spot_img

ನಿಟ್ಟೂರಿನಲ್ಲಿ ಅಮಾನವೀಯ ಜೀವನ ಸಾಗಿಸುತ್ತಿದ್ದ ತಾಯಿ-ಮಗನನ್ನು ರಕ್ಷಿಸಿದ ಸಮಾಜಸೇವಕ!

Date:

ಉಡುಪಿ: ನಿಟ್ಟೂರಿನಲ್ಲಿ ಮಲಮೂತ್ರಾದಿಗಳ ನಡುವೆಯೇ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ವೃದ್ಧ ತಾಯಿ ಹಾಗೂ ಮಾನಸಿಕ ಅಸ್ವಸ್ಥ ಮಗನನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


ತಾಯಿ ಕಮಲ ಶೆಟ್ಟಿ (80) ಅವರು ವೃದ್ದಾಪ್ಯ ದೆಸೆಯಿಂದ ಹಾಸಿಗೆ ಹಿಡಿದಿದ್ದು ಮಲಗಿದ್ದಲ್ಲಿಯೇ ಮಲ ಮೂತ್ರಾದಿಗಳನ್ನು ಮಾಡುತ್ತಿದ್ದರೆ, ಮಗ ಅನಿಲ್ ಶೆಟ್ಟಿ (51) ಮಾನಸಿಕ ಅಸ್ವಸ್ಥನಾಗಿ ತಾಯಿ ಬಳಿ ಕುಳಿತಿರುತ್ತಿದ್ದ.ಮನೆಯಲ್ಲಿ ತ್ಯಾಜ್ಯ, ಮಲ ಮೂತ್ರಾದಿಗಳ ದುರ್ವಾಸನೆ ಹರಡಿ ಮನುಷ್ಯರು ವಾಸ ಮಾಡುವುದು ಬಿಡಿ, ಒಂದು ಕ್ಷಣ ನಿಲ್ಲಲು ಸಾದ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಾಯಿ ಮಗನ ಈ ದುರವಸ್ಥೆಯನ್ನು ಕಂಡು ನೆರೆ ಮನೆಯ ಲೀಲಾ ಪೂಜಾರಿ ಎಂಬವರು ಆಗಾಗ್ಗೆ ಅಹಾರ ನೀಡುತ್ತಿದ್ದರು.ಈ ಕುಟುಂಬದ ದುರಂತ ಕಥೆಯನ್ನು ಸ್ಥಳೀಯರಾದ ಪ್ರಸಾದ್ ಶೆಟ್ಟಿ ಅವರು ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿ ರಕ್ಷಿಸುವಂತೆ ಮನವಿ ಮಾಡಿದ್ದಾರೆ.ಅದರಂತೆ ಆಂಬುಲೆನ್ಸ್ ತೆಗೆದುಕೊಂಡು ಹೋದ ವಿಶು ಶೆಟ್ಟಿ ಅವರು ಈ ಅಮ್ಮ ಮಗನ ಪರಿಸ್ಥಿತಿ ಕಂಡು ದಂಗಾದರು.ತಕ್ಷಣ ವೃದ್ದೆ ಕಮಲ ಶೆಟ್ಟಿ ಅವರನ್ನು ಶುಚಿ ಗೊಳಿಸಿ ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೆ, ಮಾನಸಿಕ ಅಸ್ವಸ್ಥ ಮಗ ಅನಿಲ್ ಶೆಟ್ಟಿಯನ್ನು ಪುನರ್ವಸತಿ ಹಾಗೂ ಚಿಕಿತ್ಸೆಗಾಗಿ ಡಾ.ಶಶಿಕಿರಣ್ ಶೆಟ್ಟಿ ಅವರು ನಡೆಸುವ ಕೊಳಲಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ .ಮಗ ಅನಿಲ್ ಶೆಟ್ಟಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಉತ್ತಮ ವ್ಯಕ್ತಿಯಾಗಿದ್ದರು. ಇವರಿಗೆ ಮದುವೆಯಾಗಿ ಪತ್ನಿ ವಿಚ್ಛೇದನ ಪಡೆದಿದ್ದರು. ಈ ಎಲ್ಲಾ ಕೌಟುಂಬಿಕ ಕಾರಣದಿಂದ ಅವರು ಮಾನಸಿಕ ಅಸ್ವಸ್ಥರಾದರು ಎಂಬ ಮಾಹಿತಿ ಲಭಿಸಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

