
ನವದೆಹಲಿ : ಲಂಡನ್ನಲ್ಲಿ ಮಾರ್ಚ್.6 ಬುಧವಾರದಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಕಾರ್ಯಕ್ರಮದಲ್ಲಿ ಭದ್ರತಾ ಲೋಪದ ಘಟನೆ ನಡೆದಿದೆ. ಖಾಲಿಸ್ತಾನಿ ಪರ ವ್ಯಕ್ತಿಯೊಬ್ಬ ಭದ್ರತಾ ಬ್ಯಾರಿಕೇಡ್ ಮುರಿದು ಜೈಶಂಕರ್ ಅವರತ್ತ ತೆರಳಲು ಪ್ರಯತ್ನಿಸಿದ್ದು, ಈ ವೇಳೆ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾನೆ.
ಈ ಘಟನೆ ಚಾಥಮ್ ಹೌಸ್ನಲ್ಲಿ ನಡೆದ ಸಂವಾದಾತ್ಮಕ ಅಧಿವೇಶನದ ಬಳಿಕ ಜೈಶಂಕರ್ ಹೊರಬರುವ ಸಂದರ್ಭದಲ್ಲಿ ಸಂಭವಿಸಿದೆ. ಆದರೆ ಅಧಿಕಾರಿಗಳು ತಕ್ಷಣ ಎಚ್ಚರಿಕೆ ವಹಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಭದ್ರತಾ ಲೋಪದ ಈ ಘಟನೆಯಿಂದ ಲಂಡನ್ನಲ್ಲಿ ಭಾರತೀಯ ನಾಯಕರ ಭದ್ರತೆ ಕುರಿತು ಪ್ರಶ್ನೆಗಳು ಹುಟ್ಟಿಕೊಂಡಿವೆ.