
ದಲಿತ ಸಮಾಜಕ್ಕೆ ಅವಮಾನ ಮಾಡುವ ದೃಷ್ಟಿಯಿಂದ ಬಿಲ್ಲವ ಸಂದೇಶ ರವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿದ ಹೇಳಿಕೆಯನ್ನು ತೀರ್ವವಾಗಿ ಖoಡಿಸುತ್ತೇನೆ. ಅವರು ನಿಮ್ಮಂತೆ ಮನುಷ್ಯರೇ, ಆ ಸಮಾಜದ ಹೆಣ್ಣು ಮಗಳು ಇಂದು ಶಾಸಕಿಯಾಗಿರುವುದು ಎಲ್ಲಾ ಮಹಿಳೆಯರಿಗೆ ಸಂದ ಗೌರವ, ಹೀಗಿರುವಾಗ ನಿಮ್ಮ ರಾಜಕೀಯ ತೆವಲಿಗೆ ದಲಿತ ಸಮಾಜದ ಹೆಣ್ಣು ಮಗಳನ್ನು ಕೀಳು ಭಾವನೆಯಲ್ಲಿ ಬಿಂಬಿಸುವುದಲ್ಲದೆ ರಾಷ್ಟ್ರೀಯ ಪಕ್ಷಕ್ಕೆ ಅವಮಾನ ಮಾಡಿರುವುದು ಅಕ್ಷಮ್ಯ ಅಪರಾಧ . ಈ ಕೂಡಲೇ ಕ್ಷಮೆ ಕೇಳದಿದ್ದರೆ ದಲಿತ ಸಂಘಟನೆಯನ್ನು, ಮಹಿಳಾ ಸಂಘಟನೆಯನ್ನು ಸೇರಿಸಿ ಪ್ರತಿಭಟನೆ ಮಾಡುತ್ತೇವೆ. ಜೀವಂತವಾಗಿರುವ ವ್ಯಕ್ತಿಗೆ ಶ್ರದ್ದಾಂಜಲಿ ಹಾಕುವ ತುಚ್ಚ ಮನಸ್ಥಿತಿಗೆ ನಮ್ಮ ದಿಕ್ಕಾರವೆಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.




































