
ಉಡುಪಿ: ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಹಾಗೂ ದೇವಸ್ಥಾನದ ಮುಂಭಾಗದಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ನಿಷೇಧಿಸಲಾಗಿದೆ. ಪರ್ಯಾಯ ಪುತ್ತಿಗೆ ಮಠದಿಂದ ಈ ನಿಷೇಧದ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.
“ದೇವಾಲಯಗಳ ರಥಬೀದಿಗಳು ಪವಿತ್ರತೆ ಮತ್ತು ಶ್ರದ್ಧೆಯ ಪ್ರತೀಕವಾಗಿವೆ. ಅಲ್ಲಿ ಉತ್ಸವ, ಭಜನೆ, ಪೀಠಾಧಿಪತಿಗಳ ಸಂಚರಣೆ ನಡೆಯುತ್ತದೆ. ಆ ಜಾಗದಲ್ಲಿ ಪ್ರೀತಿಯ ದೃಶ್ಯಗಳು ಅಥವಾ ಅಶಿಸ್ತು ವಿಡಿಯೋಗಳನ್ನು ಶೂಟ್ ಮಾಡುವುದರಿಂದ ಪವಿತ್ರತೆಯ ಅವಮಾನವಾಗುತ್ತಿದೆ” ಎಂದು ಮಠದ ವಿದ್ವಾನ್ ಗೋಪಾಲ ಆಚಾರ್ಯರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ, ಪರ್ಯಾಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥರು ಈ ಕೃತ್ಯವನ್ನು ಖಂಡಿಸಿ, ಮಠದ ಎಲ್ಲಾ ಭಕ್ತ ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದು, ಇನ್ನುಮುಂದೆ ಮಠದ ಮುಂಭಾಗ, ರಥದ ಬಳಿ ಮತ್ತು ರಥಬೀದಿಯಲ್ಲಿ ಯಾವುದೇ ರೀತಿಯ ಪ್ರಿ ವೆಡ್ಡಿಂಗ್ ಚಿತ್ರೀಕರಣ ನಿಷಿದ್ಧವಾಗಿದೆ ಎಂದು ತಿಳಿಸಿದ್ದಾರೆ.