spot_img

ಆಪರೇಷನ್ ಸಿಂದೂರದ ನಂತರವೂ ಪಾಕಿಸ್ಥಾನದ ದ್ವೇಷ ನೀತಿ ಮುಂದುವರಿಕೆ : ಎಲ್‌ಒಸಿ ಬಳಿ ಗೈಡ್ ಆಗಿದ್ದ ಆರೀಫ್ ನನ್ನು ಬಂಧಿಸಿದ ಸೇನೆ !

Date:

spot_img

ಜಮ್ಮು : ಭಾರತದೊಂದಿಗೆ ಉತ್ತಮ ಸಂಬಂಧಗಳನ್ನು ಕೇವಲ ಮಾತಿನಲ್ಲಿ ಮಾತ್ರ ಪ್ರದರ್ಶಿಸುತ್ತಿರುವ ಪಾಕಿಸ್ಥಾನ, ತನ್ನ ಹಳೆಯ ಆಟವನ್ನೇ ಮುಂದುವರೆಸಿದೆ. ಜಮ್ಮು-ಕಾಶ್ಮೀರದ ಪೂಂಛ್ ಸೆಕ್ಟರ್‌ನ ಎಲ್‌ಒಸಿ ಬಳಿ ದೇಶದೊಳಗೆ ಉಗ್ರರನ್ನು ನುಸುಳಿಸಲು ಯತ್ನಿಸಿದ ಪಾಕಿಸ್ತಾನಿ ವ್ಯಕ್ತಿಯನ್ನು ಭಾರತೀಯ ಸೇನೆ ಬಂಧಿಸಿರುವ ಘಟನೆ ಇದಕ್ಕೆ ಸಾಕ್ಷಿಯಾಗಿದೆ.

ಬಂಧಿತ ವ್ಯಕ್ತಿಯನ್ನು ಪಿಒಕೆ ನಿವಾಸಿ ಮೊಹಮ್ಮದ್ ಆರೀಫ್ ಎಂದು ಗುರುತಿಸಲಾಗಿದೆ. ಆತನ ವಿಚಾರಣೆ ವೇಳೆ ಆತ ಉಗ್ರರ ಮಾರ್ಗದರ್ಶಕನಾಗಿದ್ದದ್ದನ್ನೂ ಒಪ್ಪಿಕೊಂಡಿದ್ದಾನೆ. ನಾಲ್ವರು ಜೈಶ್ ಎ ಮೊಹಮ್ಮದ್ ಉಗ್ರರನ್ನು ಭಾರತದಲ್ಲಿ ನುಸುಳಿಸಲು ಆರೀಫ್ ಸಹಾಯ ಮಾಡುತ್ತಿದ್ದ. ಆದರೆ ಗಡಿಯತ್ತ ಗಮನ ಹರಿಸಿಕೊಂಡಿದ್ದ ಭಾರತೀಯ ಸೇನೆ ಆತನು ನುಸುಳುತ್ತಿರುವಾಗಲೇ ಹಿಡಿದಿಟ್ಟಿದೆ. ಈ ವೇಳೆ ಉಗ್ರರು ಪಾಕ್ ಭಾಗದ ಆಳವಾದ ಕಮರಿಗೆ ಜಿಗಿದು ಪರಾರಿಯಾಗಿದ್ದಾರೆ.

ಸೈನಿಕರ ಪ್ರಕಾರ, ಕಮರಿಯಲ್ಲಿರುವ ರಕ್ತದ ಕಲೆಗಳು ಅವನು ಗಾಯಗೊಂಡಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿವೆ. ಪಾಕಿಸ್ತಾನಿ ಗಡಿಯಲ್ಲಿ ಸೇನೆಯ ಪೋಸ್ಟ್ ಇದ್ದ ಕಾರಣ, ಆ ಉಗ್ರರ ಮೇಲೆ ಗುಂಡಿನ ದಾಳಿ ಸಾಧ್ಯವಾಗಲಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ. ಬಂಧಿತ ಆರೀಫ್ ಹೇಳಿಕೆ ಪ್ರಕಾರ, ಪಾಕ್ ಸೇನೆಯ ಆದೇಶದ ಮೇರೆಗೆ ಈ ತಂತ್ರ ಜಾರಿಯಲ್ಲಿತ್ತು.

ಸಾರ್ಕ್‌ಗೆ ಪರ್ಯಾಯ ರಚನೆ? ಚೀನ, ಪಾಕಿಸ್ಥಾನದ ಹೊಸ ಯತ್ನ
ಚೀನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ಇತ್ತೀಚೆಗೆ ಕುನ್ಮಿಂಗ್ ನಲ್ಲಿ ನಡೆದ ತ್ರಿಪಕ್ಷೀಯ ಸಭೆಯಲ್ಲಿ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಯಾದ ಸಾರ್ಕ್‌ಗೆ ಬದಲಿ ಸಂಘಟನೆ ಸ್ಥಾಪನೆ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ನವೀನ ಸಂಘಟನೆಗೆ ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಆಫ್ಘಾನಿಸ್ತಾನವನ್ನು ಕೂಡ ಸೇರಿಸಲು ಯೋಜನೆ ರೂಪಿಸಲಾಗಿದೆ.

