spot_img

ಶ್ರೀ ಬ್ರ‌ಹ್ಮ‌ಬೈದೇರುಗ‌ಳ‌ ಗ‌ರೋಡಿ ಕ‌ಲ್ಮಾಡಿ : ಸಾಧಕರಿಗೆ ಸನ್ಮಾನ

Date:

spot_img

ಶ್ರೀ ಬ್ರ‌ಹ್ಮ‌ಬೈದೇರುಗ‌ಳ‌ ಗ‌ರೋಡಿ ಕ‌ಲ್ಮಾಡಿ(ರಿ.) ಇದರ ಕೂಡುಕಟ್ಟಿನ ವ್ಯಾಪ್ತಿಯಲ್ಲಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅವ್ನಿ ಗಣೇಶ್ ಬಗ್ಗುಮುಂಡ (ಕ್ರೀಡಾ ಕ್ಷೇತ್ರ), ಕಾರ್ತಿಕ್ ಪೂಜಾರಿ ಬಂಕೇರಕಟ್ಟ ಅಂಬಲಪಾಡಿ (ಪವರ್ ಲಿಫ್ಟಿಂಗ್), ಮಾನ್ಸಿ ಜೆ. ಸುವರ್ಣ ಮಲ್ಪೆ (ಬಾಕ್ಸಿಂಗ್), ಡಾ! ಪೂಜಾ ಗೋಪಾಲ ಪೂಜಾರಿ ಪಡ್ಲ ನೆರ್ಗಿ ಕೊಡವೂರು (ಸಂಶೋಧನೆ) ಮತ್ತು ಛಾಯಾ ಎಸ್. ಪೂಜಾರಿ ಬಾಪುತೋಟ (ಕರಾಟೆ) ಇವರಿಗೆ ಗರೋಡಿಯ ಆಡ‌ಳಿತ‌ ಸ‌ಮಿತಿಯ ವತಿಯಿಂದ ಸಂಕ್ರಮಣ ದಿನದ ವಿಶೇಷ ಪೂಜೆಯ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಶ್ರೀ ಬ್ರಹ್ಮಬೈದೇರುಗಳ ಗಂಧ ಪ್ರಸಾದವನ್ನು ನೀಡಿ, ಶಾಲು ಹೊದೆಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗರೋಡಿಯ ಆಡಳಿತ ಸಮಿತಿಯ ಗೌರವಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ, ಅಧ್ಯಕ್ಷ ಶಶಿಧರ ಎಮ್. ಅಮೀನ್ ವಡಬಾoಡೇಶ್ವರ, ಮಾಜಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಪ್ರಧಾನ ಕಾರ್ಯದರ್ಶಿ ಮನೋಹರ್ ಜತ್ತನ್ ಮಲ್ಪೆ, ಜತೆ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜತೆ ಕೋಶಾಧಿಕಾರಿ ಜಯಕರ ಪೂಜಾರಿ ಕೊಡವೂರು, ಸಂಘಟನಾ ಕಾರ್ಯದರ್ಶಿ ಮಧ್ವನಗರ ಶಂಕರ ಪೂಜಾರಿ, ಆಡಳಿತ ಸಮಿತಿ ಸದಸ್ಯರಾದ ಕಲ್ಮಾಡಿ ಶೇಖರ ಪೂಜಾರಿ, ಬಾಲಕೃಷ್ಣ ಕೊಡವೂರು, ವಿನಯ ಕುಮಾರ್ ಪಡುಕರೆ, ಸತೀಶ್ ಬಂಗೇರ ಮಲ್ಪೆ, ಜಗದೀಶ್ ಬಂಗೇರ ಮಲ್ಪೆ, ಲಕ್ಷ್ಮಣ ಪೂಜಾರಿ ಅಂಬಲಪಾಡಿ, ಗರೋಡಿ ಮನೆ ನಾರಾಯಣ ಪೂಜಾರಿ, ಅರ್ಚಕ ವರ್ಗ, ಕೂಡುಕಟ್ಟಿನ ಗುರಿಕಾರರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಾನವ ಮೆದುಳಿನ ಕೋಶಗಳಿಂದ ನಿಯಂತ್ರಿಸಲ್ಪಟ್ಟ ರೋಬೋಟ್‌ನ ಹೊಸ ಅವತಾರ: AI ಗಿಂತಲೂ ಬುದ್ಧಿವಂತಿಕೆ

AI ಮಾನವರ ಬುದ್ಧಿಮತ್ತೆಯ ಮಟ್ಟವನ್ನು ಹೊಂದಿಕೆಯಾಗುವುದಿಲ್ಲ, ಆದ್ದರಿಂದ ವಿಜ್ಞಾನಿಗಳು ಈಗ ಮಾನವ ಮೆದುಳನ್ನು AI ಗೆ ನೀಡಿದ್ದಾರೆ

ಕಪ್ಪು ಕಲೆಗಳಿರುವ ಈರುಳ್ಳಿ: ಅಪಾಯಕಾರಿ ಎಚ್ಚರಿಕೆ ಮತ್ತು ವೈಜ್ಞಾನಿಕ ಸಂಗ್ರಹಣೆಯ ಮಾರ್ಗದರ್ಶನ

ನಮ್ಮ ದೈನಂದಿನ ಅಡುಗೆಯಲ್ಲಿ ಈರುಳ್ಳಿ ಒಂದು ಅವಿಭಾಜ್ಯ ಭಾಗ. ಅದರ ಸುವಾಸನೆ ಮತ್ತು ರುಚಿ ಯಾವುದೇ ಖಾದ್ಯಕ್ಕೆ ಜೀವ ತುಂಬುತ್ತದೆ. ಅಡುಗೆಮನೆಯ ಪ್ರಮುಖ ಸಾಮಗ್ರಿಯಾದ ಈರುಳ್ಳಿ, ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಕರ್ನಾಟಕದಲ್ಲಿ VIP ಗಳ ಸೈರನ್ ಹಾರ್ನ್ ಬಳಕೆ ನಿಷೇಧ: ಡಿಜಿಪಿಯಿಂದ ಮಹತ್ವದ ಆದೇಶ

ರಾಜ್ಯದಲ್ಲಿ ಗಣ್ಯ ವ್ಯಕ್ತಿಗಳ (VIP) ಸಂಚಾರದ ಸಂದರ್ಭದಲ್ಲಿ ವಾಹನಗಳ ಸೈರನ್ ಹಾರ್ನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು (ಡಿಜಿ ಮತ್ತು ಐಜಿಪಿ), ಡಾ. ಎಂ.ಎ. ಸಲೀಂ ಅವರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.

ಜಗದೀಪ್‌ ಧನ್ಕರ್‌ ಉಪರಾಷ್ಟ್ರಪತಿ ಸ್ಥಾನಕ್ಕೆ ಅನಿರೀಕ್ಷಿತ ರಾಜೀನಾಮೆ: ಆರೋಗ್ಯ ಕಾರಣ ನೀಡಿದ ಧನ್ಕರ್‌

ಭಾರತದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಜಗದೀಪ್‌ ಧನ್ಕರ್‌ ಅವರು ತಮ್ಮ ಸ್ಥಾನಕ್ಕೆ ಸೋಮವಾರ ದಿಢೀರ್‌ ರಾಜೀನಾಮೆ ಸಲ್ಲಿಸಿದ್ದಾರೆ.