spot_img

ಉಡುಪಿ ಶ್ರೀಕೃಷ್ಣ ಮಠದ ಮುಂಭಾಗದಲ್ಲಿ ಪ್ರಿ ವೆಡ್ಡಿಂಗ್ ಚಿತ್ರೀಕರಣ ನಿಷೇಧ!

Date:

ಉಡುಪಿ: ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಹಾಗೂ ದೇವಸ್ಥಾನದ ಮುಂಭಾಗದಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ನಿಷೇಧಿಸಲಾಗಿದೆ. ಪರ್ಯಾಯ ಪುತ್ತಿಗೆ ಮಠದಿಂದ ಈ ನಿಷೇಧದ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

“ದೇವಾಲಯಗಳ ರಥಬೀದಿಗಳು ಪವಿತ್ರತೆ ಮತ್ತು ಶ್ರದ್ಧೆಯ ಪ್ರತೀಕವಾಗಿವೆ. ಅಲ್ಲಿ ಉತ್ಸವ, ಭಜನೆ, ಪೀಠಾಧಿಪತಿಗಳ ಸಂಚರಣೆ ನಡೆಯುತ್ತದೆ. ಆ ಜಾಗದಲ್ಲಿ ಪ್ರೀತಿಯ ದೃಶ್ಯಗಳು ಅಥವಾ ಅಶಿಸ್ತು ವಿಡಿಯೋಗಳನ್ನು ಶೂಟ್ ಮಾಡುವುದರಿಂದ ಪವಿತ್ರತೆಯ ಅವಮಾನವಾಗುತ್ತಿದೆ” ಎಂದು ಮಠದ ವಿದ್ವಾನ್ ಗೋಪಾಲ ಆಚಾರ್ಯರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ, ಪರ್ಯಾಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥರು ಈ ಕೃತ್ಯವನ್ನು ಖಂಡಿಸಿ, ಮಠದ ಎಲ್ಲಾ ಭಕ್ತ ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದು, ಇನ್ನುಮುಂದೆ ಮಠದ ಮುಂಭಾಗ, ರಥದ ಬಳಿ ಮತ್ತು ರಥಬೀದಿಯಲ್ಲಿ ಯಾವುದೇ ರೀತಿಯ ಪ್ರಿ ವೆಡ್ಡಿಂಗ್ ಚಿತ್ರೀಕರಣ ನಿಷಿದ್ಧವಾಗಿದೆ ಎಂದು ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶೃಂಗೇರಿ ಮಠದ ಬಳಿ ಅನುಮಾನಾಸ್ಪದ ಜೋಡಿ: ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಹಸ್ತಾಂತರ

ಈ ಘಟನೆಗೆ ಪೊಲೀಸರು ತಕ್ಷಣ ಪ್ರತಿಕ್ರಿಯಿಸಿ, ಜೋಡಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ತನಿಖೆ ನಡೆಸುತ್ತಿದ್ದಾರೆ

ಜಿಲ್ಲೆಯ ಸಂಸದರು ಮತ್ತು ಶಾಸಕರೊಂದಿಗೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸಮಾಲೋಚನೆ : ಜೂ.16ರಂದು ಜವಾಬ್ದಾರಿ ಸ್ವೀಕಾರ

ಜೂ.16ರಂದು ಬೆಳಿಗ್ಗೆ 11.30ಕ್ಕೆ ನೂತನ ಜಿಲ್ಲಾಧ್ಯಕ್ಷರ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮವು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಲಿದೆ

ನೀಟ್-2025ರ ಫಲಿತಾಂಶ ಜ್ಞಾನಸುಧಾದ 20 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಜನರಲ್ ಮೆರಿಟ್ ನಲ್ಲಿ ಹತ್ತು ಸಾವಿರದೊಳಗಿನ ರ‍್ಯಾಂಕ್

ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಸಿದ್ದಾರೆ.

ಹೋಂ ಮಿನಿಸ್ಟರ್ ಪರಮೇಶ್ವರ್ ಕೋಟ ಪೊಲೀಸ್ ಠಾಣೆಗೆ ಸರ್ಪ್ರೈಸ್ ವಿಸಿಟ್

ಗೃಹ ಸಚಿವರು ಠಾಣೆಯ ರಿಜಿಸ್ಟರ್ ಪುಸ್ತಕವನ್ನು ಪರಿಶೀಲಿಸಿ, ಅಲ್ಲಿ ದಾಖಲಾಗಿದ್ದ ಕೆಲವು ದೂರುಗಳ ಬಗ್ಗೆ ವಿವರ ತಿಳಿದುಕೊಂಡರು