spot_img

ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ , ಕಾರ್ಕಳದಲ್ಲಿ ಸ್ಪೈನ್ ಸರ್ಜರಿ/ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಕ್ಲಿನಿಕ್ ಸೇವೆ ಪ್ರಾರಂಭ

Date:

spot_img

ಕಾರ್ಕಳ ಮಾರ್ಚ್.25 : ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಸ್ಪೈನ್ ಸರ್ಜರಿ/ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಕ್ಲಿನಿಕ್ ಪರಿಚಯಿಸುತ್ತಿದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಆರ್ಥೋಪೆಡಿಕ್ಸ್ (ಸ್ಪೈನ್ ಸರ್ಜರಿ ಘಟಕ) ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಾಧವ ಪೈ ಅವರು, ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ , ಮಾರ್ಚ್ 27, 2025 ರಿಂದ ಪ್ರತೀ ತಿಂಗಳ 2ನೇ ಮತ್ತು 4ನೇ ಗುರುವಾರ, ಮಧ್ಯಾಹ್ನ 2:30 ರಿಂದ 4:30 ರವರೆಗೆ ಹೊರರೋಗಿ ಸಮಾಲೋಚನೆಗೆ ಲಭ್ಯರಿರುತ್ತಾರೆ.

ಸ್ಪೈನ್/ ಬೆನ್ನುಮೂಳೆಯ ಕಾಯಿಲೆಗಳಾದ ಡಿಜೆನೆರೇಟಿವ್ ಸ್ಪೈನ್ ರೋಗ, ಸ್ಪೈನ್ ವಕ್ರತೆಗಳು, ಗಾಯಗಳು, ಸೋಂಕುಗಳು ಮತ್ತು ಟ್ಯೂಮರ್‌ಗಳಂತಹ ವಿವಿಧ ಸಮಸ್ಯೆಗಳಿಗೆ ವಿಶೇಷ ಚಿಕಿತ್ಸೆ ಲಭ್ಯವಿದ್ದು, ಫಿಸಿಯೊಥೆರಪಿ ಮತ್ತು ನೋವು ನಿರ್ವಹಣೆಯಂತಹ ಶಸ್ತ್ರಚಿಕಿತ್ಸೆಯಲ್ಲದ ವಿಧಾನಗಳಿಂದ ಹಿಡಿದು ಕನಿಷ್ಠ ಗಾಯದ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಸೇರಿದಂತೆ ಸುಧಾರಿತ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಪರಿಣತಿ ಹೊಂದಿದ್ದಾರೆ. ಡಾ. ಮಾಧವ ಪೈ ಅವರ ಪರಿಣತಿ, ರೋಗಿಗಳಿಗೆ ಅತ್ಯುತ್ತಮ ಆರೈಕೆ ನೀಡಲು ಕೇಂದ್ರೀಕೃತವಾವಾಗಿದ್ದು, ದೀರ್ಘಕಾಲಿಕ ಆರೋಗ್ಯ ಮತ್ತು ಚೇತರಿಕೆಗೆ ಗಮನಹರಿಸುವುದರ ಜೊತೆಗೆ, ಚಿಕಿತ್ಸೆಯ ನಂತರದ ಆರೈಕೆ ಸೇವೆ ಸಹ ಒದಗಿಸುತ್ತದೆ.

“ಈ ಹೊಸ ಸೇವೆಯು ಸ್ಥಳೀಯ ಜನತೆಗೆ ದೂರದ ಪ್ರಯಾಣ ಮಾಡದೆಯೇ, ಸುಧಾರಿತ ಸೂಪರ್-ಸ್ಪೆಷಾಲಿಟಿ ಸೇವೆಗಳನ್ನು ಮನೆಬಾಗಿಲಲ್ಲೇ ಪಡೆಯಲು ಸಹಕಾರಿ ಆಗಿದೆ” ಎಂದು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಅಥವಾ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು, 9731601150/08258 – 230583 ಅನ್ನು ಸಂಪರ್ಕಿಸಬಹುದು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗೂಗಲ್ ಮ್ಯಾಪ್​ನ ತಪ್ಪು ನಿರ್ದೇಶನ: ಮುಂಬೈನ ಕಂದಕಕ್ಕೆ ಜಾರಿದ ಕಾರು

ತಂತ್ರಜ್ಞಾನದ ಮುಂದುವರಿದ ಬೆಳವಣಿಗೆಗಳು ಜೀವನವನ್ನು ಸರಳಗೊಳಿಸಿರುವ ಜೊತೆಗೆ, ಕೆಲವು ಅನಿರೀಕ್ಷಿತ ಅಪಾಯಗಳಿಗೂ ಕಾರಣವಾಗುತ್ತಿವೆ.

ಜಾರ್ಖಂಡ್ ನ ಗುಮ್ಲಾ ಕಾಡಿನಲ್ಲಿ ಮೂವರು PLFI ನಕ್ಸಲರ ಎನ್‌ಕೌಂಟರ್, ಶಸ್ತ್ರಾಸ್ತ್ರ ವಶಕ್ಕೆ

ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ನಡೆಸಿದ ಭೀಕರ ಕಾರ್ಯಾಚರಣೆಯಲ್ಲಿ PLFI ಸಂಘಟನೆಯ ಮೂವರು ನಕ್ಸಲರನ್ನು ಹತ್ಯೆ ಮಾಡುವಲ್ಲಿ ಯಶಸ್ವಿ

ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ನೂತನ ಸಾರಥಿ: ಉಷಾ ಅಂಚನ್‌ಗೆ ಅಧ್ಯಕ್ಷ ಪಟ್ಟ

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರಾಗಿ ನೆಲ್ಯಾಡಿಯ ಹಿರಿಯ ಕಾಂಗ್ರೆಸ್ ನಾಯಕಿ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಹಾಗೂ ಪ್ರಸ್ತುತ ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಉಷಾ ಅಂಚನ್ ಅವರನ್ನು ನೇಮಕ ಮಾಡಲಾಗಿದೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಕಾಸರಗೋಡಿನ ಖ್ಯಾತ ಯೂಟ್ಯೂಬರ್ “ಸಾಲು ಕಿಂಗ್” ಬಂಧನ

ಕಾಸರಗೋಡು ಮೂಲದ ಜನಪ್ರಿಯ ಯೂಟ್ಯೂಬರ್ ಒಬ್ಬನನ್ನು ಅಪ್ರಾಪ್ತ ಬಾಲಕಿಗೆ ವಿವಾಹದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೋಝಿಕ್ಕೋಡ್‌ನ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