spot_img

ಬಾಹ್ಯಾಕಾಶದಲ್ಲಿ 286 ದಿನ ಕಳೆದು ಸುನೀತಾ, ಬುಚ್ ಭೂಮಿಗೆ ಮರಳಿದ ಕ್ಷಣ

Date:

ಫ್ಲೋರಿಡಾ (ಅಮೆರಿಕ): ಸುಮಾರು 9 ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ISS)ದಲ್ಲಿ ಕಳೆದ ಬಳಿಕ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಸ್ಕೋರ್ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ.

ಭಾರತೀಯ ಕಾಲಮಾನದ ಪ್ರಕಾರ ಬುಧವಾರ (ಮಾ.19) ಬೆಳಗಿನ ಜಾವ 3.27ರ ಸುಮಾರಿಗೆ ಸ್ಪೇಸ್ ಎಕ್ಸ್‌ನ ಕ್ರೂ ಡ್ರಾಗನ್ ನೌಕೆಯು ಪ್ಯಾರಚೂಟ್ ಮೂಲಕ ಅಮೆರಿಕದ ಫ್ಲೋರಿಡಾದ ಸಮುದ್ರದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಯಿತು. ಬಳಿಕ ನಾಸಾ ತಂಡವು ಗಗನಯಾತ್ರಿಗಳನ್ನು ಸಮುದ್ರದಿಂದ ಮೇಲಕ್ಕೆತ್ತಿ, ಆರೋಗ್ಯ ಪರೀಕ್ಷೆಗೆ ಕರೆದೊಯ್ಯಲಾಯಿತು.

9 ತಿಂಗಳ ಸಮಯದಲ್ಲಿ 286 ದಿನಗಳ ಕಾಲ ISS ನಲ್ಲಿ ಉಳಿದುಕೊಂಡಿದ್ದರು.4,577 ಬಾರಿ ಭೂಮಿಗೆ ಸುತ್ತು ಕೊಟ್ಟಿದ್ದರು. ಒಟ್ಟು 195.2 ಮಿಲಿಯನ್ ಕಿಮೀ ದೂರ ಹಾರಾಟ ಮಾಡಿದ್ದರು.

ಅಪರೂಪದ ಸನ್ನಿವೇಶ:
2023ರ ಜೂನ್ 5ರಂದು ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ ಸುನೀತಾ ಹಾಗೂ ಬುಚ್ ವಿಸ್ಕೋರ್ ನೌಕೆಯಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ISSನಲ್ಲೇ ಉಳಿಯಬೇಕಾದ ಪರಿಸ್ಥಿತಿ ಎದುರಿಸಿದ್ದರು. ತಾಂತ್ರಿಕ ಸಮಸ್ಯೆ ನಿವಾರಣೆಯಾಗುವವರೆಗೂ ಅವರು ಬಾಹ್ಯಾಕಾಶದಲ್ಲಿ ಮುಂದುವರಿಯಬೇಕಾಯಿತು.

ನಾಸಾದ ಧನ್ಯವಾದ:
“ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದು, ಗಗನಯಾತ್ರಿಗಳು ಸುರಕ್ಷಿತವಾಗಿದ್ದಾರೆ” ಎಂದು ನಾಸಾ ಅಧಿಕೃತ ಹೇಳಿಕೆ ನೀಡಿದ್ದು, ಸ್ಪೇಸ್ ಎಕ್ಸ್ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸಿದೆ.

ಗುಜರಾತ್‌ನಲ್ಲಿ ಸಂಭ್ರಮ:
ಸುನೀತಾ ವಿಲಿಯಮ್ಸ್ ಅವರ ಪೂರ್ವಿಕರ ಮನೆ ಇರುವ ಗುಜರಾತ್‌ನ ಜುಲಾಸಾನ್ ಗ್ರಾಮದಲ್ಲಿ ಜನರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆಪಲ್ ಲೋಕಕ್ಕೆ ಹೊಸ ಫೋನ್‌ ಕ್ರಾಂತಿ: ಪುಸ್ತಕದಂತೆ ಮಡಚುವ ವಿನ್ಯಾಸದೊಂದಿಗೆ ಬರಲಿದೆ ಫೋಲ್ಡಬಲ್ ಐಫೋನ್ V68

ಮಡಚುವ ಫೋನ್‌ಗಳ ಮಾರುಕಟ್ಟೆಯಲ್ಲಿ ತನ್ನ ಮೊದಲ ಹೆಜ್ಜೆಯನ್ನಿಡಲು ಮುಂದಾಗಿರುವ ಆಪಲ್

ಮಂಗಳೂರಿನ ಅಮೆಝಾನ್ ಸುಗಂಧ ದ್ರವ್ಯ ಘಟಕದಲ್ಲಿ ಅಗ್ನಿ ಅವಘಡ: ಅಪಾರ ನಷ್ಟ

ನಗರದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿದ್ದ ಅಮೆಝಾನ್ ಸುಗಂಧ ದ್ರವ್ಯ ತಯಾರಿಕಾ ಕಂಪನಿಯಲ್ಲಿ ಬುಧವಾರ ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ.

“ಬದುಕಿನಲ್ಲಿ ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಮುಖ್ಯ” : ಶ್ರೀ ದಾಮೋದರ ಶರ್ಮ ಬಾರ್ಕೂರು.

ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್), ಹಿರಿಯಡ್ಕದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶ್ರೀ ದಾಮೋದರ ಶರ್ಮ ಬಾರ್ಕೂರುರವರು ಉಪನ್ಯಾಸ ನೀಡಿದರು.

₹5 ಲಕ್ಷ ಮೌಲ್ಯದ ಅಡಿಕೆ ಕದ್ದ ವಿದ್ಯಾರ್ಥಿಗಳು: ಐಷಾರಾಮಿ ಜೀವನದ ಮೋಹದಿಂದ ಜೈಲು ಪಾಲಾದ ಯುವಕರು!

ಸುಲಭವಾಗಿ ಹಣ ಗಳಿಸಿ ಐಷಾರಾಮಿ ಜೀವನ ನಡೆಸಬೇಕೆಂದು ಕನಸು ಕಂಡಿದ್ದ ಕೆಲವು ಕಾಲೇಜು ವಿದ್ಯಾರ್ಥಿಗಳ ಗುಂಪೊಂದು, ದೊಡ್ಡ ಮಟ್ಟದ ಅಡಿಕೆ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.