spot_img

ಪ್ರಯಾಗ್‌ರಾಜ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಣ್ಯಸ್ನಾನ

Date:

ಪ್ರಯಾಗ್‌ರಾಜ್: ಮಹಾಕುಂಭ ಮೇಳದ ಪವಿತ್ರ ಸಂದರ್ಭದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ (ಫೆಬ್ರವರಿ.10) ಪ್ರಯಾಗ್‌ರಾಜ್ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಬೆಳಗಿನ ಜಾವ ಪ್ರಯಾಗ್‌ರಾಜ್‌ಗೆ ಆಗಮಿಸಿದ ರಾಷ್ಟ್ರಪತಿಗಳನ್ನು ಉತ್ತರಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆತ್ಮೀಯವಾಗಿ ಸ್ವಾಗತಿಸಿದರು.

ಪುಣ್ಯಸ್ನಾನಕ್ಕೂ ಮೊದಲು ತ್ರಿವೇಣಿ ಸಂಗಮದ ಹಕ್ಕಿಗಳಿಗೆ ಆಹಾರ ನೀಡಿದ ರಾಷ್ಟ್ರಪತಿ, ನಂತರ ಪವಿತ್ರ ನದಿಯಲ್ಲಿ ಮುಳುಗಿ ಪುಣ್ಯಸ್ನಾನ ನಡೆಸಿದರು. ಸ್ನಾನದ ಬಳಿಕ, ಬಡೇ ಹನುಮಾನ್ ದೇವಾಲಯ ಹಾಗೂ ಅಕ್ಷಯವಟ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

(ಜನವರಿ.13) ರಂದು ಪ್ರಾರಂಭವಾದ ಮಹಾಕುಂಭ ಮೇಳ (ಫೆಬ್ರವರಿ.26) ರಂದು ಮಹಾಶಿವರಾತ್ರಿಯೊಂದಿಗೆ ಸಮಾಪನವಾಗಲಿದೆ. ಈವರೆಗೆ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನಗೈದು ಪುಣ್ಯ ಪಡೆದಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸಾವರ್ಕರ್ ವಿರುದ್ಧ ಸುಳ್ಳು ಆರೋಪ ಸಾಬೀತುಪಡಿಸಿ, ಇಲ್ಲದಿದ್ದರೆ ರಾಜೀನಾಮೆ ನೀಡಿ: ಸಿದ್ದರಾಮಯ್ಯಗೆ ಛಲವಾದಿ ನಾರಾಯಣಸ್ವಾಮಿ ಸವಾಲು

"ಡಾ. ಅಂಬೇಡ್ಕರ್ ಅವರನ್ನು ವೀರ ಸಾವರ್ಕರ್ ಸೋಲಿಸಿದರು" ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಗುಡ್ ಬ್ಯಾಡ್ ಅಗ್ಲಿ’ ಹಿಟ್ ಆಗುತ್ತಿದ್ದಂತೇ ಕಾನೂನು ಸಂಕಷ್ಟ! ಇಳಯರಾಜರಿಂದ ಅಜಿತ್ ಚಿತ್ರತಂಡಕ್ಕೆ ನೋಟೀಸ್

ಟಾಲಿವುಡ್ ಸೂಪರ್ ಸ್ಟಾರ್ ಅಜಿತ್ ಕುಮಾರ್ ಅಭಿನಯಿಸಿರುವ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ನಡೆಸುತ್ತಿರುವ ನಡುವೆಯೇ ಕಾನೂನು ಸವಾಲನ್ನು ಎದುರಿಸಿದೆ.

ದಿನ ವಿಶೇಷ – ಭಾರತದಲ್ಲಿ ಮೊದಲು ರೈಲು ಓಡಿದ ದಿವಸ

ಭಾರತದ ಬಹು ಮುಖ್ಯ ಭಾಗವಾಗಿ ಗುರುತಿಸಿಕೊಂಡಿರುವುದು ರೈಲು ವ್ಯವಸ್ಥೆ.1853 ರ ಏಪ್ರಿಲ್ 16 ರಂದು, ಮೊದಲ ಪ್ರಯಾಣಿಕ ರೈಲು ಮುಂಬಯಿಯ ಬೋರಿ ಬಂದರ್ ಮತ್ತು ಥಾಣೆ ನಡುವೆ 34 ಕಿ.ಮೀ ದೂರದಲ್ಲಿ ಓಡಿತು.

ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್ ಸ್ಫೋಟದ ಬೆದರಿಕೆಯ ಇಮೇಲ್: ಭದ್ರತೆ ಹೆಚ್ಚಳ, ತನಿಖೆ ಪ್ರಾರಂಭ

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರವನ್ನು ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬಂದ ಬೆದರಿಕೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸೈಬರ್ ಪೊಲೀಸರಿಂದ ತನಿಖೆ ಆರಂಭವಾಗಿದೆ.