spot_img

ಹೆಬ್ರಿ ಸಹಕಾರಿ ಸಂಘದಲ್ಲಿ ಅಮಾನತುಗೊಂಡ ಸಿಬ್ಬಂದಿಯಿಂದ ‘ದಲಿತ ದೌರ್ಜನ್ಯ’ ದೂರು ದಾಖಲು!

Date:

spot_img

ಹೆಬ್ರಿ : ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಡೆದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ದೊರಕಿದೆ. ಪ್ರಕರಣದಲ್ಲಿ ಅಮಾನತುಗೊಂಡಿದ್ದ ಸಿಬ್ಬಂದಿಯೊಬ್ಬರು ಇದೀಗ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಆಡಳಿತ ಮಂಡಳಿಯ ವಿರುದ್ಧವೇ ‘ದಲಿತ ದೌರ್ಜನ್ಯ’ ದೂರು ದಾಖಲಿಸಿದ್ದಾರೆ.

ಶಿವಪುರ ಗ್ರಾಮದ ಶಂಕರ ನಾಯ್ಕ ಎಂಬವರು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ತಿಂಗಳ ಹಿಂದೆ, ಸಂಘದ ₹88,000 ಹಣ ದುರುಪಯೋಗ ಮಾಡಿದ ಆರೋಪದ ಮೇಲೆ ಅವರನ್ನು ಆಡಳಿತ ಮಂಡಳಿಯ ನಿರ್ಣಯದಂತೆ ಅಮಾನತುಗೊಳಿಸಲಾಗಿತ್ತು. ಬಳಿಕ ಮಾನವೀಯ ನೆಲೆಯಲ್ಲಿ, ದುರುಪಯೋಗವಾದ ₹88,000ದಲ್ಲಿ ₹60,000 ಹಣವನ್ನು ಮನ್ನಾ ಮಾಡಿ, ಉಳಿದ ₹28,000 ಹಣವನ್ನು ಪಾವತಿಸುವಂತೆ ಸಂಘದ ಆಡಳಿತ ಮಂಡಳಿ ನಿರ್ಣಯಿಸಿತ್ತು.

ಆದರೆ, ಶಂಕರ ನಾಯ್ಕ ಅವರು ಸಂಘದ ಈ ನಿರ್ಣಯಕ್ಕೆ ಒಪ್ಪದೆ, ಹಣ ಪಾವತಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಜೂನ್ 13ರಂದು ಮತ್ತೆ ಅಮಾನತು ಮಾಡಲಾಗಿತ್ತು. ಅಮಾನತುಗೊಂಡ ಶಂಕರ ನಾಯ್ಕ ಅವರ ವೇತನದಿಂದ ತಿಂಗಳಿಗೆ ₹5,000 ಹಣವನ್ನು ಸಂಘದ ಖಾತೆಗೆ ಜಮಾ ಮಾಡುವ ನಿರ್ಧಾರಕ್ಕೂ ಶಂಕರ ನಾಯ್ಕ ಒಪ್ಪದೇ, ಸಂಘದ ವಿರುದ್ಧವೇ ಸುಳ್ಳು ದೂರು ನೀಡಲು ಮುಂದಾಗಿದ್ದಾರೆ ಎಂದು ಸಂಘದ ಆಡಳಿತ ಮಂಡಳಿ ಆರೋಪಿಸಿದೆ.

ಆದರೆ, ಅಮಾನತುಗೊಂಡಿರುವ ಶಂಕರ ನಾಯ್ಕ ಅವರು, ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಶೀನ ನಾಯ್ಕ, ಅಧ್ಯಕ್ಷ ನವೀನ್ ಅಡ್ಯಂತಾಯ, ಸಂಘದ 12 ನಿರ್ದೇಶಕರು ಹಾಗೂ ನಾಷ್ಪಾಲು ಗ್ರಾಮದ ಕಾಸನಮಕ್ಕಿಯ ಸುಂದರ ಎಂಬವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ತಾನು ಪರಿಶಿಷ್ಟ ಪಂಗಡಕ್ಕೆ ಸೇರಿದವನು ಎಂದು ಗೊತ್ತಿದ್ದೂ, ಉದ್ದೇಶಪೂರ್ವಕವಾಗಿ ಸಂಬಳ ನೀಡದೆ ಕೆಲಸದಿಂದ ಅಮಾನತುಗೊಳಿಸಿದ್ದಾರೆ. ಆರ್ಥಿಕ ಬಹಿಷ್ಕಾರ ಹಾಕಿ, ಮಾನಸಿಕ ಕಿರುಕುಳ, ದ್ವೇಷಪೂರಿತ ಸುಳ್ಳು ಮೊಕದ್ದಮೆ ಹಾಗೂ ಕಾನೂನು ವ್ಯವಹಾರದ ಮೂಲಕ ಮಾನಸಿಕ ಹಿಂಸೆ ನೀಡಿ ದಲಿತ ದೌರ್ಜನ್ಯ ಎಸಗಿದ್ದಾರೆ,” ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ‘ದಲಿತ ದೌರ್ಜನ್ಯ’ ಪ್ರಕರಣ ದಾಖಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಧರ್ಮಸ್ಥಳ ಅಪರಾಧ ಪ್ರಕರಣಗಳು: ವಿಸ್ತೃತ ತನಿಖೆಗೆ ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಆಗ್ರಹ!

