spot_img

ಆರ್‌ಬಿಐ ರೆಪೋ ದರ ಮತ್ತೆ ಇಳಿಕೆ: ಗೃಹ ಹಾಗೂ ವಾಹನ ಸಾಲಗಾರರಿಗೆ ತಗ್ಗಿದ ಬಡ್ಡಿದರದಿಂದ ತಾತ್ಕಾಲಿಕ ರಿಲೀಫ್

Date:

spot_img

ನವದೆಹಲಿ, ಏಪ್ರಿಲ್ 9 :ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ತನ್ನ ಹಣಕಾಸು ನೀತಿ ಸಮಿತಿಯ (MPC) ಎರಡನೇ ತ್ರೈಮಾಸಿಕ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೇ.6.25 ರಷ್ಟು ಇತ್ತಿದ್ದ ರೆಪೋ ದರವನ್ನು ಶೇ.6ಕ್ಕೆ ಇಳಿಸುವ ಮೂಲಕ ಗೃಹ ಮತ್ತು ವಾಹನ ಸಾಲಗಾರರಿಗೆ ಭಾಗಶಃ ರಿಲೀಫ್ ನೀಡಿದೆ.

ಇತ್ತೀಚೆಗಷ್ಟೇ ಆರ್‌ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಸಂಜಯ್ ಮಲ್ಲೋತ್ರಾ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಎರಡನೇ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರು ಮಂದಿ ಸದಸ್ಯರನ್ನೊಳಗೊಂಡ ಸಮಿತಿಯು 25 ಬೇಸಿಸ್ ಪಾಯಿಂಟ್ಸ್ ರೆಪೋ ದರ ಇಳಿಸಲು ಒಮ್ಮತದ ತೀರ್ಮಾನ ಕೈಗೊಂಡಿದೆ.

ಇದಕ್ಕೂ ಮುನ್ನ ಮಾರ್ಚ್ ತಿಂಗಳಲ್ಲಿಯ ಮೊದಲ ಹಣಕಾಸು ನೀತಿ ಸಭೆಯಲ್ಲಿಯೂ ಇದೇ ಸಮಿತಿಯು ಶೇ.6.50 ರ ರೆಪೋ ದರವನ್ನು ಶೇ.6.25ಕ್ಕೆ ಇಳಿಸಲು ನಿರ್ಧಾರ ತೆಗೆದುಕೊಂಡಿತ್ತು. ಈ ಕ್ರಮ 2020ರ ಬಳಿಕದ ಮೊದಲ ಬಡ್ಡಿದರ ಇಳಿಕೆಯಾಗಿತ್ತು.

ಹಣಕಾಸು ಮಿತವ್ಯಯ ಹಾಗೂ ಸಾಲದ ಮೇಲೆ ಲಭಿಸುವ ಬಡ್ಡಿದರ ಕಡಿತದ ಪರಿಣಾಮವಾಗಿ ಹಲವು ಬ್ಯಾಂಕುಗಳು ಈಗಾಗಲೇ ತಮ್ಮ ಗೃಹ ಹಾಗೂ ವಾಹನ ಸಾಲಗಳ ಬಡ್ಡಿದರಗಳನ್ನು ಪರಿಷ್ಕರಿಸಿವೆ. ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲಾದ ಬ್ಯಾಂಕುಗಳು ಬಡ್ಡಿದರ ಕಡಿತದ ಘೋಷಣೆ ಮಾಡಿದ್ದು, ಇದೀಗ ಮತ್ತಷ್ಟು ಇಳಿಕೆಯ ನಿರೀಕ್ಷೆಯಿದೆ.

ಬಡ್ಡಿದರ ಇಳಿಕೆಯಿಂದಾಗಿ ಹೊಸ ಗೃಹಸಾಲ ಪಡೆದವರು ಮತ್ತು ಇತ್ತೀಚಿನ ಸಾಲಗಾರರಿಗೆ ತಿಂಗಳ ಮಾಸಿಕ ಕಂತುಗಳಲ್ಲಿ (EMI) ಸ್ವಲ್ಪ ಕಡಿತ ಆಗುವ ಸಾಧ್ಯತೆಯಿದ್ದು, ಈ ಕ್ರಮ ಜನಸಾಮಾನ್ಯರಿಗೆ ತಾತ್ಕಾಲಿಕವಾದ ಆರ್ಥಿಕ ಲಾಭ ನೀಡಲಿದೆ. ಆರ್ಥಿಕ ಚಟುವಟಿಕೆ ಪ್ರೇರೇಪಿಸಲು ಮತ್ತು ಸಾಲದ ಭಾರವನ್ನು ತಗ್ಗಿಸಲು ಆರ್‌ಬಿಐ ಕೈಗೊಂಡಿರುವ ಈ ಕ್ರಮದಿಂದ, ಮುಂದಿನ ದಿನಗಳಲ್ಲಿ ಸಾಲಗಾರರು ನಿಟ್ಟುಸಿರು ಬಿಡುವಂತಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕೊಲಂಬಿಯಾ ವಿಶ್ವವಿದ್ಯಾಲಯದ ಕೃತಕ ಮರಗಳ ತಂತ್ರಜ್ಞಾನ: ಹವಾಮಾನ ಬದಲಾವಣೆ ವಿರುದ್ಧದ ಹೊಸ ಅಸ್ತ್ರ?

ಜಾಗತಿಕ ತಾಪಮಾನ ಏರಿಕೆ ವಿರುದ್ಧ ಹೋರಾಡಲು, ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿ ಕ್ಲಾಸ್ ಲ್ಯಾಕ್ನರ್ ಅವರು "ಕೃತಕ ಮರ" ಎಂಬ ಕಲ್ಪನೆಯನ್ನು ರೂಪಿಸಿದರು.

ಕೂದಲಿನ ಆರೋಗ್ಯಕ್ಕೆ ಕರಿಬೇವು ಮತ್ತು ಕೊಬ್ಬರಿ ಎಣ್ಣೆಯ ಮ್ಯಾಜಿಕ್: ಪರಿಣಾಮಕಾರಿ ಮನೆಮದ್ದು ಇಲ್ಲಿದೆ

ಕೊಬ್ಬರಿ ಎಣ್ಣೆಗೆ ಕರಿಬೇವನ್ನು ಬೆರೆಸಿ ಬಳಸುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ ಮತ್ತು ಕೂದಲು ದಟ್ಟವಾಗಿ, ಕಪ್ಪಾಗಿ, ವೇಗವಾಗಿ ಬೆಳೆಯುತ್ತದೆ.

ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಮೂವರು ಆರೋಪಿಗಳ ಬಂಧನ

ಸ್ಯಾಂಡಲ್‌ವುಡ್ ನಟಿ ರಮ್ಯಾ (ದಿವ್ಯ ಸ್ಪಂದನಾ) ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸೌಜನ್ಯಾ ಸಹಿತ ಧರ್ಮಸ್ಥಳ ಪ್ರಕರಣಗಳ ನ್ಯಾಯಕ್ಕಾಗಿ ಆಗ್ರಹ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಐಡಿಎಸ್‌ಒ ಪ್ರತಿಭಟನೆ

ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿರುವ ಅಪರಾಧ ಪ್ರಕರಣಗಳ ಸಮರ್ಪಕ ತನಿಖೆ ಮತ್ತು ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, ಎಐಡಿಎಸ್‌ಒ ಕರ್ನಾಟಕ ರಾಜ್ಯ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಧರಣಿ ಹಮ್ಮಿಕೊಂಡಿತ್ತು.