spot_img

ಸಿಗಂದೂರಿನ ಹೊಳೆಬಾಗಿಲು ಲಾಂಚ್‌ ಸ್ಟೀರಿಂಗ್ ಜಾಮ್: ನೂರಾರು ಪ್ರಯಾಣಿಕರಿಗೆ ಆತಂಕ

Date:

spot_img

ಸಾಗರ : ಶಿವಮೊಗ್ಗ ಜಿಲ್ಲೆಯ ಸಿಗಂದೂರಿನ ಹೊಳೆಬಾಗಿಲಿನಲ್ಲಿ ನದೀ ದಾಟುವ ಲಾಂಚ್‌ನ ಸ್ಟೀರಿಂಗ್ ಜಾಮ್ ಆದ ಪರಿಣಾಮ, ನೂರಾರು ಪ್ರಯಾಣಿಕರು ಹಾಗೂ ವಾಹನಗಳು ಕೆಲಕಾಲ ನದಿಯಲ್ಲಿ ಅತೀವ ಆತಂಕದ ವಾತಾವರಣವನ್ನು ಅನುಭವಿಸಿದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಲಾಂಚ್‌ನಲ್ಲಿದ್ದವರು ಭಯಭೀತರಾಗಿದ್ದು, ಮಳೆಗಾಲದ ಗಾಳಿ ಕಾರಣಕ್ಕೆ ದಿಕ್ಕು ತಪ್ಪಿದೆ ಎಂದು ದಡದಲ್ಲಿದ್ದವರು ಭಾವಿಸಿದ್ದರು. ಆದರೆ ಹತ್ತಿರದಲ್ಲಿದ್ದ ದಿಲೀಪ್ ಬಿಲ್ಡರ್ಸ್‌ನ ಬೋಟಿನಿಂದ ಲಾಂಚ್‌ಗೆ ಸಹಾಯ ನೀಡಿ ಅದನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಲಾಯಿತು.

ಲಾಂಚ್‌ದಲ್ಲಿ ತಾಂತ್ರಿಕ ದೋಷ ಇತ್ತೀಚಿನದ್ದಲ್ಲ. ಸ್ಥಳೀಯರ ಪ್ರಕಾರ, ಈ ಲಾಂಚ್‌ ಈಗಾಗಲೇ ಹಾಳಾಗಿದ್ದು, ಹಲವು ದಿನಗಳಿಂದ ರಿಪೇರಿ ಮಾಡದೆ ಉಪೇಕ್ಷಿತ ಸ್ಥಿತಿಯಲ್ಲಿತ್ತು. ತಿಂಗಳಿಗೆ ಸರಾಸರಿ 40 ಲಕ್ಷಕ್ಕೂ ಅಧಿಕ ಆದಾಯ ನೀಡುವ ಲಾಂಚ್‌ಗಳ ನಿರ್ವಹಣೆ ಅತಂತ್ರವಾಗಿರುವುದು ಪ್ರಶ್ನೆಯಾಗಿದ್ದು, ಸಾರ್ವಜನಿಕರು ಕಿಡಿಕಾರಿದ್ದಾರೆ.

ಸೇತುವೆ ಉದ್ಘಾಟನೆ ತಡವಾದರೂ, ಲಾಂಚ್‌ಗಳ ಸರಿಯಾದ ನಿರ್ವಹಣೆ ಖಚಿತಪಡಿಸಿ ಸಂಚಾರಕ್ಕೆ ಅವಕಾಶ ನೀಡಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ. ಅರೆಕಾಲಿಕ ನೌಕರರ ವೇತನ ಪಾವತಿಯಾಗದೇ ಆರು ತಿಂಗಳಿನಿಂದ ಬಾಕಿ ಇರುವ ಕಾರಣದಿಂದಾಗಿ ನಿರ್ಲಕ್ಷ್ಯ ಮತ್ತು ನಿರ್ವಹಣಾ ಕೊರತೆ ಏಳಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜೇನು+ ಕಾಳು ಮೆಣಸಿನ ಅದ್ಭುತ: ಪ್ರತಿದಿನ ಬೆಳಿಗ್ಗೆ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ!

ಜೇನುತುಪ್ಪ ಮತ್ತು ಕಾಳು ಮೆಣಸಿನ ಪುಡಿ, ಈ ಎರಡೂ ಪದಾರ್ಥಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತವೆ.

2026ರ ತಮಿಳುನಾಡು ಸಿಎಂ ಅಭ್ಯರ್ಥಿ ನಟ ವಿಜಯ್: ಬಿಜೆಪಿಯೊಂದಿಗೆ ಮೈತ್ರಿ ಇಲ್ಲ ಎಂದ ಟಿವಿಕೆ!

2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ನಟ ವಿಜಯ್ ಅವರನ್ನು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಶುಕ್ರವಾರ ಘೋಷಿಸಲಾಗಿದೆ.

ಆಗಸ್ಟ್ 15 ರಿಂದ ‘ಫಾಸ್ಟ್ಯಾಗ್ ವಾರ್ಷಿಕ ಪಾಸ್’ ಜಾರಿ: ₹3000ಕ್ಕೆ 200 ಟ್ರಿಪ್‌ಗಳಿಗೆ ಟೋಲ್ ಫ್ರೀ!

ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ, ಅಂದರೆ ಆಗಸ್ಟ್ 15, 2025 ರಿಂದ, ರಾಷ್ಟ್ರೀಯ ಹೆದ್ದಾರಿಗಳಲ್ಲಿ "ಫಾಸ್ಟ್ಯಾಗ್ ವಾರ್ಷಿಕ ಪಾಸ್" ಅನ್ನು ಜಾರಿಗೊಳಿಸಲಾಗುವುದು ಎಂದು ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.

ಉಳ್ಳಾಲದಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ತೇಜಸ್ : ಶವವಾಗಿ ರೈಲ್ವೇ ಹಳಿಯಲ್ಲಿ ಪತ್ತೆ, ಆತ್ಮಹತ್ಯೆಯ ಶಂಕೆ

ಬುಧವಾರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದ ಉಚ್ಚ ಶಿಕ್ಷಣ ಪಡೆಯುತ್ತಿದ್ದ ಯುವಕ ತೇಜಸ್ (24) ಅವರ ಛಿದ್ರಗೊಂಡ ಮೃತದೇಹ ಉಚ್ಚಿಲ ಸಂಕೋಳಿಗೆಯ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.