spot_img

ಅಮೆರಿಕದ ‘ಗೋಲ್ಡನ್ ಡೋಮ್’ ರಕ್ಷಣಾ ಯೋಜನೆ ಘೋಷಿಸಿದ ಟ್ರಂಪ್: ಬಾಹ್ಯಾಕಾಶದಿಂದಲೇ ಕ್ಷಿಪಣಿ ದಾಳಿಗೆ ತಡೆ

Date:

ವಾಷಿಂಗ್ಟನ್: ಜಗತ್ತಿನ ಯಾವುದೇ ಭಾಗದಿಂದ ಅಮೆರಿಕದ ಮೇಲೆ ನಡೆಯಬಹುದಾದ ಕ್ಷಿಪಣಿ ದಾಳಿಗಳನ್ನು ತಡೆಯಲು ಬಾಹ್ಯಾಕಾಶ ಆಧಾರಿತ ರಕ್ಷಣಾ ವ್ಯವಸ್ಥೆಯಾದ ‘ಗೋಲ್ಡನ್ ಡೋಮ್’ ಅನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಯೋಜನೆ ಜಗತ್ತಿನಲ್ಲಿ ಮೊದಲ ಬಾರಿಗೆ ಕೈಗೊಳ್ಳಲಾಗುತ್ತಿದೆ.

ಸುಮಾರು ₹14.97 ಲಕ್ಷ ಕೋಟಿ ವೆಚ್ಚದಲ್ಲಿ ಈ ಯೋಜನೆ 2029ರ ವೇಳೆಗೆ ಪೂರ್ಣಗೊಳ್ಳಲಿದೆ. ಮೊದಲ ಹಂತಕ್ಕೆ ₹2.13 ಲಕ್ಷ ಕೋಟಿ ಮೀಸಲಿಡಲಾಗಿದೆ. ಆದರೆ, ಅಮೇರಿಕಾದ ಕೆಲ ಅಧಿಕಾರಿಗಳ ಪ್ರಕಾರ ಇದು ₹13.77 ಲಕ್ಷ ಕೋಟಿಯಿಂದ ₹46.35 ಲಕ್ಷ ಕೋಟಿವರೆಗೆ ವೆಚ್ಚವಾಗಬಹುದು.

ಈ ಯೋಜನೆಯ ನೇತೃತ್ವವನ್ನು ಅಮೆರಿಕದ ಸ್ಪೇಸ್ ಫೋರ್ಸ್ ಮುಖ್ಯಸ್ಥ ಜನರಲ್ ಮಿಚೆಲ್ ಗೆಟಿಯನ್ ವಹಿಸಿಕೊಳ್ಳಲಿದ್ದಾರೆ.

ಉಪಗ್ರಹಗಳ ಮೂಲಕ ತಕ್ಷಣದ ಪ್ರತಿಕ್ರಿಯೆ
ಗೋಲ್ಡನ್ ಡೋಮ್ ವ್ಯವಸ್ಥೆಯಲ್ಲಿ ಬಹುಸಂಖ್ಯೆಯ ಉಪಗ್ರಹಗಳನ್ನು ಉಡಾವಣೆ ಮಾಡಿ, ಕ್ಷಿಪಣಿ ದಾಳಿಗಳನ್ನು ಮುಂಚಿತವಾಗಿ ಪತ್ತೆಹಚ್ಚಿ ನಾಶಪಡಿಸಲಾಗುತ್ತದೆ. ಖಂಡಾಂತರ ಕ್ಷಿಪಣಿಗಳ ಉಡಾವಣೆಯನ್ನೇ ತಕ್ಷಣ ಪತ್ತೆಹಚ್ಚುವ ತಂತ್ರಜ್ಞಾನ ಇದರಲ್ಲಿ ಅಳವಡಿಸಲಾಗಿದೆ. ಉಪಗ್ರಹಗಳು ಭೂಮಿಯ ಸುತ್ತ ತಟಸ್ಥವಾಗಿರದೆ ತಿರುಗುತ್ತಾ ಭದ್ರತಾ ಜಾಗೃತಿಯಲ್ಲಿ ತೊಡಗಿರುತ್ತವೆ.

