spot_img

ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಟ್ವೀಟ್‌ ಮಾಡಿದ ವಿಜಯ್ ಮಲ್ಯಗೆ ಎಸ್‌ಬಿಐ ತಿರುಗುಬಾಣ

Date:

ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ 18 ವರ್ಷದ ನಿರೀಕ್ಷೆಗೆ ತೆರೆ ಬೀಳಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೊನೆಗೂ ಕಪ್ ಗೆದ್ದಿದೆ. ಈ ಐತಿಹಾಸಿಕ ಗೆಲುವು ಆರ್‌ಸಿಬಿ ಅಭಿಮಾನಿಗಳ ನಡುವೆ ದೊಡ್ಡ ಸಂಭ್ರಮ ಹುಟ್ಟಿಸಿದೆ. ಈ ಸಂಭ್ರಮಕ್ಕೆ ಸೌಬಾಗ್ಯವಂತವಾಗಿ ಮೆಚ್ಚುಗೆ ವ್ಯಕ್ತ ಪಡಿಸಿವರು ತಂಡದ ಸ್ಥಾಪಕರಲ್ಲೊಬ್ಬರಾದ ವಿವಾದಾಸ್ಪದ ಉದ್ಯಮಿ ವಿಜಯ್ ಮಲ್ಯ.

ಆರ್‌ಸಿಬಿ ತಂಡದ ಆರಂಭಿಕ ಮಾಲೀಕರಾಗಿದ್ದ ವಿಜಯ್ ಮಲ್ಯ ಅವರು ತಮ್ಮ ಟ್ವೀಟ್‌ನಲ್ಲಿ, “ಆರ್‌ಸಿಬಿ ಕೊನೆಗೂ ಚಾಂಪಿಯನ್ ಆಗಿದೆ. 18 ವರ್ಷಗಳ ಕನಸು ನನಸಾಗಿದೆ. ವಿರಾಟ್ ಕೊಹ್ಲಿ, ಗೇಲ್ ಮತ್ತು ಎಬಿಡಿವಿಲಿಯರ್ಸ್‌ ಮುಂತಾದ ಸ್ಟಾರ್‌ ಆಟಗಾರರನ್ನು ಆಯ್ಕೆ ಮಾಡಿದ್ದೆ. ತಂಡದ ಅಭಿಮಾನಿಗಳು ಈ ಗೆಲುವಿಗೆ ಅರ್ಹರು” ಎಂದು ಬರೆದಿದ್ದರು.

ಇದಕ್ಕೆ ಪ್ರತಿಯಾಗಿ ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಮಲ್ಯರಿಗೆ ಟಾಂಗ್ ನೀಡಿದ್ದು, “ಮೊದಲು ಭಾರತಕ್ಕೆ ಬನ್ನಿ”, “ಬ್ಯಾಂಕ್ ಸಾಲ ತೀರಿಸಿ” ಎಂಬಂತಹ ಕಾಮೆಂಟ್‌ಗಳ ಮೂಲಕ ಖಟಾಸು ಹೇಳಿದರು.

ಅದರಲ್ಲಿ ಎಲ್ಲಕ್ಕಿಂತ ಗಮನಸೆಳೆದದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೀಡಿದ ಪ್ರತಿಕ್ರಿಯೆ. ಎಸ್‌ಬಿಐ ಅಧಿಕೃತ ಖಾತೆಯಿಂದ, “ಸರ್… ಭಾರತಕ್ಕೆ ಬನ್ನಿ, ನಾವೆಲ್ಲಾ ಒಟ್ಟಿಗೆ ಆರ್‌ಸಿಬಿ ವಿಜಯವನ್ನು ಆಚರಿಸೋಣ” ಎಂಬ ಸಂದೇಶದೊಡನೆ ನಗುಮುಖ ಇಮೋಜಿ ಕೂಡ ಬಳಸಲಾಗಿದೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಖಾಸಗಿ ಉದ್ಯಮಿ ಹರ್ಷ ಗೋಯೆಂಕಾ ಈ ಪ್ರತಿಕ್ರಿಯೆಯ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.

