spot_img

ರಕ್ಷಾ ಬಂಧನ ಸೋದರ ಸೋದರಿಯರ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ – ನಿವೃತ್ತ ಕನ್ನಡ ಉಪನ್ಯಾಸಕಿ ನಳಿನಾ ದೇವಿ ಎಂ ಆರ್

Date:

spot_img

ಹಿರಿಯಡ್ಕ : ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯಡ್ಕದ ರೋವರ್ ರೆಂಜರ್ ಘಟಕದ ವತಿಯಿಂದ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಕನ್ನಡ ಉಪನ್ಯಾಸಕಿ ನಳಿನಾ ದೇವಿ ಎಂ ಆರ್ ರವರು “ರಕ್ಷಾ ಬಂಧನ ಕೇವಲ ನೂಲಿನ ದಾರ ಅಷ್ಟೇ ಅಲ್ಲ, ಅದರಲ್ಲಿ ಭಾವನೆ ಅಡಗಿರುತ್ತದೆ . ರಕ್ಷಾ ಬಂಧನದ ಮಹತ್ವ ಏನು ಎಂಬುದನ್ನು ಕ್ರಷ್ಣ ದ್ರೌಪದಿಗೆ ರಕ್ಷೆ ಕಟ್ಟುವುದರ ಮೂಲಕ ಜಗತ್ತಿಗೆ ತೋರಿಸಿದ್ದಾನೆ . ಐತಿಹಾಸಿಕವಾಗಿ ಹಾಗೂ ಪೌರಾಣಿಕವಾಗಿ ಸಹ ಈ ಹಬ್ಬ ಬಹಳ ಮಹತ್ವವನ್ನು ಪಡೆದಿದೆ” ಎಂದು ತಿಳಿಸಿದರು .

ರೋವರ್ ರೇಂಜರ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಮಂಜುನಾಥ್ ಭಟ್ ವಹಿಸಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ದೇವದಾಸ್ ಡಿ ಪ್ರಭು ಮತ್ತು ರೇಂಜರ್ ಘಟಕದ ಸಂಚಾಲಕಿ ಗೀತಾ ಕುಮಾರಿ ಪ್ರಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಉಪನ್ಯಾಸಕರಾದ ಡಾಕ್ಟರ್ ಉದಯ್ ಕುಮಾರ್ , ರೋವರ್ ಘಟಕದ ಸಂಚಾಲಕರಾದ ಮಹೇಶ್ ಕೊಟ್ಟಾರಿ , ಹಳೆ ವಿದ್ಯಾರ್ಥಿ ಶ್ರೀ ಪ್ರದ , ವಿದ್ಯಾರ್ಥಿ ನಾಯಕ ಆಯುಷ್, ನಾಯಕಿ ತ್ರಿಶಾ , ರೇಂಜರ್ ನಾಯಕಿ ಪ್ರತೀಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಸನ್ನಿಧಿ ಸ್ವಾಗತಿಸಿ , ಕುಮಾರಿ ವರ್ಷಿಣಿ ಧನ್ಯವಾದ ಸಲ್ಲಿಸಿದರು , ಕುಮಾರಿ ಅದಿತಿ ಕಾರ್ಯಕ್ರಮ ನಿರೂಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುತ್ತೀರಾ?: ಇಲ್ಲಿದೆ ಆರೋಗ್ಯ ತಜ್ಞರ ಅಭಿಪ್ರಾಯ

ಆರೋಗ್ಯ ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಕೆಲವರಿಗೆ ಪ್ರಯೋಜನವಾದರೆ, ಇನ್ನು ಕೆಲವರಿಗೆ ತೊಂದರೆ ಉಂಟಾಗಬಹುದು.

ಭಾರತದ ವಾಹನ ಮಾರುಕಟ್ಟೆಗೆ ಕ್ವಾಲ್ಕಾಮ್‌ನ ‘ಡಿಜಿಟಲ್ ಚಾಸಿಸ್’: ಸ್ಮಾರ್ಟ್‌ ಕಾರ್‌ಗಳು ಇನ್ನಷ್ಟು ಸುರಕ್ಷಿತ

ಕ್ವಾಲ್ಕಾಮ್ ತನ್ನ ಸ್ನಾಪ್‌ಡ್ರಾಗನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಭಾರತದ ವಾಹನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ.

ವೀರೇಂದ್ರ ಹೆಗ್ಗಡೆಯವರ ಒಳ್ಳೆ ಕೆಲಸ ಕಾಣಿಸುತ್ತಿಲ್ಲವೇ?: ಅಪಪ್ರಚಾರದ ವಿರುದ್ಧ ವಚನಾನಂದ ಶ್ರೀಗಳ ಆಕ್ರೋಶ

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ಹಾವೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಪರವಾಗಿ ಪ್ರಬಲವಾಗಿ ಮಾತನಾಡಿದರು.

ರೀಲ್ಸ್‌ಗಾಗಿ ಈ ಪರಿಯ ಹುಚ್ಚಾಟವೇ? ಉರಿಯುವ ಚಿತೆಯ ಮುಂದೆ ನಗುತ್ತಾ ವಿಡಿಯೋ ಮಾಡಿದ ಯುವತಿ

ಯುವತಿಯೊಬ್ಬಳು ಸ್ಮಶಾನದಲ್ಲಿ ಉರಿಯುತ್ತಿರುವ ಚಿತೆಯ ಮುಂದೆ ನಗುತ್ತಾ ಫೋಸ್ ಕೊಟ್ಟು ವಿಡಿಯೋ ಮಾಡಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