
ಕಟಪಾಡಿ : ಪಾಜಕ ಆನಂದತೀರ್ಥ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಆಕಾಶ ಕಾಯಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಕಾಲೇಜು ಆವರಣದಲ್ಲಿ ನಡೆಯಿತು.

ಉಡುಪಿ ಪಿ.ಪಿ.ಸಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರತಿಭಾ ಸಿ. ಆಚಾರ್ಯ ಭಾಗವಹಿಸಿ ವಿದ್ಯಾರ್ಥಿಗಳಿಗೆ ಆಕಾಶಕಾಯಗಳು, ಸೌರಮಂಡಲಗಳ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿ, ಸೌರಮಂಡಲದಲ್ಲಿ ನಿತ್ಯ ಹಲವಾರು ವಿಸ್ಮಯಗಳು ನಡೆಯುತ್ತಿರುತ್ತದೆ. ಸೌರಮಂಡಲದಲ್ಲಿರುವ ನಕ್ಷತ್ರ ಪುಂಜಗಳು, ಗ್ರಹಗಳ ಆಧ್ಯಯನ ಒಂದು ಕೌತುಕದ ವಿಷಯ, ಇದರ ಬಗ್ಗೆ ವಿದ್ಯಾರ್ಥಿಗಳಿದ್ದಾಗಲೇ ಆಸಕ್ತಿ ಬೆಳೆಸಿಕೊಂಡು ಸೌರಮಂಡಲಗಳಲ್ಲಿ ನಡೆಯುವ ನಿತ್ಯದ ಬೆಳವಣಿಗೆಗಳನ್ನು ತಿಳಿದುಕ್ಕೊಳ್ಳಬಹುದು, ವಿದ್ಯಾರ್ಥಿ ಜೀವನದಲ್ಲಿ ಹೊಸತನ್ನು ಕಲಿಯುವ, ತಿಳಿದಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಿನ್ಸಿಪಾಲ್ ವಿಜಯ್. ಪಿ ರಾವ್, ಆಡಳಿತ ಮಂಡಳಿ ಖಜಾಂಜಿ ಲಕ್ಷ್ಮೀ ನಾರಾಯಣ ಉಪಾಧ್ಯ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಕೀರ್ತನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.




































