
ಉಡುಪಿ: ಶ್ರೀ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಂಗವಾಗಿ ಜುಲೈ 13 ರಂದು ನಡೆಯಲಿರುವ ಸಾಂಪ್ರದಾಯಿಕ ಕಟ್ಟಿಗೆ ಮುಹೂರ್ತ ಹಾಗೂ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆಯುವ ಪೇಜಾವರ ಶ್ರೀಪಾದರ ಚಾತುರ್ಮಾಸ್ಯ ಕಾರ್ಯಕ್ರಮಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಆಹ್ವಾನಿಸಲು ಶೀರೂರು ಮಠದ ಪಾರ್ಪತ್ತಿಗಾರರಾದ ವಿ. ಶ್ರೀಶ ಭಟ್ ಕಡೇಕಾರ್ ಮತ್ತು ಆನಂದ ಭಟ್ ಹೇರೂರು ರವರು ವಿಶೇಷವಾಗಿ ಭೇಟಿಯಾಗಿ ಆಹ್ವಾನ ಪತ್ರಿಕೆಯನ್ನು ನೀಡಿ ಆಮಂತ್ರಿಸಿದರು.
