spot_img

ಸಿದ್ದರಾಮಯ್ಯ ಹೇಳಿಕೆಗೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಚರ್ಚೆ: ಯಡಿಯೂರಪ್ಪ, ವಿಜಯೇಂದ್ರ ಆಕ್ರೋಶ

Date:

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ “ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ” ಎಂಬ ಹೇಳಿಕೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, “ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ನಡೆದಿರುವ ಈ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಿತ್ತು. ಸಿದ್ದರಾಮಯ್ಯನವರ ಬಾಲಿಶ ಹೇಳಿಕೆ ಖಂಡನೀಯ. ದೇಶದ ಜನರ ಕ್ಷಮೆ ಕೇಳಿ, ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕು,” ಎಂದು ಹೇಳಿದ್ದಾರೆ.

ವಿಜಯೇಂದ್ರ ಕೂಡ ಸಿದ್ದರಾಮಯ್ಯನವರನ್ನು ಆಕ್ರೋಶಭರಿತವಾಗಿ ಟೀಕಿಸಿ, “ಅಲ್ಪಸಂಖ್ಯಾತರ ಓಲೈಕೆಗಾಗಿ ಸಿದ್ದರಾಮಯ್ಯ ಈ ಮಟ್ಟಕ್ಕೂ ಇಳಿದಿದ್ದಾರೆ. ಪಾಕಿಸ್ತಾನದ ಪರವಾಗಿ ಮಾತನಾಡುತ್ತಿರುವ ರೀತಿಯಿಂದ ಪಾಕಿಸ್ತಾನದಲ್ಲಿ ಇವರ ಹೆಸರಿನಲ್ಲಿ ಮಸೀದಿ ಕಟ್ಟಿದರೆ ಆಶ್ಚರ್ಯವಿಲ್ಲ,” ಎಂದು ಹರಿಹಾಯ್ದಿದ್ದಾರೆ.

ಅವರು ಮುಂದುವರೆದು, “ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಯನ್ನು ಜಗತ್ತೇ ಖಂಡಿಸುತ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಪರವಾಗಿ ನಿಲ್ಲುವುದು ರಾಷ್ಟ್ರದ್ರೋಹಕ್ಕೆ ಸಮಾನ. ಸಿದ್ದರಾಮಯ್ಯ ತಕ್ಷಣ ಕ್ಷಮೆ ಕೇಳಬೇಕು,” ಎಂದು ಆಗ್ರಹಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪಹಲ್ಗಾಮ್​ನಲ್ಲಿ ಉಗ್ರರ ದಾಳಿಯಿಂದ ಪಾರಾದ ಕಾರವಾರದ ಶಿರಸಿಯ ಕುಟುಂಬ

ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯಿಂದ ಕಾರವಾರದ ಶಿರಸಿಯ ಪ್ರದೀಪ್ ಹೆಗಡೆ ಕುಟುಂಬ ಪಾರಾಗಿದ್ದಾರೆ.

ಕೋಳಿ vs ಮೀನು: ಬೇಸಿಗೆಯಲ್ಲಿ ಯಾವುದು ಹೆಚ್ಚು ಹಿತಕರ?

ಬೇಸಿಗೆಯಲ್ಲಿ ಬಹಳಷ್ಟು ಜನರು ತಂಪು ಪಾನೀಯ ಮತ್ತು ಹಗುರ ಆಹಾರವನ್ನು ತಿನ್ನಲು ಬಯಸುತ್ತಾರೆ, ಏಕೆಂದರೆ ಈ ಕಾಲದಲ್ಲಿ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತದೆ. ಆದರೆ ಮಾಂಸಾಹಾರ ಪ್ರಿಯರಿಗೆ, ಈ ಸಮಯದಲ್ಲೂ ಕೋಳಿ ಅಥವಾ ಮೀನು ತಿನ್ನುವ ವಿಚಾರದಲ್ಲಿ ಸಾಕಷ್ಟು ಕುತೂಹಲವಿದೆ.

ಮರ್ಯಾದೆಗಾಗಿ ಮಗಳನ್ನು ಹತ್ಯೆಗೈದು ನದಿಗೆ ಎಸೆದ ತಂದೆ: 7 ತಿಂಗಳ ಬಳಿಕ ಭೀಕರ ಪ್ರಕರಣ ಬಹಿರಂಗ

'ಮರ್ಯಾದೆ' ಹೆಸರಿನಲ್ಲಿ ಅಪ್ರಾಪ್ತ ಮಗಳನ್ನು ಹತ್ಯೆಗೈದು ಕೃಷ್ಣಾ ನದಿಗೆ ಎಸೆದ ಹೃದಯ ವಿದ್ರಾವಕ ಘಟನೆ ಏಳು ತಿಂಗಳ ನಂತರ ಬೆಳಕಿಗೆ ಬಂದಿದೆ.

ಶಂಕರಿ ಪ್ರತಿಷ್ಠಾನ (ರಿ.) ಮಡಿಲು ಆಶ್ರಮದ ವಾರ್ಷಿಕೋತ್ಸವ: ಡಾ. ಕಾಂತಿ ಹರೀಶ್ ಅವರ ಸೇವೆಗೆ ಸಂದ ಗೌರವ

ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.