
ಮಂಗಳೂರು: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಒಕ್ಕೂಟದ ಸಭೆ ಜೂನ್ 4ರಂದು ಮಂಗಳೂರಿನ ಕೇಂದ್ರ ಕಚೇರಿಯಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಅಡ್ಕರವರನ್ನು ಆಯ್ಕೆ ಮಾಡಲಾಯಿತು.
ಒಕ್ಕೂಟದ ಸ್ಥಾಪಕರಾಗಿರುವ ಶ್ರೀ ರಾಜೇಶ್ ಪವಿತ್ರನ್ ರವರು ಸಂಭ್ರಮಭರಿತವಾಗಿ ಶಲ್ಯ ಹಾಕಿ ನೂತನ ಅಧ್ಯಕ್ಷರಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸಂದೀಪ್ ಶೆಟ್ಟಿ ರವರು ಕಾರ್ಮಿಕರ ಹಕ್ಕುಗಳಿಗಾಗಿ ಶ್ರಮಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕನಾಗಿ ಪರಿಣಮಿಸಲಿ” ಎಂದು ಹಾರೈಸಿದರು.
ಸಂಘದ ನೂತನ ಅಧ್ಯಾಯ ಆರಂಭವಾದ ಈ ಬೆಳವಣಿಗೆಗೆ ಕಾರ್ಮಿಕರಿಂದ ಸಂತೋಷದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಕ್ಕೂಟದ ಮುಂದಿನ ದಿಕ್ಕು ನಿರ್ಧರಿಸುವ ಈ ಆಯ್ಕೆ ಮಹತ್ವದ್ದಾಗಿದ್ದು, ಸಂಘದ ಭವಿಷ್ಯದ ಉಜ್ವಲತೆಯನ್ನು ನಿರೀಕ್ಷಿಸಲಾಗುತ್ತಿದೆ.