
ಕಾರ್ಕಳ : ಕ್ರಿಯೇಟಿವ್ ಕಾಲೇಜ್ ನಲ್ಲಿ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಮನದಾಳದ ಮುತ್ತುಗಳು ಕೃತಿ ಬಿಡುಗಡೆ ಸಮಾರಂಭದಲ್ಲಿ ಶ್ರೀ ಭುವನೇಂದ್ರ ಕಾಲೇಜಿನ ನಿವೃತ ಪ್ರಿನ್ಸಿಪಾಲ್ ಪದ್ಮನಾಭ ಗೌಡರು ಭುವನೇಂದ್ರ ಕಾಲೇಜ್ ನ ಹಳೆ ವಿದ್ಯಾರ್ಥಿ, ಭಾರತೀಯ ಸ್ಟೇಟ್ ಬ್ಯಾಂಕ್ ನ ನಿವೃತ ಪ್ರಬಂಧಕ ಆರ್. ರಮೇಶ್ ಪ್ರಭುರವರು ರಚಿಸಿದ ಮನದಾಳದ ಮುತ್ತುಗಳು ಕೃತಿಯ ಬಗ್ಗೆ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿದಾಗ ಮಾತ್ರ ಉತ್ತಮ ಕೃತಿ ಮೂಡಿಬರಲು ಸಾಧ್ಯ ಎಂದರು, ಇಂದಿನ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಈ ಪುಸ್ತಕ ಉಪಯುಕ್ತವೆಂದರು, ಸಮೇಳನದ ಅಧ್ಯಕ್ಷತೆಯನ್ನು ಎಸ್. ವಾಸುದೇವ ಭಟ್ ವಹಿಸಿದ್ದು ಕೃತಿಗೆ ಶುಭ ಹಾರೈಸಿದರು.
ಇದೇ ಸಮಾರಂಭದಲ್ಲಿ ಭುವನೇಂದ್ರ ಕಾಲೇಜ್ ನ ಉಪನ್ಯಾಸಕಿ ಮಾಲತಿ ಪ್ರಭುರವರ ನನ್ನೊಳಗಿನ ನಾನು ಕೃತಿ ಹಾಗೂ ಶ್ರೀಧರ ಗೊರೆ ನೆಲ್ಯಾಡಿಯವರ ಡ್ರೆಷ್ಕಣ ಸಂಚಯ ಫಲ ಬಿಡುಗಡೆಗೊಂಡವು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಸ್ವಾಗತಿಸಿದರು, ಗಣೇಶ್ ಜಾಲಸೂರ್, ಕ್ರಿಯೇಟಿವ್ ಕಾಲೇಜಿನ ಕನ್ನಡ ಉಪನ್ಯಾಸಕ ಶಿವಕುಮಾರ್, ನಿರ್ವಹಣಾಧಿಕಾರಿ ಸುನಿಲ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು, ನಲ್ಲೂರಿನ ಶಿಕ್ಷಕ ನಾಗೇಶ್ ರವರು ನಿರ್ದೇಸಿದರು.



