ಸಂಬಂಧಿಕರು ಜಿಲ್ಲಾಸ್ಪತ್ರೆ ಹಾಗೂ ಸ್ವರ್ಗ ಆಶ್ರಮವನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಪ್ರಸಾದ್ ಶೆಟ್ಟಿ ನಿಟ್ಟೂರು ಹಾಗೂ ಉದ್ಯಾವರ ರಾಮದಾಸ್ ಪಾಲನ್ ಸಹಕರಿಸಿದ್ದರು. ಉಡುಪಿಯಂತಹ ಪ್ರಜ್ಞಾವಂತರ ನಾಡಿನಲ್ಲಿ ನಡೆದಿರುವ ಈ ಘಟನೆ ಜಿಲ್ಲೆಗೆ ಅವಮಾನ ಎಂದು ವಿಶು ಶೆಟ್ಟಿ ವಿಶಾದ ವ್ಯಕ್ತ ಪಡಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗಾಜಾದಲ್ಲಿ 5 ರೂಪಾಯಿಯ ಪಾರ್ಲೆಜಿ ಬಿಸ್ಕತ್ ಬೆಲೆ 2,300 ರೂಪಾಯಿ !

ಗಾಜಾ ಪಟ್ಟಣದಲ್ಲಿ, ಆಹಾರ ಸೇರಿದಂತೆ ಮೂಲಭೂತ ಅಗತ್ಯ ವಸ್ತುಗಳ ಲಭ್ಯತೆ ಕುಸಿದಿದೆ. ಈ ಭೀಕರ ಪರಿಸ್ಥಿತಿಯಲ್ಲಿ, ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ₹5ಕ್ಕೆ ಲಭ್ಯವಿರುವ ಪಾರ್ಲೆ-ಜಿ ಬಿಸ್ಕತ್ ಗಾಜಾದಲ್ಲಿ ₹2,300ಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿರುವ ವರದಿ ವೈರಲ್ ಆಗಿದೆ.

ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆಗೆ ಕೇಂದ್ರದಿಂದ ಪರವಾನಿಗೆ! ಸೆಟಲೈಟ್ ಇಂಟರ್ನೆಟ್ ಸೇವೆಗೆ ಮತ್ತೊಂದು ಹೆಜ್ಜೆ

ಅಮೆರಿಕದ ಆಂತರಿಕ್ಷ ತಂತ್ರಜ್ಞಾನ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಸ್ಪೇಸ್ ಎಕ್ಸ್‌ಗೆ ಸೇರಿದ ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಸಂಸ್ಥೆಗೆ ಭಾರತದಲ್ಲಿ ಸೆಟಲೈಟ್ ಕಮ್ಯೂನಿಕೇಶನ್ ಸೇವೆ ನೀಡಲು ದೂರಸಂಪರ್ಕ ಇಲಾಖೆಯಿಂದ (DoT) ಪರವಾನಿಗೆ ನೀಡಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಒಂದು ಅನಾನಸಿನಲ್ಲಿ 13 ಗಿಡಗಳು! ಕಾರ್ಕಳದ ಮೆಜೆಸ್ಟಿಕ್ ಕ್ರಶರ್ ಕೈದೋಟದಲ್ಲಿ ಪ್ರಕೃತಿಯ ವಿಸ್ಮಯ

ಕಾರ್ಕಳದ ಗುಂಡ್ಯಡ್ಕದಲ್ಲಿರುವ ಮೆಜೆಸ್ಟಿಕ್ ಕ್ರಶರ್ ನ ಕೈದೋಟದಲ್ಲಿ ಕಂಡುಬಂದಿರುವ ಅನಾನಸು ಹಣ್ಣು ಇಲ್ಲಿನ ಎಲ್ಲರನ್ನೂ ಆಚ್ಚರಿಗೊಳಿಸಿದೆ.

ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಯ ಜಾಮೀನು ರದ್ದು ಪಡಿಸಿದ ಸುಪ್ರೀಂ ಕೋರ್ಟ್!

ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಯ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.