
ಉಡುಪಿ: ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ಜಿಲ್ಲೆಯಲ್ಲಿ ನಡೆಯುವ SSLC ಪರೀಕ್ಷೆಗಳ ವೇಳೆ ಅವ್ಯವಹಾರ ತಡೆಯಲು ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗಿದೆ.
ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆದೇಶದ ಪ್ರಕಾರ:
*ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಬುಕ್ಸ್ಟಾಲ್ ಮುಂತಾದವು ಮುಚ್ಚಲ್ಪಡಲಿದೆ.
*ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರಲು ನಿರ್ಬಂಧ.
*ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿ.
*ಧ್ವನಿವರ್ಧಕ ಬಳಕೆ ಸಂಪೂರ್ಣ ನಿಷೇಧ.
*ಮೆಟಲ್ ವಾಟರ್ ಬಾಟಲ್ ಹಾಗೂ ಅಪಾರದರ್ಶಕ ಬಾಟಲ್ಗಳನ್ನು ತರಲು ನಿರ್ಬಂಧ.
*ಹಿಯರಿಂಗ್ ಏಡ್ ಧರಿಸಿದ ಅಭ್ಯರ್ಥಿಗಳಿಗೆ ವೈದ್ಯಕೀಯ ದಾಖಲೆಗಳೊಂದಿಗೆ ವಿಶೇಷ ತಪಾಸಣೆ ಕಡ್ಡಾಯ.
*ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಹಾಗೂ ಇತರ ಸಂಪರ್ಕ ಸಾಧನಗಳ ಬಳಕೆ ನಿಷೇಧ.
ಈ ನಿಯಮಗಳು ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ಪರೀಕ್ಷಾ ಅವಧಿಯಲ್ಲಿ ಜಾರಿಯಲ್ಲಿರಲಿದೆ.