spot_img

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಬಜಪೆಯ ರಜಾಕ್ ಅರೆಸ್ಟ್ – ಸಂಚು ರೂಪಿಸಲು ನೆರವು ನೀಡಿದ್ದ ಆರೋಪ

Date:

spot_img

ಮಂಗಳೂರು: ಮಂಗಳೂರಿನಲ್ಲಿ ನಡುರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಹತ್ಯೆಗೀಡಾದ ರೌಡಿಶೀಟರ್ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಈ ಭೀಕರ ಹತ್ಯೆಗೆ ಸಹಾಯ ಮಾಡಿದ ಆರೋಪಿಯಾಗಿ ಬಜಪೆಯ ಅಬ್ದುಲ್ ರಜಾಕ್ ಎಂಬಾತನನ್ನು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬಂಧಿತ ರಜಾಕ್ ಈ ಕೊಲೆ ಸಂಚಿಗೆ ಪ್ರಮುಖ ಆರೋಪಿಗಳ ಜೊತೆ ಸೇರಿ ತಂತ್ರ ರೂಪಿಸಿದ್ದಲ್ಲದೆ, ಆರೋಪಿಗಳಿಗೆ ತಲೆ ಮರೆಸಿಕೊಳ್ಳಲು ನೆರವಾಗಿ, ಪರೋಕ್ಷವಾಗಿ ಈ ಕೃತ್ಯದಲ್ಲಿ ಪಾತ್ರವಹಿಸಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಇನ್ನೂ ಮುಂದುವರಿದಿದ್ದು, ಮತ್ತಿತರ ಆರೋಪಿಗಳ ಪತ್ತೆ ಕಾರ್ಯ ಚುರುಕಾಗಿದ್ದು ಶೀಘ್ರದಲ್ಲೇ ಹೆಚ್ಚಿನ ಆರೋಪಿಗಳ ಬಂಧನ ಸಾಧ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣ ಮಂಗಳೂರಿನಲ್ಲಿ ಭೀತಿಯ ವಾತಾವರಣ ನಡುವೆ ಈಗ ಹೊಸ ಬಂಧನದಿಂದ ತನಿಖೆಗೆ ವೇಗ ಸಿಕ್ಕಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಧರ್ಮಸ್ಥಳ ಪ್ರಕರಣ : ರಾಜ್ಯ ಮಹಿಳಾ ಆಯೋಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಕಮಿಷನರ್ ಗೆ ಪತ್ರ

ರಾಜ್ಯಾದ್ಯಂತ ಗಮನ ಸೆಳೆದಿದ್ದ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿರುವಾಗಲೇ, ರಾಜ್ಯ ಮಹಿಳಾ ಆಯೋಗವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದೆ.

ಬೆಳ್ತಂಗಡಿ: ನಕಲಿ ನಂಬರ್ ಪ್ಲೇಟ್ ಕಾರಿನಲ್ಲಿ ಅಕ್ರಮ ಗೋ ಸಾಗಾಟ; ಓರ್ವನ ಬಂಧನ

ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರಿನಲ್ಲಿ ಮೂರು ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣ ಗುರುವಾಯನಕೆರೆಯಲ್ಲಿ ಬೆಳಕಿಗೆ ಬಂದಿದೆ.

ಉಡುಪಿ ಶ್ರೀ ಕೃಷ್ಣಮಠದಲ್ಲಿ ಚಾಂದ್ರ ಶ್ರೀಕೃಷ್ಣಾಷ್ಟಮಿ ಸರಳ ಆಚರಣೆ

ಚಾಂದ್ರ ಶ್ರೀಕೃಷ್ಣಾಷ್ಟಮಿಯ ಅಂಗವಾಗಿ ಇಂದು ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಸಾಮೂಹಿಕವಾಗಿ ಶ್ರೀ ಕೃಷ್ಣ ಮಂತ್ರ ಜಪ ಪಠನ ಹಾಗೂ ಭೋಜನ ಪ್ರಸಾದ ವಿತರಣೆಯು ಸರಳವಾಗಿ ನಡೆಯಲಿದೆ.

ಮೂಡಬಿದ್ರೆಯ ಬಸ್ಸಿನಲ್ಲಿ ಕಾಮುಕನಿಂದ ಹೆಣ್ಣು ಮಕ್ಕಳಿಗೆ ಕಿರುಕುಳ ಸುಮೋಟ ಕೇಸು ದಾಖಲಿಸುವಂತೆ ಆಗ್ರಹ : ಶ್ರೀಮತಿ ರಮಿತಾ ಶೈಲೇಂದ್ರ

ಮೂಡಬಿದ್ರೆಯ ಬಸ್ಸಿನಲ್ಲಿ ಕಾಮುಕನಿಂದ ಹೆಣ್ಣು ಮಕ್ಕಳಿಗೆ ಕಿರುಕುಳ ಸುಮೋಟ ಕೇಸು ದಾಖಲಿಸುವಂತೆ ಶ್ರೀಮತಿ ರಮಿತಾ ಶೈಲೇಂದ್ರ ಆಗ್ರಹಿಸಿದ್ದಾರೆ.