spot_img

ನೀರೆ ಜಡ್ಡಿನಂಗಡಿ ತಿರುವಿನಲ್ಲಿ ಭೀಕರ ಅಪಘಾತ: ಕಾರು ಚಾಲಕನಿಗೆ ಗಂಭೀರ ಗಾಯ, ಬಸ್ ಮರಕ್ಕೆ ಡಿಕ್ಕಿ!

Date:

ಉಡುಪಿ, ಮೇ 3: ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಡ್ಡಿನಂಗಡಿ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಹಾಗೂ ಸರಕಾರಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯು ಸಂಜೆ ಹೊತ್ತಿನಲ್ಲಿ ನಡೆದಿದ್ದು, ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.

ಮಾಹಿತಿಯಂತೆ, ಕಾರು ಚಾಲಕ ಕಾರ್ಕಳದಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದರೆ, ಬಸ್ಸು ಉಡುಪಿಯಿಂದ ಧರ್ಮಸ್ಥಳದತ್ತ ಸಾಗುತ್ತಿತ್ತು. ನೀರೆ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಬಸ್ಸಿಗೆ ಡಿಕ್ಕಿಯಾದ ಪರಿಣಾಮ, ಬಸ್ ಚಾಲಕ ಅಪಘಾತ ತಪ್ಪಿಸಲು ಪ್ರಯತ್ನಿಸಿ ವಾಹನವನ್ನು ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ.

ಈ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರು ಚಾಲಕನ ಸ್ಥಿತಿ ಗಂಭೀರವಾಗಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವು ಕಾರ್ಕಳ ಮೂಲದವರು ಎನ್ನಲಾಗಿದ್ದು, ಇನ್ನೂ ಹೆಚ್ಚಿನ ವಿವರಗಳಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಟಿಪ್ಪುವಿನ ಮೃತ್ಯು

ಮೈಸೂರಿನ ಇತಿಹಾಸದಲ್ಲಿ ಕರಾಳ ಅಧ್ಯಾಯವನ್ನು ತೋರಿಸಿದವ ಹೈದರಾಲಿಯ ಮಗ ಟಿಪ್ಪು. 1750 ನವಂಬರ್ 20 ರಂದು ಈಗಿನ ಬೆಂಗಳೂರಿನಲ್ಲಿ ಹುಟ್ಟಿದ್ದು

ಡಾ| ವಿಠ್ಠಲ್ ಅಡ್ಯಂತಾಯರ ಧರ್ಮಪತ್ನಿ ಶ್ರೀಮತಿ ಶಾಂತ ಅಡ್ಯಂತಾಯರ ವಿಧಿವಶ: ನಾಳೆ ಅಂತ್ಯಕ್ರಿಯೆ

ಡಾ| ವಿಠ್ಠಲ್ ಅಡ್ಯಂತಾಯರ ಧರ್ಮಪತ್ನಿ ಶ್ರೀಮತಿ ಬೇಬಿ ಅಡ್ಯಂತಾಯರು (ಶಾಂತ ಅಡ್ಯಂತಾಯ) ಇಂದು ದಿನಾಂಕ 03/05/2025, ಶನಿವಾರದಂದು ಕೊಂಡಾಡಿ ಗುತ್ತಿನ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.

ಹಿರಿಯಡಕ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ನ ಮತ್ತೊಂದು ಶ್ರೇಣಿಗತ ಸಾಧನೆ: ಸತತ 23ನೇ ಬಾರಿಗೆ ಶೇ.100 ಫಲಿತಾಂಶ!

ಇಲ್ಲಿನ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ (ICSE) 10 ನೇ ತರಗತಿ ಪರೀಕ್ಷೆಯಲ್ಲಿ ಸತತವಾಗಿ ಇಪ್ಪತ್ತ ಮೂರನೇ ಬಾರಿಗೆ ಶೇಕಡಾ 100 ಫಲಿತಾಂಶ ದಾಖಲಿಸಿದೆ.

ದಾಸವಾಳದ ಹೂವಿನಲ್ಲಿ ಅಸಂಖ್ಯ ಆರೋಗ್ಯ ಮೌಲ್ಯಗಳು: ಮಧುಮೇಹದಿಂದ ಕ್ಯಾನ್ಸರ್‌ವರೆಗೆ ಪರಿಹಾರ!

ಪ್ರಕೃತಿಯ ಅತ್ಯದ್ಭುತ ಕೊಡುಗೆಗಳಲ್ಲಿ ಒಂದಾದ ದಾಸವಾಳ ಹೂವು ಕೇವಲ ಸೌಂದರ್ಯವನ್ನಷ್ಟೇ ನೀಡುವುದಲ್ಲದೆ, ಅದರಲ್ಲಿರುವ ಔಷಧೀಯ ಗುಣಲಕ್ಷಣಗಳಿಂದ ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಯಲ್ಲೂ ಮಹತ್ತರದ ಪಾತ್ರ ವಹಿಸುತ್ತದೆ.