ವಿಜಯ್ ಮಲ್ಯನಿಗೆ ಭಾರತೀಯ ಬ್ಯಾಂಕುಗಳಿಗೆ ಒಟ್ಟು ₹9000 ಕೋಟಿ ರೂಪಾಯಿಗೂ ಹೆಚ್ಚು ಸಾಲ ಬಾಕಿ ಇದೆ. ಅವರು ಯುಕೆಗೆ ತೆರಳಿದ ನಂತರ ಭಾರತಕ್ಕೆ ಹಿಂದಿರುಗಿಲ್ಲ. ಮಲ್ಯರನ್ನು ಭಾರತಕ್ಕೆ ತರಲು ಕೇಂದ್ರ ಸರ್ಕಾರ ಹಲವಾರು ಕಾನೂನು ಕ್ರಮಗಳನ್ನು ತೆಗೆದುಕೊಂಡರೂ ಫಲ ನೀಡಿಲ್ಲ.

ಈ ಬೆನ್ನಲ್ಲೇ ಅವರ ಟ್ವೀಟ್‌ಗೆ ಎಸ್‌ಬಿಐ ಪ್ರತಿಕ್ರಿಯೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅಮಿತ್ ಶಾ ರಾಜ್ಯಕ್ಕೆ ಭೇಟಿ – ಯಡಿಯೂರಪ್ಪ ಮೊಮ್ಮಗನ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ (ಜೂನ್ 8) ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ಭೇಟಿಗೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಕುತೂಹಲ ಉಂಟಾಗಿದೆ.

ದಿನ ವಿಶೇಷ – ಕಿರಣ್ ಬೇಡಿ: ಮೊದಲ ಮಹಿಳಾ IPS

ಜೂನ್ 8 ಎಂಬ ದಿನಾಂಕ ಕಿರಣ್ ಬೇಡಿಯವರ ಜೀವನ ಮತ್ತು ಸಾಧನೆಗೆ ಸಂಬಂಧಿಸಿದ ಪ್ರಮುಖ ದಿನ.

ಕಾರ್ಕಳದ ಜನತೆಗೆ ರುಚಿಕರ ಸುದ್ದಿ: ಜೂನ್ 8ರಂದು ‘ದೊನ್ನೆ ಬಿರಿಯಾನಿ ಗ್ರಾಂಡ್ – ನಾಟಿ ಸ್ಟೈಲ್ ಫ್ಯಾಮಿಲಿ ರೆಸ್ಟೋರೆಂಟ್’ ಶುಭಾರಂಭ

ಕಾರ್ಕಳದ ಜೋಡುರಸ್ತೆಯ ವಿಜಯ ಕಾಂಪ್ಲೆಕ್ಸ್‌ನಲ್ಲಿ ಬಹು ನಿರೀಕ್ಷಿತ 'ದೊನ್ನೆ ಬಿರಿಯಾನಿ ಗ್ರಾಂಡ್ – ನಾಟಿ ಸ್ಟೈಲ್ ಫ್ಯಾಮಿಲಿ ರೆಸ್ಟೋರೆಂಟ್' ಜೂನ್ 8, 2025ರ ಆದಿತ್ಯವಾರ ಶುಭಾರಂಭಗೊಳ್ಳಲಿದೆ.

ಕಾರ್ಕಳದಲ್ಲಿ ಜೂನ್ 8ರಂದು’ಡಾ| ಅಜಿಲ ದಂತ ಚಿಕಿತ್ಸಾಲಯ’ ಉದ್ಘಾಟನೆ

ಕಾರ್ಕಳದ ಜೋಡುರಸ್ತೆಯಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಡಾ| ಅಜಿಲ ದಂತ ಚಿಕಿತ್ಸಾಲಯ ಜೂನ್ 8, 2025, ಭಾನುವಾರ ಸಂಜೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ.