spot_img

ಕೆಜಿಎಫ್ ಬಾಬು ಮನೆಗೆ R.T.O ದಾಳಿ: ಐಷಾರಾಮಿ ಕಾರುಗಳ ತೆರಿಗೆ ಪರಿಶೀಲನೆ!

Date:

spot_img

ಬೆಂಗಳೂರು : ರಾಜಕೀಯ ಮುಖಂಡ ಕೆಜಿಎಫ್ ಬಾಬು ಅವರ ಮನೆಗೆ ಇಂದು ಬೆಳ್ಳಂಬೆಳಗ್ಗೆ R.T.O ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಐಷಾರಾಮಿ ಕಾರುಗಳ ತೆರಿಗೆ ಪಾವತಿ ಕುರಿತು ಪರಿಶೀಲನೆ ನಡೆಸಲು ಈ ದಾಳಿ ನಡೆಸಲಾಗಿದೆ. ರೋಲ್ಸ್ ರಾಯ್, ವೆಲ್ಫೇರ್ ಸೇರಿದಂತೆ ಹಲವು ದುಬಾರಿ ವಾಹನಗಳನ್ನು ಹೊಂದಿರುವ ಬಾಬು ಅವರು ತೆರಿಗೆ ಕಟ್ಟಿಲ್ಲ ಎಂಬ ಆರೋಪದ ಮೇಲೆ ಅಧಿಕಾರಿಗಳು ಕಾರುಗಳನ್ನು ಜಪ್ತಿ ಮಾಡಲು ಮುಂದಾಗಿದ್ದಾರೆ.

ಆರ್ಟಿಓ ಜಂಟಿ ಆಯುಕ್ತರಾದ ಶೋಭಾ ಅವರ ನೇತೃತ್ವದ ತಂಡವು, ಕೆಜಿಎಫ್ ಬಾಬು ಅವರ ಕಾರುಗಳ ಸಂಪೂರ್ಣ ಪಟ್ಟಿಯೊಂದಿಗೆ ಅವರ ಮನೆಗೆ ಆಗಮಿಸಿತ್ತು. ಬೇರೆ ರಾಜ್ಯಗಳಲ್ಲಿ ನೋಂದಣಿಯಾಗಿರುವ ಐಷಾರಾಮಿ ಕಾರುಗಳ ತೆರಿಗೆ ಪಾವತಿ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳು ಮುಂದಾದರು.

ಆದರೆ, ಆರ್ಟಿಓ ಅಧಿಕಾರಿಗಳು ಬಂದಾಗ ಕೆಜಿಎಫ್ ಬಾಬು ಗೇಟ್ ತೆರೆಯಲು ನಿರಾಕರಿಸಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಸಾಕಷ್ಟು ಸಮಯ ಕಾಯಬೇಕಾಯಿತು. ನಂತರ, ಆರ್ಟಿಓ ಅಧಿಕಾರಿಗಳು ಹೈ ಗ್ರೌಂಡ್ ಹೊಯ್ಸಳ ಪೊಲೀಸರನ್ನು ಕರೆಸಿ, ಅವರ ಮೂಲಕ ಗೇಟ್ ತೆರೆಯಲು ಸೆಕ್ಯೂರಿಟಿ ಜೊತೆ ಮಾತುಕತೆ ನಡೆಸಿ, ಒಳಗೆ ಪ್ರವೇಶಿಸಿದರು.

ಕೆಜಿಎಫ್ ಬಾಬು ಅವರು MH 11 AX 1 ನೋಂದಣಿಯ ರೋಲ್ಸ್ ರಾಯ್ ಮತ್ತು MH 02 BB 2 ನೋಂದಣಿಯ ರೋಲ್ಸ್ ರಾಯ್ ಕಾರುಗಳನ್ನು ಹೊಂದಿದ್ದಾರೆ. ಇದಲ್ಲದೆ, ಅವರು ತಮ್ಮ ಮೊಮ್ಮಗಳಿಗಾಗಿ ವೆಲ್ಫೇರ್ ಕಾರ್ ಖರೀದಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, MH 02 BB 2 ನೋಂದಣಿಯ ರೋಲ್ಸ್ ರಾಯ್ ಕಾರನ್ನು ನಟ ಅಮೀರ್ ಖಾನ್ ಅವರಿಂದ ಒಂದು ವರ್ಷ ಬಳಸಿದ ನಂತರ ಖರೀದಿಸಿದ್ದರೆ, MH 11 AX 1 ನೋಂದಣಿಯ ರೋಲ್ಸ್ ರಾಯ್ ಕಾರನ್ನು ಅಮಿತಾಭ್ ಬಚ್ಚನ್ ಅವರಿಂದ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ. ಸೆಲೆಬ್ರಿಟಿಗಳು ಬಳಸಿದ ಕಾರುಗಳ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇತ್ತೆಂದು ಹೇಳಲಾಗುತ್ತಿದೆ.

ಬಾಬು ಅವರ ಮನೆಯ ಪಾರ್ಕಿಂಗ್‌ನಲ್ಲಿ ಒಟ್ಟು ನಾಲ್ಕು ಐಷಾರಾಮಿ ಕಾರುಗಳಿವೆ. ಅಧಿಕಾರಿಗಳು ಪ್ರತಿಯೊಂದು ಕಾರಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಯಾವಾಗ ಮತ್ತು ಯಾರಿಂದ ಖರೀದಿಸಲಾಯಿತು, ಯಾವ ರಾಜ್ಯದಲ್ಲಿ ನೋಂದಣಿಯಾಗಿದೆ ಮತ್ತು ತೆರಿಗೆಗಳನ್ನು ಪಾವತಿಸಲಾಗಿದೆಯೇ ಎಂಬ ಬಗ್ಗೆ ಕೆಜಿಎಫ್ ಬಾಬು ಅವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಧಿಕಾರಿಗಳು ಕೇಳಿದ ಎಲ್ಲಾ ವಿವರಗಳು ಮತ್ತು ದಾಖಲೆಗಳನ್ನು ಕೆಜಿಎಫ್ ಬಾಬು ಒದಗಿಸುತ್ತಿದ್ದು, ಕಾರುಗಳ ವಿಮೆ ದಾಖಲೆಗಳನ್ನೂ ಪರಿಶೀಲಿಸಲಾಗುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳ ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ – ದಿನೇಶ್ ಪೂಜಾರಿ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರು

ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ಕಾರ್ಕಳ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೋಳ ಗ್ರಾಮ ಪಂಚಾಯತ್ ಮುಂಬಾಗ ಮಾಡಿರುವ ಪ್ರತಿಭಟನೆಯು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸರಣಿ ವೈಫಲ್ಯವನ್ನು ಮರೆಮಾಚಲು ಮಾಡಿರುವ ನಾಟಕವಾಗಿದೆ.

“ನೀವೇ ದುಡಿಯಬಹುದಲ್ಲ?”: ₹12 ಕೋಟಿ ಜೀವನಾಂಶ ಕೋರಿದ್ದ ಮಹಿಳೆಗೆ ಸುಪ್ರೀಂ ತರಾಟೆ!

ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ₹12 ಕೋಟಿ ಜೀವನಾಂಶ, ಬಿಎಂಡಬ್ಲ್ಯೂ ಕಾರು ಮತ್ತು ಮುಂಬೈನಲ್ಲಿ ಮನೆಯನ್ನು ಪರಿಹಾರವಾಗಿ ನೀಡಬೇಕೆಂದು ಕೋರಿದ್ದ ಮಹಿಳೆಯೊಬ್ಬರಿಗೆ, "ತಾವೇ ದುಡಿಯಬಹುದಲ್ಲವೇ?" ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.

ತನಿಖೆಗೂ ಮುನ್ನ ಧರ್ಮಸ್ಥಳದ ತೇಜೋವಧೆ ಸಲ್ಲದು: ಸಿ.ಟಿ. ರವಿ ಎಚ್ಚರಿಕೆ!

ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ನೇಮಕ ಮಾಡಿರುವುದನ್ನು ಸ್ವಾಗತಿಸುವುದಾಗಿ ಬಿಜೆಪಿ ನಾಯಕ ಸಿ.ಟಿ. ರವಿ ತಿಳಿಸಿದ್ದಾರೆ.

ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ಬೆಳಗಾವಿಯಲ್ಲಿ ಆತಂಕ!

ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡ ಆಘಾತಕಾರಿ ಘಟನೆ ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.