spot_img

ಪಹಲ್ಗಾಮ್ ಉಗ್ರ ದಾಳಿ ನಂತರ ರಾಜ್ಯದಲ್ಲಿ ಭದ್ರತಾ ತೀವ್ರತೆ: ಗುಪ್ತಚರ ಇಲಾಖೆ ಎಚ್ಚರಿಕೆ ಸೂಚನೆ

Date:

ಬೆಂಗಳೂರು, ಮೇ 9: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಂಟಾದ ಉಗ್ರ ದಾಳಿಗೆ ಭಾರತೀಯ ಸೇನೆಯು ‘ಆಪರೇಷನ್ ಸಿಂದೂರ’ ಮೂಲಕ ತೀವ್ರ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ, ದೇಶದ ಗಡಿ ಭಾಗಗಳಲ್ಲಿ ಯುದ್ಧದ ಭೀತಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಗುಪ್ತಚರ ಇಲಾಖೆ ರಾಜ್ಯಾದ್ಯಂತ ಭದ್ರತೆಯ ಮಟ್ಟ ಹೆಚ್ಚಿಸಲು ತುರ್ತು ಸೂಚನೆ ನೀಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ತಪಾಸಣೆ ಹಾಗೂ ವೀಕ್ಷಣೆಯು ಹೆಚ್ಚಿಸಲ್ಪಟ್ಟಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ, ಶಾಪಿಂಗ್ ಮಾಲ್, ಧಾರ್ಮಿಕ ಸ್ಥಳಗಳತ್ತ ವಿಶೇಷ ಗಮನ ಹರಿಸಲಾಗುತ್ತಿದೆ.

ಗುಪ್ತಚರ ಇಲಾಖೆಯು ನಿಷಿದ್ಧ ಸಂಘಟನೆಗಳಿಗೆ ಸೇರಿರುವವರು, ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯಗಳಲ್ಲಿ ಭಾಗಿಯಾದವರು, ದೇಶದ ಶಾಂತಿಗೆ ಧಕ್ಕೆಯುಂಟು ಮಾಡುವ ಬಗೆಯಲ್ಲಿ ಪ್ರಚೋದನಾತ್ಮಕ ಭಾಷಣ ಅಥವಾ ಪೋಸ್ಟ್ ಮಾಡುವವರು, ತಾಂತ್ರಿಕ ಸಾಧನಗಳನ್ನು ಬಳಸುವ ಮೂಲಕ ಅಶಾಂತಿಯ ಗಾಳಿ ಹರಡುವವರ ಮೇಲೆ ಕಣ್ಣಿಡಲು ಎಲ್ಲ ಜಿಲ್ಲೆಗಳಿಗೂ ಸೂಚನೆ ನೀಡಿದೆ.

ಅದರಲ್ಲೂ, ಅನುಮಾನಾಸ್ಪದ ವ್ಯಕ್ತಿಗಳು, ಹೋಟೆಲ್‌ಗಳಲ್ಲಿ ತಂಗಿರುವವರ ದಾಖಲಾತಿಗಳು, ಅಪರಿಚಿತ ವ್ಯಕ್ತಿಗಳ ಚಲನವಲನಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ರೆಡ್ ಕ್ರಾಸ್ ದಿನ

ವಿಶ್ವದ ಶಾಂತಿಗಾಗಿ ವಿಶ್ವದ ಆರೋಗ್ಯಕ್ಕಾಗಿ ಮೇ 8ರಂದು ಜಗತ್ತಿನಾದ್ಯಂತ ವಿಶ್ವ ರೆಡ್ ಕ್ರಾಸ್ ದಿನ ಎಂದು ಆಚರಿಸಲ್ಪಡುತ್ತಿದೆ.ವಿಶ್ವ ರೆಡ್ ಕ್ರಾಸ್ ಸಂಸ್ಥೆಯ ಜನಕನಾದ ಹೆನ್ರಿ ಡ್ಯೂನಾಂಟ್ ಎನ್ನುವವರ ಜನ್ಮದಿನವಾದ ಕಾರಣದಿಂದ ಈ ದಿನವನ್ನು ಅದರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ.

ಆರೋಗ್ಯದಿಂದ ನಿದ್ರೆವರೆಗೆ: ಗಸಗಸೆ ಬೀಜಗಳ ಅಪರೂಪದ ಗುಣಗಳು!

ಭಾರತೀಯ ಮನೆಮದ್ದುಗಳಲ್ಲಿ ಪ್ರಮುಖವಾಗಿ ಬಳಸುವ ಗಸಗಸೆ ಬೀಜಗಳು ಈಗ ಪುನಃ ಗಮನ ಸೆಳೆಯುತ್ತಿವೆ. ಬಲವಾದ ಆರೋಗ್ಯ, ಉತ್ತಮ ನಿದ್ರೆ, ಜೀರ್ಣಕ್ರಿಯೆ ಸುಧಾರಣೆ, ನೋವಿನ ನಿವಾರಣೆ ಇತ್ಯಾದಿಗಳಲ್ಲಿ ಈ ಪುಟ್ಟ ಬೀಜಗಳ ಮಹತ್ವ ಅಪಾರವಾಗಿದೆ.

ಇಂಧನ ಕೊರತೆ ಇಲ್ಲ , ಜನರಲ್ಲಿ ಭೀತಿ ಬೇಡ ! ಎಂದು ಸ್ಪಷ್ಟನೆ ನೀಡಿದ ಇಂಡಿಯನ್ ಆಯಿಲ್

ಗಡಿ ರಾಜ್ಯಗಳಲ್ಲಿ ಪೆಟ್ರೋಲ್ ಬಂಕ್‌ಗಳಿಗೆ ಸಾಲು ಕಟ್ಟಿರುವ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ, ಇಂಡಿಯನ್ ಆಯಿಲ್ ಕಾರ್ಪೊರೇಶನ್ “ಇಂಧನ ಬೇಕಾದಷ್ಟಿದೆ , ಆತಂಕ ಬೇಡ!” ಎಂದು ಸ್ಪಷ್ಟನೆ ನೀಡಿದೆ.

ಅಮೆರಿಕದ ರಾಬರ್ಟ್ ಪ್ರೆವೋಸ್ಟ್ 267ನೇ ಪೋಪ್‌ ಆಗಿ ಆಯ್ಕೆ

ಕ್ಯಾಥೋಲಿಕ್ ಚರ್ಚ್ ಇತಿಹಾಸದಲ್ಲಿ ಮಹತ್ವದ ಅಧ್ಯಾಯ ಬೆಳಗಿದ್ದು, ಅಮೆರಿಕದ ಚಿಕಾಗೋ ಮೂಲದ 69 ವರ್ಷದ ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್ ಅವರನ್ನು 267ನೇ ಪೋಪ್‌ ಆಗಿ ಆಯ್ಕೆ ಮಾಡಲಾಗಿದೆ.