spot_img

ಶ್ರೀ. ದು. ಪ. ವಿ. ಸ. ಸಂಘ ಜೋಡು ರಸ್ತೆ ವತಿಯಿಂದ ಕಾರ್ಕಳ ಸರಕಾರಿ ಆಸ್ಪತ್ರೆಗೆ ರೆಫ್ರಿಜರೇಟರ್ ಹಾಗೂ ಹಣ್ಣು ಹಂಪಲು ವಿತರಣೆ

Date:

ಶ್ರೀ ದುರ್ಗಾ ಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಜೋಡುರಸ್ತೆ ಕಾರ್ಕಳ ಇದರ ವತಿಯಿಂದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಕಾರ್ಕಳ ಇಲ್ಲಿಗೆ ರೆಫ್ರೀಜರೇಟರ್ ಹಾಗೂ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಇವರ ಉಪಸ್ಥಿತಿಯಲ್ಲಿ ನಡೆಸಲಾಯಿತು . ಸುನಿಲ್ ಕುಮಾರ್ ಅವರು ಮಾತನಾಡಿ ಸಂಘ ಸಂಸ್ಥೆಗಳು ಈ ರೀತಿ ಕೊಡುಗೆಗಳನ್ನು ನೀಡುವುದರಿಂದ ಹಲವಾರು ಬಡಜನರಿಗೆ ಉಪಯೋಗವಾಗುತ್ತದೆ. ಎಲ್ಲವನ್ನೂ ಸರಕಾರದಿಂದ ಭರಿಸುವುದು ಕಷ್ಟವಾಗುತ್ತದೆ ಎಂದು ತಿಳಿಸಿ ಸಂಘಕ್ಕೆ ಶುಭವನ್ನು ಹಾರೈಸಿದರು. ಸಂಘದ ಅಧ್ಯಕ್ಷರು ಮಾತನಾಡಿ ಸಂಘವು ಈ ಹಿಂದೆಯೂ ಸರಕಾರಿ ಆಸ್ಪತ್ರೆಗೆ ಕೊರೋನ ಸಂದರ್ಭದಲ್ಲಿ ಆಮ್ಲಜನಕ ಘಟಕಕ್ಕೆ ಧನ ಸಹಾಯ ನೀಡಿರುತ್ತದೆ ಹಾಗೂ ಇನ್ನಿತರ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ ಎಂದರು. ಹಾಗೆಯೇ ಶಾಸಕರ ಸರ್ವ ರೀತಿಯ ಸಹಕಾರ ಸಂಘಕ್ಕೂ ಇರಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಶ್ರೀಮತಿ ಶಶಿಕಲಾ ಸಹ ವೈದ್ಯರಾದ ಡಾ| ಶ್ರೀ ಅನಂತ್ ಕಾಮತ್, ಡಾ| ಶ್ರೀ ಉದಯ ಕುಮಾರ್ , ಹಾಗೂ ಸಂಘದ ಉಪಾಧ್ಯಕ್ಷರಾದ ಶ್ರೀ ವೃಷಭರಾಜ್ ಕಡಂಬ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಶ್ರೀ,ನಿರ್ದೇಶಕ ರಾದ ಶ್ರೀಯೋಗಿಶ್ ಸಾಲಿಯಾನ್, ಶ್ರೀ ಸಂದೀಪ್ ನಾಯಕ್, ಶ್ರೀದಿನೇಶ್ ಕುಮಾರ್, ವೈ.ಶ್ರೀ ಅನಿಲ್ ಕುಮಾರ್ ಸಂಘದ ಸಿಬ್ಬಂದಿಯವರು ಹಾಗೂ ಆಸ್ಪತ್ರೆ ಸಿಬ್ಬಂದಿಯವರು ಉಪಸ್ಥಿತರಿದ್ದರು

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕರ್ನಾಟಕದ 15+ ಜಿಲ್ಲೆಗಳಿಗೆ ಗುಡುಗು-ಮಿಂಚು ಸಹಿತ ಮಳೆ

ಕರ್ನಾಟಕದಲ್ಲಿ ಮಳೆಗಾಲದ ಸಂಭವವಿದೆ. ಜೂನ್ 11ರಿಂದ ರಾಜ್ಯದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಆರಂಭವಾಗುವ ಸಾಧ್ಯತೆ ಇದೆ

ಮಣಿಪುರದಲ್ಲಿ ನಾಯಕನ ಬಂಧನದಿಂದ ಪ್ರತಿಭಟನೆಗಳು ಉಗ್ರರೂಪ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮತ್ತು ಪ್ರತಿಭಟನೆಗಳು ತಲೆದೋರಿದ್ದು, ಸರ್ಕಾರವು ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದೆ.

ಜೋಳದಿಂದ ಹಾಲಿನ ಪ್ಯಾಕ್! ಬಮೂಲ್ನ ಅದ್ಭುತ ತಂತ್ರಜ್ಞಾನ

ಪ್ಲಾಸ್ಟಿಕ್‌ ಮಾಲಿನ್ಯವನ್ನು ಕಡಿವಾಣ ಹಾಕುವ ದಿಶೆಯಲ್ಲಿ ಬೆಂಗಳೂರು ಹಾಲು ಒಕ್ಕೂಟ (ಬಮೂಲ್‌) ಒಂದು ಹೊಸ ಹಂತಕ್ಕೆ ಪಾದಾರ್ಪಣೆ ಮಾಡಿದೆ

ಜೂನ್ 9ರಂದು ಮೋದಿ ಸರ್ಕಾರಕ್ಕೆ 11 ವರ್ಷ – ದೇಶಾದ್ಯಂತ ವಿಶೇಷ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರದಲ್ಲಿ 11 ವರ್ಷಗಳನ್ನು ಪೂರ್ಣಗೊಳಿಸಲಿದೆ