spot_img

ಮಹಾಕುಂಭ ಮೇಳದಲ್ಲಿ ಸೋದೆ ಮಠಾಧೀಶ ಶ್ರೀಪಾದರ ಪುಣ್ಯಸ್ನಾನ!

Date:

ಉಡುಪಿ: ಸೋದೆ ಮಠದ ಪೀಠಾಧಿಪತಿ ಶ್ರೀ ಶ್ರೀಪಾದರು ವಿಶ್ವ ವಲ್ಲಭತೀರ್ಥ ಸ್ವಾಮೀಜಿ ಅವರು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದರು. ಲಕ್ಷಾಂತರ ಭಕ್ತರು ಜಮುನಾ, ಗಂಗಾ, ಸರಸ್ವತಿ ನದಿಗಳ ಸಂಗಮದಲ್ಲಿ ಕುಂಭಸ್ನಾನ ಮಾಡುತ್ತಿರುವ ಈ ಮಹಾಕುಂಭ ಮೇಳದಲ್ಲಿ, ಶ್ರೀಪಾದರು ಸಹ ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿದರು.

ಪ್ರಯಾಗರಾಜ್‌ ಎಂಬುದು ಪುರಾತನ ಕಾಲದಿಂದಲೇ ಪವಿತ್ರ ಕ್ಷೇತ್ರವಾಗಿದ್ದು,ಕೋಟ್ಯಾಂತರ ಭಕ್ತರು ಮತ್ತು ಯತಿಗಳು ಇಲ್ಲಿ ಕುಂಭಮೇಳದಲ್ಲಿ ಭಾಗವಹಿಸುತ್ತಾರೆ. ಈ ತೀರ್ಥಸ್ಥಳದ ಮಹಿಮೆ ಎಲ್ಲಾ ಪುರಾಣಗಳಲ್ಲಿ ಉಲ್ಲೇಖಿತವಾಗಿದೆ ಎಂದು ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ. ಮಹಾಕುಂಭ ಮೇಳದ ವ್ಯವಸ್ಥೆಗಳು ಸುಗಮವಾಗಿದ್ದು, ಭಕ್ತರಿಗಾಗಿ ಎಲ್ಲಾ ಅನುಕೂಲತೆಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಪವಿತ್ರ ಕ್ಷಣದಲ್ಲಿ ಸ್ನಾನ ಮಾಡುವುದರಿಂದ ಅಪಾರ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ ಎಂದು ಅವರು ಹೇಳಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

‘ಗುಡ್ ಬ್ಯಾಡ್ ಅಗ್ಲಿ’ ಹಿಟ್ ಆಗುತ್ತಿದ್ದಂತೇ ಕಾನೂನು ಸಂಕಷ್ಟ! ಇಳಯರಾಜರಿಂದ ಅಜಿತ್ ಚಿತ್ರತಂಡಕ್ಕೆ ನೋಟೀಸ್

ಟಾಲಿವುಡ್ ಸೂಪರ್ ಸ್ಟಾರ್ ಅಜಿತ್ ಕುಮಾರ್ ಅಭಿನಯಿಸಿರುವ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ನಡೆಸುತ್ತಿರುವ ನಡುವೆಯೇ ಕಾನೂನು ಸವಾಲನ್ನು ಎದುರಿಸಿದೆ.

ದಿನ ವಿಶೇಷ – ಭಾರತದಲ್ಲಿ ಮೊದಲು ರೈಲು ಓಡಿದ ದಿವಸ

ಭಾರತದ ಬಹು ಮುಖ್ಯ ಭಾಗವಾಗಿ ಗುರುತಿಸಿಕೊಂಡಿರುವುದು ರೈಲು ವ್ಯವಸ್ಥೆ.1853 ರ ಏಪ್ರಿಲ್ 16 ರಂದು, ಮೊದಲ ಪ್ರಯಾಣಿಕ ರೈಲು ಮುಂಬಯಿಯ ಬೋರಿ ಬಂದರ್ ಮತ್ತು ಥಾಣೆ ನಡುವೆ 34 ಕಿ.ಮೀ ದೂರದಲ್ಲಿ ಓಡಿತು.

ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್ ಸ್ಫೋಟದ ಬೆದರಿಕೆಯ ಇಮೇಲ್: ಭದ್ರತೆ ಹೆಚ್ಚಳ, ತನಿಖೆ ಪ್ರಾರಂಭ

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರವನ್ನು ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬಂದ ಬೆದರಿಕೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸೈಬರ್ ಪೊಲೀಸರಿಂದ ತನಿಖೆ ಆರಂಭವಾಗಿದೆ.

ಮಳೆಗಾಲಕ್ಕೆ ಮುನ್ನೆಚ್ಚರಿಕಾ ಸನ್ನದ್ಧತೆ: ಉಡುಪಿಯಲ್ಲಿ ಅಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ

ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಪರಿಸ್ಥಿತಿ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸಕಾಲಿಕ ತಯಾರಿ ಮಾಡಿಕೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಅವರು ಉಡುಪಿ ನಗರಸಭೆಯ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಸೂಚನೆ ನೀಡಿದ್ದಾರೆ.