
ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ 18 ವರ್ಷದ ನಿರೀಕ್ಷೆಗೆ ತೆರೆ ಬೀಳಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೊನೆಗೂ ಕಪ್ ಗೆದ್ದಿದೆ. ಈ ಐತಿಹಾಸಿಕ ಗೆಲುವು ಆರ್ಸಿಬಿ ಅಭಿಮಾನಿಗಳ ನಡುವೆ ದೊಡ್ಡ ಸಂಭ್ರಮ ಹುಟ್ಟಿಸಿದೆ. ಈ ಸಂಭ್ರಮಕ್ಕೆ ಸೌಬಾಗ್ಯವಂತವಾಗಿ ಮೆಚ್ಚುಗೆ ವ್ಯಕ್ತ ಪಡಿಸಿವರು ತಂಡದ ಸ್ಥಾಪಕರಲ್ಲೊಬ್ಬರಾದ ವಿವಾದಾಸ್ಪದ ಉದ್ಯಮಿ ವಿಜಯ್ ಮಲ್ಯ.
ಆರ್ಸಿಬಿ ತಂಡದ ಆರಂಭಿಕ ಮಾಲೀಕರಾಗಿದ್ದ ವಿಜಯ್ ಮಲ್ಯ ಅವರು ತಮ್ಮ ಟ್ವೀಟ್ನಲ್ಲಿ, “ಆರ್ಸಿಬಿ ಕೊನೆಗೂ ಚಾಂಪಿಯನ್ ಆಗಿದೆ. 18 ವರ್ಷಗಳ ಕನಸು ನನಸಾಗಿದೆ. ವಿರಾಟ್ ಕೊಹ್ಲಿ, ಗೇಲ್ ಮತ್ತು ಎಬಿಡಿವಿಲಿಯರ್ಸ್ ಮುಂತಾದ ಸ್ಟಾರ್ ಆಟಗಾರರನ್ನು ಆಯ್ಕೆ ಮಾಡಿದ್ದೆ. ತಂಡದ ಅಭಿಮಾನಿಗಳು ಈ ಗೆಲುವಿಗೆ ಅರ್ಹರು” ಎಂದು ಬರೆದಿದ್ದರು.
ಇದಕ್ಕೆ ಪ್ರತಿಯಾಗಿ ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಮಲ್ಯರಿಗೆ ಟಾಂಗ್ ನೀಡಿದ್ದು, “ಮೊದಲು ಭಾರತಕ್ಕೆ ಬನ್ನಿ”, “ಬ್ಯಾಂಕ್ ಸಾಲ ತೀರಿಸಿ” ಎಂಬಂತಹ ಕಾಮೆಂಟ್ಗಳ ಮೂಲಕ ಖಟಾಸು ಹೇಳಿದರು.
ಅದರಲ್ಲಿ ಎಲ್ಲಕ್ಕಿಂತ ಗಮನಸೆಳೆದದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೀಡಿದ ಪ್ರತಿಕ್ರಿಯೆ. ಎಸ್ಬಿಐ ಅಧಿಕೃತ ಖಾತೆಯಿಂದ, “ಸರ್… ಭಾರತಕ್ಕೆ ಬನ್ನಿ, ನಾವೆಲ್ಲಾ ಒಟ್ಟಿಗೆ ಆರ್ಸಿಬಿ ವಿಜಯವನ್ನು ಆಚರಿಸೋಣ” ಎಂಬ ಸಂದೇಶದೊಡನೆ ನಗುಮುಖ ಇಮೋಜಿ ಕೂಡ ಬಳಸಲಾಗಿದೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಖಾಸಗಿ ಉದ್ಯಮಿ ಹರ್ಷ ಗೋಯೆಂಕಾ ಈ ಪ್ರತಿಕ್ರಿಯೆಯ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ.
ವಿಜಯ್ ಮಲ್ಯನಿಗೆ ಭಾರತೀಯ ಬ್ಯಾಂಕುಗಳಿಗೆ ಒಟ್ಟು ₹9000 ಕೋಟಿ ರೂಪಾಯಿಗೂ ಹೆಚ್ಚು ಸಾಲ ಬಾಕಿ ಇದೆ. ಅವರು ಯುಕೆಗೆ ತೆರಳಿದ ನಂತರ ಭಾರತಕ್ಕೆ ಹಿಂದಿರುಗಿಲ್ಲ. ಮಲ್ಯರನ್ನು ಭಾರತಕ್ಕೆ ತರಲು ಕೇಂದ್ರ ಸರ್ಕಾರ ಹಲವಾರು ಕಾನೂನು ಕ್ರಮಗಳನ್ನು ತೆಗೆದುಕೊಂಡರೂ ಫಲ ನೀಡಿಲ್ಲ.
ಈ ಬೆನ್ನಲ್ಲೇ ಅವರ ಟ್ವೀಟ್ಗೆ ಎಸ್ಬಿಐ ಪ್ರತಿಕ್ರಿಯೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.