ಭಾರತದ ವಿರುದ್ಧ ರಾಜತಾಂತ್ರಿಕ ಮಟ್ಟದಲ್ಲಿ ಒತ್ತಡ ಹೇರುವ ಉದ್ದೇಶವೇ ಈ ಹೊಸ ಬಳಗದ ಹಿಂದೆ ಇರುವ ಪ್ರಮುಖ ಕಾರಣವೆನ್ನಲಾಗುತ್ತಿದೆ. ಇಂಥ ಹುನ್ನಾರಗಳು ಭಾರತಕ್ಕೆ ಹೊಸ ಆತಂಕವನ್ನು ಉಂಟುಮಾಡಬಹುದಾದ ಸಾಧ್ಯತೆಯಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ತೆಲುಗು ಹಾಸ್ಯ ನಟ ಫಿಶ್ ವೆಂಕಟ್ ವಿಧಿವಶ: ಚಿತ್ರರಂಗಕ್ಕೆ ಆಘಾತ

ತಮ್ಮ ಹಾಸ್ಯ ಪಾತ್ರಗಳಿಂದಲೇ ತೆಲುಗು ಚಿತ್ರರಂಗದಲ್ಲಿ ಮನೆಮಾತಾಗಿದ್ದ ಜನಪ್ರಿಯ ನಟ ಫಿಶ್ ವೆಂಕಟ್ ಇಂದು ನಿಧನರಾಗಿದ್ದಾರೆ.

ತಮ್ಮದೇ ಸರಕಾರದ ವೈಫಲ್ಯದ ವಿರುದ್ಧ ಪ್ರತಿಭಟನೆ ಮಾಡಿದ ಉಡುಪಿ ಕಾಂಗ್ರೆಸ್ ಮುಖಂಡರಿಗೆ ಅಭಿನಂದನೆಗಳು : ದಿನೇಶ್ ಅಮೀನ್ ಲೇವಡಿ

ಉಡುಪಿ ಕಾಂಗ್ರೆಸ್ ಪಕ್ಷದ ಮುಖಂಡರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ತಮ್ಮದೇ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪರಿಸ್ಥಿತಿಗೆ ಬಿಜೆಪಿ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್ ವ್ಯಂಗ್ಯವಾಡಿದ್ದಾರೆ.

ಡಾಮಿನೋಸ್ ಪಿಜ್ಜಾಗೆ ದೊಡ್ಡ ದಂಡ: ಸಸ್ಯಾಹಾರಿ ಗ್ರಾಹಕನಿಗೆ ಮಾಂಸಾಹಾರ ನೀಡಿ ಭಾರೀ ಬೆಲೆ ತೆತ್ತ ಪಿಜ್ಜಾ ಕಂಪನಿ

ಸಸ್ಯಾಹಾರಿ ವ್ಯಕ್ತಿಯೊಬ್ಬರಿಗೆ ಮಾಂಸಾಹಾರಿ ಪಿಜ್ಜಾ ವಿತರಿಸಿದ ಪ್ರಕರಣದಲ್ಲಿ, ಧಾರವಾಡದ ಡಾಮಿನೋಸ್ ಪಿಜ್ಜಾ ಮಳಿಗೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹50,000 ದಂಡ ವಿಧಿಸಿದೆ.

ಜ್ಯಾಕ್ ಡಾರ್ಸೆ ಪರಿಚಯಿಸಿದ ‘ಬಿಟ್ಚಾಟ್’: ಇಂಟರ್ನೆಟ್ ಇಲ್ಲದೆ ಚಾಟ್ ಮಾಡುವ ಹೊಸ ಯುಗ!

ಟ್ವಿಟರ್ ಸಹ-ಸಂಸ್ಥಾಪಕ ಮತ್ತು ಬ್ಲಾಕ್ ಕಂಪನಿಯ ಸಿಇಒ ಜ್ಯಾಕ್ ಡಾರ್ಸೆ ಈಗ ಮತ್ತೊಂದು ಮಹತ್ವದ ತಂತ್ರಜ್ಞಾನ ಆವಿಷ್ಕಾರದೊಂದಿಗೆ ಮುಂಚೂಣಿಗೆ ಬಂದಿದ್ದಾರೆ. ಇಂಟರ್ನೆಟ್ ಅಥವಾ ಮೊಬೈಲ್ ನೆಟ್‌ವರ್ಕ್ ಇಲ್ಲದೆಯೂ ಸಂವಹನ ನಡೆಸಲು ಸಾಧ್ಯವಾಗುವ "ಬಿಟ್ಚಾಟ್" ಎಂಬ ಹೊಸ ಚಾಟ್ ಅಪ್ಲಿಕೇಶನ್ ಅನ್ನು ಅವರು ಅಭಿವೃದ್ಧಿಪಡಿಸಿದ್ದಾರೆ.