • ಕ್ಷಿಪಣಿಗಳನ್ನು ಮಾರ್ಗಮಧ್ಯದಲ್ಲಿಯೇ ನಾಶಪಡುವ ಸಾಮರ್ಥ್ಯ
  • ಭೂಮಿ, ಸಮುದ್ರ ಮತ್ತು ಗಗನದಿಂದ ಸಹ ಪ್ರತ್ಯುತ್ತರದ ವ್ಯವಸ್ಥೆ
  • 2029ರ ವೇಳೆಗೆ ಕಾರ್ಯಚಟುವಟಿಕೆ ಆರಂಭ ನಿರೀಕ್ಷೆ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ನಿಧನಕ್ಕೆ ದಿನಕರ ಶೆಟ್ಟಿ ಪಳ್ಳಿ ಸಂತಾಪ

ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (48) ಅವರ ಆತ್ಮಹತ್ಯೆಯ ದುರಂತ ಸಾವಿನ ವಿಷಯ ತಿಳಿದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ದಿನಕರ ಶೆಟ್ಟಿ, ಪಳ್ಳಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಪಾಸ್‌ಪೋರ್ಟ್‌ ವಿಷಯಕ್ಕೆ ಜಗಳ: ಮಗಳ ಎದುರೇ ಹೆಂಡತಿಯನ್ನು ಗುಂಡಿಟ್ಟು ಕೊಂದ ಪತಿ

ಪಾಸ್‌ಪೋರ್ಟ್ ವಿಚಾರವಾಗಿ ನಡೆದ ಜಗಳದಲ್ಲಿ ಪತಿಯೋರ್ವ ತನ್ನ ಮಗಳ ಎದುರೇ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಂಗಳವಾರ (ಅ. 14) ಬೆಳಗ್ಗೆ ನಡೆದಿದೆ.

ಜಿಟೆಕ್ಸ್ ಗ್ಲೋಬಲ್ 2025: ವೀಸಾ ಉಲ್ಲಂಘನೆ ಪತ್ತೆಗೆ ಎ.ಐ. ಶಸ್ತ್ರ ಸಜ್ಜಿತ ಸ್ಮಾರ್ಟ್ ಕಾರುಗಳು – ದುಬೈಯಿಂದ ತಂತ್ರಜ್ಞಾನದ ಹೊಸ ದಾಪುಗಾಲು

ದುಬೈನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನವಾದ ಜಿಟೆಕ್ಸ್ ಗ್ಲೋಬಲ್ 2025 ಮತ್ತೊಮ್ಮೆ ವಿಶ್ವದ ಗಮನವನ್ನು ಸೆಳೆದಿದೆ

ಭಾರತದಲ್ಲಿ AI ಹಬ್‌: $15 ಬಿಲಿಯನ್ ಹೂಡಿಕೆಗೆ ಮುಂದಾದ ಗೂಗಲ್; ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಸುಂದರ್ ಪಿಚೈ

ಟೆಕ್ ದೈತ್ಯ ಗೂಗಲ್‌ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ಅವರು ಮಂಗಳವಾರ (ಅ. 14) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೃತಕ ಬುದ್ಧಿಮತ್ತೆ (AI) ಕುರಿತು ಮಹತ್ವದ ಮಾತುಕತೆ ನಡೆಸಿದರು.