spot_img

ಗೋಕರ್ಣದಲ್ಲಿ ರಷ್ಯಾದ ಯೋಧ ಸೆರ್ಗೆಯ್ ಗ್ರಾಬ್ಲೆವ್‌ಗೆ ಶಾಸ್ತ್ರೋಕ್ತ ಶ್ರಾದ್ಧ ವಿಧಿ

Date:

ಗೋಕರ್ಣ : ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಗೋಕರ್ಣದಲ್ಲಿ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ವೀರಮರಣ ಹೊಂದಿದ ರಷ್ಯಾ ಯೋಧ ಸೆರ್ಗೆಯ್ ಗ್ರಾಬ್ಲೆವ್ ಅವರ ಶ್ರಾದ್ಧ ವಿಧಿ ಶಾಸ್ತ್ರೋಕ್ತವಾಗಿ ನೆರವೇರಿತು. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಪುರೋಹಿತ ವೇ. ಪ್ರಶಾಂತ ಹಿರೇಗಂಗೆ ಅವರ ನೇತೃತ್ವದಲ್ಲಿ ನಾರಾಯಣ ಬಲಿ, ಪಿಂಡ ಪ್ರದಾನ, ತರ್ಪಣ ಸೇರಿದಂತೆ ವೈದಿಕ ವಿಧಿ ವಿಧಾನಗಳು ನೆರವೇರಿದವು.

ಸೆರ್ಗೆಯ್ ಅವರ ಸಂಬಂಧಿಕರಾದ ಎಲಿನಾ ಅವರು ಈ ಕಾರ್ಯವನ್ನು ಆಯೋಜಿಸಿದ್ದರು. ರಷ್ಯಾದಲ್ಲಿರುವ ಮೃತ ಯೋಧನ ಕುಟುಂಬದವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ವಿಧಿಗಳಿಗೆ ಭಾಗಿಯಾದರು. ಪ್ರಾರ್ಥನೆಯ ಮೂಲಕ ಅವರು ಸೆರ್ಗೆಯ್ ಅವರ ಆತ್ಮಕ್ಕೆ ಮೋಕ್ಷ ಸಿಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಭಾರತೀಯ ಸಂಸ್ಕೃತಿ ಮತ್ತು ಗೋಕರ್ಣದೊಂದಿಗೆ ನಂಟು:
ಸೆರ್ಗೆಯ್ ಗ್ರಾಬ್ಲೆವ್ 18 ವರ್ಷಗಳ ಹಿಂದೆ ಭಾರತ ಪ್ರವೇಶಿಸಿ ಗೋಕರ್ಣದಲ್ಲಿ ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದರು. ವಾರಣಾಸಿಯಲ್ಲಿ ಸಂಸ್ಕೃತ ಅಧ್ಯಯನ ಮಾಡಿದ್ದ ಅವರು ವೇದಮಂತ್ರಗಳ ಅಭ್ಯಾಸ ಮಾಡುತ್ತ, ಹಿಂದೂ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದರು. ಗೋಕರ್ಣದಲ್ಲಿ ಹಲವರೊಂದಿಗೆ ಆತ್ಮೀಯ ಸಂಪರ್ಕ ಬೆಳೆಸಿದ ಅವರು ಇಲ್ಲಿ “ಸೆರ್ಗೆಯ್ ಬಾಬಾ” ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು.

ವೀರಮರಣದ ಕಥೆ:
ಸೆರ್ಗೆಯ್ ಗ್ರಾಬ್ಲೆವ್ ಅವರು 18 ವರ್ಷಗಳ ಹಿಂದೆ ರಷ್ಯಾ ಸೇನೆಯನ್ನು ತೊರೆದಿದ್ದು , 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದಾಗ ತಾಯ್ನಾಡಿನ ಕರೆಯೊಂದಿಗೆ ಪುನಃ ಸೇನೆಗೆ ಸೇರಿದ್ದರು. ಅವರು ಏಪ್ರಿಲ್ 28, 2025ರಂದು ಯುದ್ಧದಲ್ಲಿ ವೀರಮರಣ ಹೊಂದಿದರು.

ಗೋಕರ್ಣದಲ್ಲಿ ಶ್ರಾದ್ಧ ಆಯೋಜನೆಯ ಕಾರಣ:
ಅವರ ಜೀವನದ ಕೊನೆಯ ದಿನಗಳವರೆಗೆ ಗೋಕರ್ಣವನ್ನು ಆತ್ಮೀಯವಾಗಿ ಮೆಚ್ಚಿದ ಸೆರ್ಗೆಯ್ ಕುಟುಂಬವು ಭಾರತದಲ್ಲಿ ನಡೆಯುವ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ಗೌರವಿಸುವ ದೃಷ್ಟಿಯಿಂದ ಗೋಕರ್ಣದಲ್ಲಿಯೇ ಅವರ ಶ್ರಾದ್ಧ ಕಾರ್ಯವನ್ನು ಆಯೋಜಿಸಿತ್ತು. ಪವಿತ್ರ ಗೋಕರ್ಣ ಕ್ಷೇತ್ರದಲ್ಲಿ ನಡೆದ ಈ ಅಪರೂಪದ ಅಂತ್ಯಕ್ರಿಯೆ ಹಲವರ ಗಮನ ಸೆಳೆದಿದ್ದು, ಸೆರ್ಗೆಯ್ ರವರ ಆತ್ಮೀಯರು ಶ್ರದ್ಧಾಪೂರ್ವಕವಾಗಿ ಭಾಗಿಯಾಗಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಂಗಳೂರಿನಲ್ಲಿ ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಸರ್ವೆಯರ್ ಹಾಗೂ ದಲ್ಲಾಳಿ ಬಂಧನ

ಮಂಗಳೂರಿನಲ್ಲಿ ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಸಿದ್ಧಪಡಿಸುವ ಸಂದರ್ಭ ಲಂಚ ಸ್ವೀಕರಿಸುತ್ತಿದ್ದ ಸರ್ವೆಯರ್ ಮತ್ತು ದಲ್ಲಾಳಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಹೆಡ್ ಕಾನ್ಸ್ಟೇಬಲ್ ರಶೀದ್ ಸೇರಿ ಮಂಗಳೂರು ಕಮಿಷನರೇಟ್‌ಲ್ಲಿ 56 ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ವರ್ಗಾವಣೆ

ಕೋಮು ಸೌಹಾರ್ಧತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ 56 ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.

ವಿದ್ಯೆಗೆ ಜಾತಿಮತ ಬೇಧವಿಲ್ಲ : ಶ್ರೀ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿ, ಕೇಮಾರು ಕ್ಷೇತ್ರ

ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ದಿನಾಂಕ:18/06/2025 ರಂದು ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ, ಪೋಷಕ-ಶಿಕ್ಷಕ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

‘ಆಪರೇಷನ್ ಸಿಂಧು’ ಯಶಸ್ವಿ ಆರಂಭ: ಇರಾನ್‌ನಿಂದ ಸ್ಥಳಾಂತರಗೊಂಡು ದೆಹಲಿ ತಲುಪಿದ 110 ಭಾರತೀಯ ವಿದ್ಯಾರ್ಥಿಗಳು

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ತುರ್ತು ಸಹಾಯದಿಂದ ಸ್ಥಳಾಂತರಿಸುವ ಕಾರ್ಯವನ್ನು ಭಾರತ ಸರ್ಕಾರ ಯಶಸ್ವಿಯಾಗಿ ಆರಂಭಿಸಿದೆ.