spot_img

ಕಳ್ಳ-ಪೊಲೀಸ್ ಆಟದ ವೇಳೆ ದುರ್ಘಟನೆ – ಗುಂಡೇಟಿನಿಂದ 3 ವರ್ಷದ ಮಗುವಿನ ದಾರುಣ ಅಂತ್ಯ!

Date:

ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಂದೇಮಾದಿಹಳ್ಳಿಯಲ್ಲಿ ನಡೆದ ಅಕಸ್ಮಿಕ ಗುಂಡಿನ ದಾಳಿ ದಾರುಣ ಅನಾಹುತಕ್ಕೆ ಕಾರಣವಾಗಿದೆ. 13 ವರ್ಷದ ಬಾಲಕನೊಬ್ಬ ಆಟವಾಡುವ ವೇಳೆ ಆಕಸ್ಮಿಕವಾಗಿ ತನ್ನ 3 ವರ್ಷದ ತಮ್ಮನ ಮೇಲೆ ಗುಂಡು ಹಾರಿಸಿ ಅವನ ಸಾವಿಗೆ ಕಾರಣನಾದ ಘಟನೆ ನಡೆದಿದೆ.

ಈ ದುರ್ಘಟನೆ ನಾಗಮಂಗಲದ ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿಯವರ ಕೋಳಿ ಫಾರಂನಲ್ಲಿ ನಡೆದಿದೆ. ಕೋಳಿಫಾರಂನ ಭದ್ರತೆಗೆ ಅಲ್ಲಿ ಒಂದು ಅಸಲಿ ಗನ್ ಇಡಲಾಗಿತ್ತು. ಪಶ್ಚಿಮ ಬಂಗಾಳ ಮೂಲದ ಕೂಲಿ ಕಾರ್ಮಿಕ ದಂಪತಿ ಶಶಾಂಕ್ ಮತ್ತು ಲಿಪಿಕ ಈ ಕೋಳಿಫಾರಂನಲ್ಲಿ ಕೆಲಸ ಮಾಡುತ್ತಿದ್ದು, ಅವರ ಪುತ್ರ 13 ವರ್ಷದ ಸುದೀಪ್ ದಾಸ್ ಮತ್ತು 3 ವರ್ಷದ ಮಗುವನ್ನು ಆಟವಾಡಲು ಬಿಟ್ಟು ಅವರು ಕೆಲಸಕ್ಕೆ ತೆರಳಿದ್ದರು.

ಸುದೀಪ್ ಫಾರಂನಲ್ಲಿ ಇದ್ದ ಗನ್ ತೆಗೆದುಕೊಂಡು “ಕಳ್ಳ-ಪೊಲೀಸ್” ಆಟವಾಡಲು ಮುಂದಾದಾಗ ಆಕಸ್ಮಿಕವಾಗಿ ಗುಂಡು ಹಾರಿ 3 ವರ್ಷದ ಮಗುವಿನ ಹೊಟ್ಟೆಗೆ ತಗುಲಿದೆ. ಇದರಿಂದ ಮಗುವಿನ ಹೊಟ್ಟೆ ಛಿದ್ರಗೊಂಡಿದ್ದು,ಕರುಳು ಹೊರಬಂದು ತೀವ್ರ ರಕ್ತಸ್ರಾವವಾಗತೊಡಗಿದೆ. ಬಾಲಕನ ತಾಯಿ ಲಿಪಿಕ ಕೂಡ ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ.

ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಹೊಟ್ಟೆಯ ಗಾಯದಿಂದ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಈ ದುರ್ಘಟನೆಯು ಕುಟುಂಬದವರ ದುಃಖಕ್ಕೆ ಕಾರಣವಾಗಿದ್ದು, ಗ್ರಾಮಸ್ಥರೂ ಆಘಾತಗೊಂಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೋಳಿಫಾರಂನಲ್ಲಿದ್ದ ಗನ್ ಮಕ್ಕಳಿಗೆ ಹೇಗೆ ಲಭ್ಯವಾಯಿತು? ಅದನ್ನು ಭದ್ರವಾಗಿರಿಸಿರಲಿಲ್ಲವೇ ? ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸೆಪ್ಟೆಂಬರ್ 12 ಕಾರ್ಕಳಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ‌ ಆಶ್ರಯದಲ್ಲಿ ಕಾರ್ಕಳ‌ ಪುರಸಭೆ ಮತ್ತು ಕುಕ್ಕುಂದೂರು ಪಂಚಾಯತ್ ವ್ಯಾಪ್ತಿಯ ಗ್ಯಾರಂಟಿ ಸಮಾವೇಶ ಮತ್ತು ಅದಾಲತ್ ಕಾರ್ಯಕ್ರಮವು ದಿನಾಂಕ 12/09/2025 ನೇ ಶುಕ್ರವಾರ ಅಪರಾಹ್ನ 3.00 ಗಂಟೆಗೆ ಕಾರ್ಕಳ ಮಂಜುನಾಥ ಪೈ ಸಭಾಭವನದಲ್ಲಿ ಜರುಗಲಿದೆ.

ತಮಾಷೆಯ ಮಾತು ಕೊಲೆಯಲ್ಲಿ ಅಂತ್ಯ: ಹಣ್ಣಿನ ವ್ಯಾಪಾರಿಗಳ ನಡುವಿನ ಜಗಳಕ್ಕೆ ಚಿಂತಾಮಣಿಯಲ್ಲಿ ದುರಂತ ಅಂತ್ಯ

ಚಿಂತಾಮಣಿ ಪಟ್ಟಣದಲ್ಲಿ ನಡೆದ ದಾರುಣ ಘಟನೆಯಲ್ಲಿ, ಇಬ್ಬರು ಗೆಳೆಯರ ನಡುವಿನ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಮೂಗಿನ ಹತ್ತಿರದ ಪಿಂಪಲ್ ಒಡೆಯುವ ಮೊದಲು ಯೋಚಿಸಿ: ಮೆದುಳಿನ ಸೋಂಕಿನ ಅಪಾಯಕ್ಕೆ ಸಿಲುಕಿಸುವ ಕರಾಳ ಸತ್ಯ!

ಮೊಡವೆಗಳನ್ನು ಒಡೆದರೆ ಅಥವಾ ಚಿವುಟಿದರೆ ಗಂಭೀರ ಸೋಂಕು ಉಂಟಾಗುವ ಸಾಧ್ಯತೆ ಇದೆ ಎಂದು ಚರ್ಮರೋಗ ತಜ್ಞರು ಎಚ್ಚರಿಕೆ ನೀಡುತ್ತಾರೆ.

ಡಾ.ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನದ ಉದ್ಘಾಟನೆ.

ದಿನಾಂಕ 10-09-2025 ರ ಬುಧವಾರದಂದು ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರೆಡು ದಿನಗಳ ಕಾಲ ನಡೆಯಲಿರುವ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು.