ಕ್ಷಮೆ ಕೇಳದಿದ್ದರೆ ‘ಥಗ್ ಲೈಫ್’ ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶವಿಲ್ಲ – ಕೆಎಫ್‌ಸಿಸಿ ಸ್ಪಷ್ಟನೆ!

Date:

spot_img

ಬೆಂಗಳೂರು: ತಮ್ಮ ವಿವಾದಿತ ಹೇಳಿಕೆಯ ಕುರಿತು ಕ್ಷಮೆ ಕೇಳದೇ ಇದ್ದರೆ ನಟ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಸಿನಿಮಾ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶವಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಪ್ರಕಟಿಸಿದೆ.

ಸೋಮವಾರ ಕನ್ನಡಪರ ಸಂಘಟನೆಗಳ ಮನವಿಯನ್ನು ಸ್ವೀಕರಿಸಿದ ನಂತರ KFCC ಅಧ್ಯಕ್ಷ ಎಂ. ನರಸಿಂಹಲು ಮಾತನಾಡಿ, “ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ” ಎಂಬ ಕಮಲ್ ಹಾಸನ್ ಹೇಳಿಕೆ ಖಂಡನೀಯವಾಗಿದೆ ಎಂದು ಹೇಳಿದ್ದಾರೆ. “ಅವರು ಕ್ಷಮೆ ಕೇಳದೇ ಇದ್ದರೆ ಚಿತ್ರದ ಬಿಡುಗಡೆಯ ಪ್ರಶ್ನೆಯೇ ಇಲ್ಲ” ಎಂದು ತೀವ್ರವಾಗಿ ಸ್ಪಷ್ಟಪಡಿಸಿದ್ದಾರೆ.

ಸಿನಿಮಾ ವಿತರಕರು ಬೇರೆ ಚಿತ್ರಗಳ ಪ್ರದರ್ಶನಕ್ಕೆ ತಯಾರಿ ನಡೆಸುತ್ತಿದ್ದಾರೆ. “ಕ್ಷಮೆ ಕೇಳಿದರೂ ಕೂಡ ತಕ್ಷಣದಲ್ಲಿ ಬಿಡುಗಡೆಗೆ ಅನುಮತಿ ಸಿಗದು,” ಎಂದು ತಿಳಿಸಿರುವ ಮಂಡಳಿ, ದೂರು ನೀಡಿದ ಕನ್ನಡ ಸಂಘಟನೆಗಳೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.

ಈ ವೇಳೆ ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಕೂಡ ಪ್ರತಿಕ್ರಿಯಿಸಿ, “ನಮ್ಮ ಕಲಾವಿದರ ಸಂಘಗಳು ನಾಡಿನ ಗೌರವ ಉಳಿಸಬೇಕು. ಇದು ನಮ್ಮ ಸ್ವಾಭಿಮಾನದ ವಿಷಯ. ಕಮಲ್ ಹಾಸನ್ ಚಿತ್ರ ಬಿಡುಗಡೆಗೆ ಅವಕಾಶವಿಲ್ಲ,” ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಈ ವೇಳೆ ದುಬೈನಲ್ಲಿ ಇದ್ದು, ಜೂನ್ 3ರಂದು ಚೆನ್ನೈಗೆ ಮರಳಲಿದ್ದಾರೆ ಎನ್ನಲಾಗಿದೆ. ‘ಥಗ್ ಲೈಫ್’ ಚಿತ್ರದ ವಿತರಕರು ಕೂಡ KFCCಗೆ ಮಧ್ಯಾಹ್ನದವರೆಗೆ ಸಮಯ ಕೋರಿದ್ದಾರೆ. ಆದರೆ “ನಾವು ಕಮಲ್ ಹಾಸನ್‌ಗಾಗಿ ಕಾಯುತ್ತಿಲ್ಲ,” ಎಂಬುದಾಗಿ ಮಂಡಳಿ ತಿಳಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೆಳ್ತಂಗಡಿ ಮದ್ದಡ್ಕ ಅಪಘಾತ: ಮೂರು ವಾಹನಗಳ ಸರಣಿ ಡಿಕ್ಕಿ

ಬೆಳ್ತಂಗಡಿಯ ಮದ್ದಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳು ಹಾಗೂ ಬೈಕ್ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಜೋಶಿ, ಕೋಟಾ ಹೆಸರು

ರಾಜ್ಯ ಬಿಜೆಪಿಯಲ್ಲಿ ಭಾರಿ ಬದಲಾವಣೆಯ ಮುನ್ಸೂಚನೆ ಸಿಕ್ಕಿದ್ದು, ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಜೋಶಿ ಹಾಗೂ ಕೋಟಾ ಹೆಸರು ಕೇಳಿಬರುತ್ತಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮೋದಿ-ಮೆಲೋನಿ ಭೇಟಿ: ಇನ್‌ಸ್ಟಾಗ್ರಾಂ ವೈರಲ್ ಜೋಡಿ ಎಂದು ಹೇಳಿದ ಮೆಲೋನಿ

ಜಿ7 ಶೃಂಗಸಭೆಯಲ್ಲಿ ಮೋದಿ-ಮೆಲೋನಿ ಭೇಟಿ, ವೈರಲ್ ‘ಮೆಲೋಡಿ’ ಬಗ್ಗೆ ನಗುನಗುತ ಚರ್ಚೆ. ಇಟಲಿ ಪ್ರಧಾನಿ ಧೂಮಪಾನ ತ್ಯಜಿಸಿದ ವಿಷಯ ಬಹಿರಂಗ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ಷೀರಭಾಗ್ಯ, ಬಿಸಿಯೂಟಕ್ಕೆ 215 ಕೋಟಿ ಅನುದಾನ; ಕಠಿಣ ನಿಯಮ ಜಾರಿ

ರಾಜ್ಯದಲ್ಲಿ ಕ್ಷೀರಭಾಗ್ಯ ಮತ್ತು ಬಿಸೂಯೂಟ ಯೋಜನೆಗೆ 215.93 ಕೋಟಿ ರೂ. ಬಿಡುಗಡೆಯಾಗಿದ್ದು, ಅಕ್ರಮ ತಡೆಗೆ ದಿನಕ್ಕೆ 3 ಬಾರಿ ಹಾಜರಾತಿ ಕಡ್ಡಾಯವಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.