spot_img

ಯಕ್ಷಗಾನ ನಿಲ್ಲಿಸಲು ಹೋದ ಅಧಿಕಾರಿಗಳೇ.?! ಯಾರಿಗಾಗಿ ಈ ಓಲೈಕೆ : ಶ್ರೀಮತಿ ರಮಿತಾ ಶೈಲೇಂದ್ರ ಸಮಾಜ ಸೇವಕರು ಕಾರ್ಕಳ

Date:

spot_img

ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುಂಡ್ಲಿ ಎಂಬಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಕ್ಕೆ ಮಧ್ಯಪ್ರವೇಶಿಸಿ ತಡೆಯಲು ಪ್ರಯತ್ನಿಸಿದಾಗ ಯಕ್ಷಾಭಿಮಾನಿಗಳು ತಡೆದರು ಇದರಿಂದ ಪೊಲೀಸರು ಹಿಂದೆ ಹೋದರು.
ಕರಾವಳಿ ಭಾಗದಲ್ಲಿ ಗಂಡು ಕಲೆ ಎಂದು ಪ್ರಸಿದ್ಧಿಗೊಂಡಿರುವ ಯಕ್ಷಗಾನಕ್ಕೆ ಈ ರೀತಿ ಅವಮಾನ ಆದರೆ ಮುಂದಿನ ಸ್ಥಿತಿಗತಿಗಳನ್ನು ಎಣಿಸುವಾಗ ಚಿಂತಾ ಜನಕವಾಗಿ ಕಾಣುತ್ತಿದೆ.
ಅಧಿಕಾರಿಗಳ ಈ ವರ್ತನೆ ಯಾರನ್ನು ಓಲೈಕೆ ಮಾಡಲಿಕ್ಕಾಗಿ.?? ನಿಮಗೆ ತುಳುನಾಡುವಿನ ಸಂಸ್ಕೃತಿ,ಕಲೆಗಳ ಬಗ್ಗೆ ಗೌರವ ಇಲ್ಲದಿದ್ದರೆ ವರ್ಗಾವಣೆ ತೆಗೆದುಕೊಂಡು ಹೋಗಿ, ಅದನ್ನು ಬಿಟ್ಟು ಇಲ್ಲಿ ನಡೆಯುವ ಕಲೆಗಳಿಗೆ ಅದನ್ನು ಪೂಜಿಸುವ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸಗಳನ್ನು ಮಾಡಬೇಡಿ. ಓಲೈಕೆಯ ಅಧಿಕಾರ ಹೆಚ್ಚು ದಿನ ಶಾಶ್ವತವಾಗಿ ಉಳಿಯುವುದಿಲ್ಲ, ನಮ್ಮ ತುಳುನಾಡಿನ ಕಲೆಗಳಿಗೆ ತುಳುನಾಡಿನಲ್ಲಿ ಯಾವುದೇ ಅನುಮತಿಗಳ ಅಗತ್ಯವಿಲ್ಲ ಯಾಕೆಂದರೆ ನಾವು ಬೆಳೆದಿರುವುದು ಅದರ ಮದ್ಯದಲ್ಲಿ ಅದು ನಮ್ಮ ಉಸಿರು, ಅದು ನಮ್ಮ ಜೀವನಾಡಿ. ಈ ಯಕ್ಷಗಾನ ಕಲಾವಿದರಿಗೆ ಮತ್ತು ಅಭಿಮಾನಿಗಳಿಗೆ ಅವಮಾನ ಮಾಡಿದ್ದೀರಿ ನಿಮ್ಮಂತಹ ಸಂವಿಧಾನವನ್ನು ಕಲಿತವರು ಹೀಗೆ ಮಾಡಿದಲ್ಲಿ ಸಮಾಜಕ್ಕೆ ಕಾನೂನಿನ ಪಾಠ ಯಾರು ಮಾಡುವುದು. ಇದು ಹೀಗೆ ಮುಂದುವರೆದಲ್ಲಿ ನಿಮ್ಮ ಠಾಣೆ ಎದುರಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕೆಜಿಎಫ್ ಬಾಬು ಮನೆಗೆ R.T.O ದಾಳಿ: ಐಷಾರಾಮಿ ಕಾರುಗಳ ತೆರಿಗೆ ಪರಿಶೀಲನೆ!

ರಾಜಕೀಯ ಮುಖಂಡ ಕೆಜಿಎಫ್ ಬಾಬು ಅವರ ಮನೆಗೆ ಇಂದು ಬೆಳ್ಳಂಬೆಳಗ್ಗೆ ಆರ್ಟಿಓ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಐಷಾರಾಮಿ ಕಾರುಗಳ ತೆರಿಗೆ ಪಾವತಿ ಕುರಿತು ಪರಿಶೀಲನೆ ನಡೆಸಲು ಈ ದಾಳಿ ನಡೆಸಲಾಗಿದೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಉಡುಪಿ ಯೋಜನಾ ಕಚೇರಿಯಲ್ಲಿ ವಾತ್ಸಲ್ಯ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪರಿಸರ ಸಂರಕ್ಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅತ್ರಾಡಿಯಲ್ಲಿ ಗಿಡನಾಟಿ ಮತ್ತು ಮಾಹಿತಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ .ಸಿ.ಟ್ರಸ್ಟ್ (ರಿ) ಉಡುಪಿ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಣಿಪಾಲ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ರಾಡಿ ಇವರ ಸಹಯೋಗದೊಂದಿಗೆ ಗಿಡ ನಾಟಿ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ನಡೆಯಿತು.

ದಿನ ವಿಶೇಷ – ಆದಾಯ ತೆರಿಗೆ ದಿನ

ಇದು ದೇಶದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಪ್ರತಿಯೊಬ್ಬ ನಾಗರಿಕನೂ ಪಾವತಿಸುವ ತೆರಿಗೆಯ ಮಹತ್ವವನ್ನು ನೆನಪಿಸುವ ಒಂದು ಪ್ರಮುಖ ದಿನವಾಗಿದೆ.