ಧರ್ಮಸ್ಥಳ ಗ್ರಾಮದ ಅಪರಾಧ ಕೃತ್ಯಗಳ ಬಗ್ಗೆ ವಿಸ್ತೃತ ತನಿಖೆ ನಡೆಸಿ, ಅನಾಮಧೇಯ ವ್ಯಕ್ತಿಗೆ ರಕ್ಷಣೆ ನೀಡಿ ಎಂದು ಕೇಂದ್ರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ ಅವರು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪುತ್ತೂರಿನಲ್ಲಿ ಕಾರು ಖರೀದಿಯಲ್ಲಿ ಬೃಹತ್ ವಂಚನೆ: ನಕಲಿ ಸಹಿ ಹಾಕಿ ವಾಹನ ಎಗರಿಸಿದ ಪರಿಚಯಸ್ಥ!

ಕಾರು ಖರೀದಿಸುವ ನೆಪದಲ್ಲಿ ಪರಿಚಯಸ್ಥನೊಬ್ಬ ಮಹಿಳೆಯ ನಕಲಿ ಸಹಿ ಮಾಡಿ, ಒಪ್ಪಿಗೆ ಪತ್ರದ ಮೂಲಕ ಶೋರೂಂನಿಂದ ಕಾರು ಖರೀದಿಸಿ ವಂಚನೆ ಮಾಡಿರುವ ಪ್ರಕರಣ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಾಂತಾವರ: ಯುವ ಸಂಗಮ ಕಾಂತಾವರ (ರಿ) ಹಾಗೂ ಯುವ ಉತ್ಸಾಹಿ ಬಳಗ (ರಿ) ಕೇಮಾರು ಇವರ ಜಂಟಿ ಆಶ್ರಯದಲ್ಲಿ 3ನೇ ವರ್ಷದ ಕೆಸರ್ಡ್ ಒಂಜಿ ದಿನ -2025

ಯುವ ಸಂಗಮ ಕಾಂತಾವರ (ರಿ) ಹಾಗೂ ಯುವ ಉತ್ಸಾಹಿ ಬಳಗ (ರಿ) ಕೇಮಾರು ಇವರ ಜಂಟಿ ಆಶ್ರಯದಲ್ಲಿ 3ನೇ ವರ್ಷದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಜು.6 ನೇ ಆದಿತ್ಯವಾರ ಕಾಂತಾವರ ಕುಂದಿಲ, ಕಡತ್ರಬೈಲು ನೆರೋಲ್ದ ಬಾಕಿಮಾರು ಗದ್ದೆಯ ದಿ.ಬಾಡು ಪೂಜಾರಿ ವೇದಿಕೆಯಲ್ಲಿ ಶ್ರೀ ಕ್ಷೇತ್ರ ಕಾಂತಾವರದ ಪ್ರಧಾನ ಅರ್ಚಕ ಶ್ರೀ ಕೃಷ್ಣಮೂರ್ತಿ ಭಟ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಕಲ್ಲಮಠ ಶ್ರೀ ಗೋಪಾಲಕೃಷ್ಣ ಸನ್ನಿಧಿಯ ಜೀರ್ಣೋದ್ಧಾರಕ್ಕೆ “ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್”ದಿಂದ ಭಾರಿ ಕೊಡುಗೆ: ₹5 ಲಕ್ಷದ ಡಿಡಿ ಹಸ್ತಾಂತರ

"ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್'' ಮುಖಾಂತರ ಪೂಜ್ಯರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ 5 ಲಕ್ಷ ರೂಪಾಯಿಯ ಮೊತ್ತದ ಡಿಡಿಯನ್ನು ಶ್ರೀ ಕಲ್ಲಮಠದ ಜೀರ್ಣೋದ್ಧಾರ ಸಮಿತಿಯವರಿಗೆ ಭಕ್ತಿಪೂರ್ವಕವಾಗಿ ಹಸ್ತಾಂತರಿಸಲಾಯಿತು.