spot_img

ನಂದಳಿಕೆ ಸಿರಿ ಜಾತ್ರೆಗೂ ಸೆಲ್ಫಿ ಪಾಯಿಂಟ್ ಟಚ್: ಪ್ರಚಾರದಲ್ಲಿ ಸುಹಾಸ್ ಹೆಗ್ಡೆ ಅವರ ಹೊಸ ಆಯಾಮ

Date:

ಉಡುಪಿ ಜಿಲ್ಲೆಯ ಬೆಳ್ಮಣ್ ಹತ್ತಿರದ ನಂದಳಿಕೆಯಲ್ಲಿ ನಡೆಯುವ ಮಹಾಲಿಂಗೇಶ್ವರ ದೇವಾಲಯದ ಸಿರಿ ಜಾತ್ರೆ ಪ್ರಚಾರಕ್ಕಾಗಿ ಪ್ರತೀ ವರ್ಷವೂ ವಿಭಿನ್ನ ತಂತ್ರ ಜಾರಿ ಮಾಡುವ ಸುಹಾಸ್ ಹೆಗ್ಡೆ ಅವರು ಈ ಬಾರಿಯೂ ವಿಶಿಷ್ಟ ಕ್ರಮವೊಂದನ್ನು ಅಳವಡಿಸಿದ್ದಾರೆ.

ಏಪ್ರಿಲ್ 12ರಂದು ನಡೆಯಲಿರುವ ಸಿರಿ ಜಾತ್ರೆಗಾಗಿ ಈ ಬಾರಿ “ಸೆಲ್ಸಿ ಪಾಯಿಂಟ್” ಎಂಬ ಆಕರ್ಷಕ ಆಧ್ಯಾತ್ಮ–ಡಿಜಿಟಲ್ ಸಂಯೋಜನೆಯ ಪ್ರಚಾರ ರೂಪುಗೊಂಡಿದೆ. ದೇವಸ್ಥಾನದ ಗೋಪುರದ ಆಕಾರದ ಕಟೌಟ್ ತಯಾರಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ — ಬಸ್ಸು ನಿಲ್ದಾಣ, ಅಂಗಡಿಗಳ ಮುಂಭಾಗ ಸೇರಿದಂತೆ ಜನಸಂಚಾರದ ಪ್ರಮುಖ ಕಡೆಗಳಲ್ಲಿ ಇಡಲಾಗುತ್ತಿದೆ.

ಈ ಕಟೌಟ್ ಮುಂದೆ ನಿಂತು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿದ್ದು, ಅತ್ಯುತ್ತಮ ಚಿತ್ರಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಸುಹಾಸ್ ಹೆಗ್ಡೆ ತಿಳಿಸಿದ್ದಾರೆ.

ಈ ಹಿಂದೆ ನಂದಳಿಕೆ ಸಿರಿ ಜಾತ್ರೆಯ ಪ್ರಚಾರ ಮೈಲುಗಲ್ಲು, ಭತ್ತದ ಗೋಣಿ, ಹಕ್ಕಿಗಳಿಗೆ ಮಣ್ಣಿನ ಪಾತ್ರೆ, ಅಂಚೆ ಕಾರ್ಡ್, ಕೊಡೆ ಮುಂತಾದ ವಿಶಿಷ್ಟ ರೀತಿಗಳಲ್ಲಿ ನಡೆದಿತ್ತು. ಈ ವರ್ಷ “ಸೆಲ್ಸಿ ಪಾಯಿಂಟ್” ಮೂಲಕ ಹೊಸ ಕಲ್ಪನೆಗೆ ಚಾಲನೆ ನೀಡಲಾಗಿದೆ.

ಪ್ರಚಾರ ಪರಿಕಲ್ಪನೆಯ ರೂವಾರಿ ಸುಹಾಸ್ ಹೆಗ್ಡೆ ಶುಕ್ರವಾರ ಈ ಹೊಸ ತಂತ್ರವನ್ನು ನಂದಳಿಕೆಯಲ್ಲಿ ಬಿಡುಗಡೆ ಮಾಡಿದರು. ಈ ಆಧುನಿಕ ಸೆಲ್ಫಿ ಕಾನ್ಸೆಪ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಿರಿ ಜಾತ್ರೆಯ ಚರ್ಚೆಗೆ ಹೊಸ ರಸಕೊಟ್ಟಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಜಿರೆಯಲ್ಲಿ ಅಕ್ರಮ ಕೂಟ, ಶಾಂತಿ ಭಂಗ: ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲು!

ಉಜಿರೆಯಲ್ಲಿ ಶಾಂತಿ ಭಂಗ ಆರೋಪಕ್ಕೆ ಮಹೇಶ್ ತಿಮರೋಡಿ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲು.

ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್!

ಕರ್ನಾಟಕದ ಕರಾವಳಿ ಭಾಗದಲ್ಲಿ ಇಂದು ಭಾರೀ ಮಳೆಯ ಸಂಭವವಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಕಾಂತಾವರ : ಎ.22 ರಿಂದ ಶ್ರೀ ಕ್ಷೇತ್ರ ಕೇಪ್ಲಾಜೆ ಬ್ರಹ್ಮಕಲಶ ವರ್ಧಂತಿ ಉತ್ಸವ ಹಾಗೂ ಪಗ್ಗು ಮಾರಿಪೂಜೆ.

ಎ.22 ರಿಂದ ಶ್ರೀ ಕ್ಷೇತ್ರ ಕೇಪ್ಲಾಜೆ ಮಹಾಮ್ಮಾಯಿ ದೇವಿಗುಡಿಯಲ್ಲಿ ಬ್ರಹ್ಮಕಲಶ ವರ್ಧಂತಿ ಉತ್ಸವ ಹಾಗೂ ಪಗ್ಗು ಮಾರಿಪೂಜೆಯು ಜರಗಲಿರುವುದು.

ನಿವೃತ್ತ ಡಿಜಿ ಓಂ ಪ್ರಕಾಶ್‌ ಬರ್ಬರ ಹತ್ಯೆ: ಪತ್ನಿಯ ಮೇಲೆ ಕೊಲೆ ಆರೋಪ!

ಬೆಂಗಳೂರು ನಗರದಲ್ಲಿ ಭೀಕರ ಘಟನೆ ನಡೆದಿದೆ. ಹೆಚ್‌ಎಸ್‌ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್‌ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.