
ಉಡುಪಿ: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾರ್ಚ್19ರವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಕೆ.ಜಿ. ರಾಘವೇಂದ್ರ ತಂತ್ರಿ ಮತ್ತು ಅರ್ಚಕ ಪಿ. ಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ಜಾತ್ರಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆಯಲಿದೆ.
ಪ್ರಮುಖ ದಿನಗಳ ಕಾರ್ಯಕ್ರಮಗಳು:
🔸 ಮಾ. 13: ಧ್ವಜಾರೋಹಣ, ಅಗ್ನಿಜನನ, ಹೋಮ, ಮಹಾಪೂಜೆ, ದೀಪಾರಾಧನೆ, ಉತ್ಸವ ಬಲಿ
🔸 ಮಾ. 14: ಮೀನ ಸಂಕ್ರಮಣ, ಕಲಶಾಭಿಷೇಕ, ಗರುಡವಾಹನ, ತೆಪ್ಪೋತ್ಸವ, ರಥೋತ್ಸವ
🔸 ಮಾ. 15: ವಸಂತೋತ್ಸವ, ಬೆಳ್ಳಿ ಪಲ್ಲಕ್ಕಿ, ಚಂದ್ರಮಂಡಲ ರಥ
🔸 ಮಾ. 16: ರಥಾರೋಹಣ, ಶ್ರೀ ಮಹಾರಥೋತ್ಸವ, ಪಲ್ಲಕ್ಕಿ ಉತ್ಸವ
🔸 ಮಾ. 17: ಅವಭೃಥ ಸ್ನಾನ, ಆರಾಟೋತ್ಸವ, ಪೂರ್ಣಾಹುತಿ, ಧ್ವಜಾವರೋಹಣ
🔸 ಮಾ. 18: ಪುಣ್ಯಾಹವಾಚನ, ಮಹಾಪೂಜೆ, ಓಕುಳಿಯಾಟ
🔸 ಮಾ. 19: ಬ್ರಹ್ಮಕುಂಭಾಭಿಷೇಕ, ಮಹಾಮಂತ್ರಾಕ್ಷತೆ, ಪರಿವಾರ ದೈವಗಳ ಪೂಜೆ
ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಗುರುರಾಜ್ ಪಿ.ಆರ್. ತಿಳಿಸಿದ್ದಾರೆ.