ಬಹುಮಟ್ಟದ ರಕ್ಷಣಾ ಕವಚ
ಈ ವ್ಯವಸ್ಥೆ ಬಾಹ್ಯಾಕಾಶ, ಭೂಮಿ, ಸಮುದ್ರ ಹಾಗೂ ವಾಯು ಪ್ರದೇಶಗಳಾದ ನಾಲ್ಕು ಪ್ರಮುಖ ಮಟ್ಟಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಬಾಹ್ಯಾಕಾಶದಿಂದ: ಶತ್ರು ಕ್ಷಿಪಣಿಗಳ ಪತ್ತೆ ಮತ್ತು ನಾಶ

ಭೂಮಿಯಲ್ಲಿ: ರಾಡಾರ್ ಹಾಗೂ ಪ್ರತಿದಾಳಿ ವ್ಯವಸ್ಥೆಗಳ ಮೂಲಕ ತಡೆಯಲು

ಸಮುದ್ರದಲ್ಲಿ: ನೌಕಾನಿರೋಧಕ ವ್ಯವಸ್ಥೆಗಳ ಮೂಲಕ ರಕ್ಷಣಾ ಕಾರ್ಯ

ವಾಯುಪ್ರದೇಶದಲ್ಲಿ: ವಿಮಾನಗಳ ಮೂಲಕ ಮಧ್ಯಮ ಶ್ರೇಣಿಯ ದಾಳಿಗಳಿಗೆ ತಡೆ

ಗೋಲ್ಡನ್ ಡೋಮ್ ಏಕೆ ವಿಶೇಷ?

  • ಬಾಹ್ಯಾಕಾಶದಿಂದಲೇ ಶತ್ರು ದಾಳಿಗಳ ತಡೆ
  • ಕ್ಷಿಪಣಿಗಳನ್ನು ಮಾರ್ಗಮಧ್ಯದಲ್ಲಿಯೇ ನಾಶಪಡುವ ಸಾಮರ್ಥ್ಯ
  • ಭೂಮಿ, ಸಮುದ್ರ ಮತ್ತು ಗಗನದಿಂದ ಸಹ ಪ್ರತ್ಯುತ್ತರದ ವ್ಯವಸ್ಥೆ
  • 2029ರ ವೇಳೆಗೆ ಕಾರ್ಯಚಟುವಟಿಕೆ ಆರಂಭ ನಿರೀಕ್ಷೆ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಾಗಲಕಾಯಿಯ ಆರೋಗ್ಯ ರಹಸ್ಯ!

ಅಧ್ಯಯನಗಳ ಪ್ರಕಾರ, ಮಧುಮೇಹ ನಿಯಂತ್ರಣ, ರಕ್ತ ಶುದ್ಧೀಕರಣ, ಹೃದಯ ಆರೋಗ್ಯ, ಚರ್ಮ-ಕೂದಲು ಕಾಳಜಿಗೆ ಹಾಗಲಕಾಯಿ ಮಹತ್ವದ ಪಾತ್ರ ವಹಿಸುತ್ತದೆ.

ಸರಕಾರಿ ಶಾಲೆಗಳಲ್ಲಿ ಜೂನ್ 30ರೊಳಗೆ ವಿದ್ಯಾರ್ಥಿ ದಾಖಲಾತಿ ಪೂರ್ಣಗೊಳಿಸಿ: ಶಿಕ್ಷಣ ಇಲಾಖೆಯಿಂದ ಮುಖ್ಯ ಶಿಕ್ಷಕರಿಗೆ ನಿರ್ದೇಶನ

ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದೆ.

ಪಬ್ ಮುಂದೆ ಕುಡಿದ ಮತ್ತಿನಲ್ಲಿ ಯುವತಿಯರ ಮಾರಾಮಾರಿ

ಮಧ್ಯಪ್ರದೇಶದ ಇಂದೋರ್‌ನ ವಿಜಯನಗರ ಪ್ರದೇಶದಲ್ಲಿ ಪಬ್‌ನಿಂದ ಹೊರಬಂದ ನಂತರ ಕುಡಿದ ಮತ್ತಿನಲ್ಲಿ ಯುವತಿಯರು ಹೊಡೆದಾಡಿದ ಪ್ರಕರಣವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

‘ಕೊತ್ತಲವಾಡಿ’ ಟೀಸರ್ ಬಿಡುಗಡೆ: ಸೊಸೆ ರಾಧಿಕಾಳ ಬಗ್ಗೆ ಯಶ್ ತಾಯಿ ಪುಷ್ಪಾರವರ ಮನದಾಳದ ಮೆಚ್ಚುಗೆ

ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅವರು ಸಿನಿಮಾ ನಿರ್ಮಾಣದ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟಿದ್ದಾರೆ.