spot_img

ಭಾರತದ ಕ್ಷಿಪಣಿ ದಾಳಿಗೆ ಬೆಚ್ಚಿಬಿದ್ದ ಪಾಕಿಸ್ತಾನ !ಪಾಕ್ ನ ಎಲ್ಲಾ ವಿಮಾನ ಸಂಚಾರ ಸ್ಥಗಿತ!

Date:

spot_img
spot_img

ಹೊಸದಿಲ್ಲಿ: ಪಾಕಿಸ್ತಾನ ಭಾರತದ ಗಡಿ ರಾಜ್ಯಗಳಾದ ಜಮ್ಮು-ಕಾಶ್ಮೀರ, ರಾಜಸ್ಥಾನ, ಪಂಜಾಬ್ ಮತ್ತು ಗುಜರಾತ್‌ನ 26 ಗಡಿ ನಗರಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ, ಭಾರತ ಶನಿವಾರ ಮುಂಜಾನೆ ಪಾಕಿಸ್ತಾನಕ್ಕೆ ತೀವ್ರ ಪ್ರತಿದಾಳಿ ನಡೆಸಿದೆ.

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಕೇವಲ 10 ಕಿಲೋಮೀಟರ್ ದೂರದಲ್ಲಿರುವ, ದೇಶದ ಪ್ರಮುಖ ಸೇನಾ ನೆಲೆಗಳ ಪೈಕಿ ಒಂದಾದ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ, ಮತ್ತು ಚಕ್ವಾಲ್ ಜಿಲ್ಲೆಯ ಮುರಿದ್ ವಾಯುನೆಲೆ, ಜಾಂಗ್ ಜಿಲ್ಲೆಯ ರಫಿಕಿ ವಾಯುನೆಲೆ ಸೇರಿದಂತೆ ನಾಲ್ಕು ವಾಯುನೆಲೆಗಳ ಮೇಲೆ ಭಾರತವು ಕ್ಷಿಪಣಿ ದಾಳಿ ನಡೆಸಿದ ಮಾಹಿತಿ ಬಂದಿದೆ.

ಈ ದಾಳಿಯಿಂದ ಪಾಕಿಸ್ತಾನದಲ್ಲಿ ಭಾರಿ ಆತಂಕ ಉಂಟಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ, ನೂರ್ ಖಾನ್ ವಾಯುನೆಲೆಯಲ್ಲಿ ಸ್ಫೋಟ, ಬೆಂಕಿ, ಜನರ ಗದ್ದಲಗಳು, ಹಾಗೂ ಸತತ ಸ್ಫೋಟಗಳ ದೃಶ್ಯಗಳು ಕಾಣಿಸುತ್ತಿವೆ. ಈ ಘಟನೆಯ ಬಳಿಕ ಪಾಕಿಸ್ತಾನ ತಕ್ಷಣವೇ ತನ್ನ ಇಸ್ಲಾಮಾಬಾದ್, ಲಾಹೋರ್, ಸಿಯಾಲ್‌ಕೋಟ್, ರಹೀಮ್ ಖಾನ್ ವಾಯುನೆಲೆಗಳಲ್ಲಿ ನಾಗರಿಕ ಮತ್ತು ವಾಣಿಜ್ಯ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ನೂರ್ ಖಾನ್ ವಾಯುನೆಲೆ, ಹಿಂದಿನ ಚಕ್ಲಾಲಾ ಏರ್‌ಬೇಸ್, ಪಾಕಿಸ್ತಾನದ ಅತ್ಯಂತ ಪ್ರಮುಖ ಮತ್ತು ರಹಸ್ಯ ಮಿಲಿಟರಿ ನೆಲೆಗಳಲ್ಲಿ ಒಂದಾಗಿದ್ದು, ಇತರ ಮಿಲಿಟರಿ ಘಟಕಗಳ ಜೊತೆಗೆ ವಿಐಪಿ ವಿಮಾನ ಸಂಚಾರಕ್ಕೂ ಬಳಸಲಾಗುತ್ತದೆ.

ಡ್ರೋನ್ ದಾಳಿಯ ನೇರ ಪರಿಣಾಮವಾಗಿ ಭಾರತದ ವಾಣಿಜ್ಯ ವಿಮಾನಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಪಾಕ್ ಆರೋಪಿಸಿದ್ದ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿರುವುದರಿಂದ, ಎರಡು ರಾಷ್ಟ್ರಗಳ ನಡುವಿನ ವಾತಾವರಣ ಮತ್ತಷ್ಟು ಉದ್ವಿಗ್ನವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಬಡತನ ನಿರ್ಮೂಲನೆಗಾಗಿ ಅಂತಾರಾಷ್ಟ್ರೀಯ ದಿನ

ಪ್ರತಿ ವರ್ಷ ಅಕ್ಟೋಬರ್ 17 ರಂದು ಜಗತ್ತಿನಾದ್ಯಂತ 'ಬಡತನ ನಿರ್ಮೂಲನೆಗಾಗಿ ಅಂತಾರಾಷ್ಟ್ರೀಯ ದಿನ' (International Day for the Eradication of Poverty) ವನ್ನು ಆಚರಿಸಲಾಗುತ್ತದೆ.

ಸರ್ಕಾರಿ ಶಾಲೆ ಉಳಿಯಲಿ ಬೆಳೆಯಲಿ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ

ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಪೆರ್ವಾಜೆ ಸರ್ಕಾರಿ ಪ್ರೌಢಶಾಲೆಗೆ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ SDMC ಪ್ರಶಸ್ತಿ ಲಭಿಸಿತು.

ದೀಪಾವಳಿ ಪ್ರಯುಕ್ತ: ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘದಿಂದ ಕೊಂಡಾಡಿ ಭಜನೆಕಟ್ಟೆಯಲ್ಲಿ ಗೂಡುದೀಪ ಸ್ಪರ್ಧೆ

ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆ, ಹಿರಿಯಡಕ ಇವರ ವತಿಯಿಂದ ಗೂಡುದೀಪ ಸ್ಪರ್ಧೆಯು ನಡೆಯಲಿದೆ.

ನೋಡೋಕಷ್ಟೆ ಮುಳ್ಳು; ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಪಾಪಸ್​ ಕಳ್ಳಿ!

ಪಾಪಸ್ ಕಳ್ಳಿ (Cereus Night Bloom Cactus) ನೋಡುವುದಕ್ಕೆ ಮುಳ್ಳುಗಳಿಂದ ಕೂಡಿದ್ದರೂ, ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.